Home / ಕವನ / ಕವಿತೆ / ಯೆಂಡಕ್ಕ್ ತರಪ್ಣ

ಯೆಂಡಕ್ಕ್ ತರಪ್ಣ

ಜೀತಾ ಮಾಡಿ ಕಾಸ್ ಕೆರ್‍ಕೊಂಡಿ
ಅಟ್ಟೀಲ್ ಎಡ್ತೀನ್ ಮೋಸೋಸ್ಕಂಡಿ
ಏನೋ ಕುಡಿಯಾಕ್ ಬಂದ್ರೆ-
ಸೇರಿಗ್ ಸೇರು ನೀರ್‍ನೆ ಬೆರಸಿ
ಕಾಸ್ ಕೇಳ್ತೀಯ ಮೋಸ ಮರಸಿ
ಸಾಚಾ ಮನ್ಸರ್ ಬಂದ್ರೆ? ೧

ನನ್ ಕೈ ಕಾಸು! ನಂಗ್ ಔಳ್ ಎಡ್ತಿ!
ಮೋಸ ಮಾಡ್ತೀನ್ ನಾನ್ ಔಳ್ಗ್ ಇಡ್ದಿ!
ಆಮಾತ್ ಅತ್ತಾಗ್ ಬುಡ್ಲಿ!
ಕೂಸೂ ಕೊಟ್ಕೊಂಡ್ ತೆಪ್ಗೆ ತಣ್ಗೆ
ನಿನ್ ಕೈಲ್ ಮೋಸ ವೋಗೋದ್ ನನ್ಗೆ
ಮಾನದ್ ಬುಡಕೆ ಕೊಡ್ಲಿ! ೨

ಯೆಂಡ ಮಾರೋರ್ ಎಲ್ರೂ ಯಿಂಗೇ
ಮೋಸ ಮಾಡ್ತಾರಂತ ನಂಗೆ
ನೀನೇಳ್ಬೇಕ! ನನ್ಗೂ!
ದುಡ್ಡಿನ್ ರುಚಿ ಕಂಡೋರ್ ನಿಂಗೆ
ಎಸ್ಟ್ ಏಳಿದ್ರೇನ್ ನಾವೂ ಸುಂಕೆ?
ಒಬ್ಬನ್ ಚಾಲೇ ಮನ್ಗೂ! ೩

ಕುಡಿಯೋ ನನ ಬಾಯ್ಗ್ ಇನ್ಮೇಲ್ ಬೀಗ
ಆಕ್ತೀನ್ ಅಂತ ಯೋಳ್ತಿನೀಗ
ಎದೇಗ್ ಕೈನ ತಾಕ್ಸಿ!
ಈ ಮಾತ್ ಓದ್ರೆ ಮಾನಕ್ ತೊಂದ್ರೆ!
ರತ್ನನ್ ಮಾತಿನ್ ತೂಕೀಗಂದ್ರೆ
ರತ್ನನ್ ಎಸರೆ ಸಾಕ್ಸಿ! ೪

ಯೋಳ್ತೀನ್ ಕೈನ ಎದೆಮೇಲಿಟ್ಟಿ-
ಈವೊತ್ನಿಂದ ಯೆಂಡ ಬುಟ್ಟೆ
ಮಾನಕ್ ಬದಕ್ಬೇಕಂತ!
ಮನಸ ಮಾನ ಎಂಗೈತೇಂತ
ಗೊತ್ತಿಲ್ದೆ ನಾನೂ ಇವ್ನೀಂತ
ಎಂಗೋ ಇದ್ರೆ ಬಂತ! ೫

ಪ್ರಾಣಕ್ಕಿಂತ ಯೆಂಡ ಯೆಚ್ಚು!
ಯೆಂಡಕ್ಕಿಂತ ಮಾನ ಯೆಚ್ಚು!
ಯೆಂಡದ್ ಮುನಿಯ! ಜಿಪ್ಣ!
ಮಾನದ್ ಮುಂದೆ ಯಾವ್ದ್ ಏನೈತೆ?
ತಕ್ಕೊ! ಕೊಡ್ತೀನ್ ಈಗ್ ಬರತೈತೆ
ಆಳ್ ಯೆಂಡಕ್ಕೆ ತರಪ್ಣ! ೬
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...