ಆರತಿ

ಅಂತರಾತ್ಮದ ದೀಪ ಎತ್ತುವೆ
ಕಣ್ಣು ಕರ್‍ಪುರ ಬೆಳಗುವೆ
ಜ್ಞಾನ ಕೆಂಡಕೆ ದೇಹ ಗುಗ್ಗುಳ
ಸುಟ್ಟು ಧೂಪವ ಹಾಕುವೆ

ಉಸಿರು ಉಸಿರಿಗೆ ಶಿವನ ನೆನಪಿನ
ಊದಬತ್ತಿಯ ಬೆಳಗುವೆ
ವಿಮಲ ಮಾನಸ ಜ್ಞಾನ ಅಗ್ನಿಯ
ತುಪ್ಪದಾರತಿ ಸಲಿಸುವೆ

ಮಾತು ಮಲ್ಲಿಗಿಯಾಗಿ ಸುರಿಯುವೆ
ಹೃದಯ ಕಮಲವ ತೆರೆಯುವೆ
ಜಾಜಿ ಕಣಗಿಲ ಬಕುಲ ಸಂಪಿಗಿ
ಗುಣದ ಮಾಲೆಯ ಹೆಣೆಯುವೆ

ಸೂರ್‍ಯ ಆರತಿ ತಟ್ಟೆ ಮಾಡುವೆ
ಕಳಶಗಿಂಡಿ ಆಗುವೆ
ಚಂದ್ರ ಬಿಸಿಬಿಸಿ ರೊಟ್ಟಿ ಮಾಡುವೆ
ಶಿವಸಮರ್‍ಪಣೆ ಎನ್ನುವೆ

ಪ್ರೀತಿ ಪಾಯಸ ನೀತಿ ಸಂಡಿಗೆ
ನಾನೆ ದಕ್ಷಿಣೆಯಾಗುವೆ
ನನ್ನ ಜೀವನ ಸುಪ್ರದಕ್ಷಿಣೆ
ಮಂಗಳಾರತಿ ಹಾಡುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾತಿ ಬಗ್ಗೆ ಅನಂತಮೂರ್‍ತಿ
Next post ಗರುಡಪಕ್ಷಿ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…