Home / ಕವನ / ಕವಿತೆ / ಬಾಗಿಲು ಬಡೀತಾರೆ

ಬಾಗಿಲು ಬಡೀತಾರೆ

ಬಾಗಿಲು ಬಡೀತಾರೆ ಯಾರಿರಬಹುದು?
ಅದೂ ಇಂಥ ಹೊತ್ತು ಬಡ ಬಡ ಸದ್ದು
ಯಾರಿರಬಹುದು?
ಬಾಗಿಲ ತೆರೆಯೋ ಧೈರ್‍ಯವಿಲ್ಲ
ಯಾರಿರಬಹುದು-ಪೊಲೀಸರಿದ್ದಾರು
ಪಾರ್‍ಟಿಯವರಿದ್ದಾರು
ಎಡಪಕ್ಷ ಬಲಪಕ್ಷ ಜಾಸೂಸಿನವರು
ಕೊಂಡು ಹೋದವರ್‍ಯಾರೂ ಹಿಂದಕ್ಕೆ ಬಂದಿಲ್ಲ
ಬಂದವನೊಬ್ಬನ ನಾಲಿಗೆ ತುಂಡು
ಇನ್ನೊಬ್ಬನ ಕೈತುಂಡು ಮತ್ತೊಬ್ಬನ ಕಾಲ್ತುಂಡು
ಹಲವರಿಗೆ ಕಣ್ಣುಗಳೆ ಇಲ್ಲ
ಅಂಗಾಂಗ ಕತ್ತರಿಸಿ ಬಿಸಾಕುತಾರಂತೆ
ಇಲ್ಲ ತೆರೆಯೋಲ್ಲ ನಾ ಬಾಗ್ಲ ತೆರೆಯೋಲ್ಲ
ದೀಪ ಹಚ್ಚಲ್ಲ ಮಾತಾಡ್ದೆ ಇರ್‍ತೀನಿ
ಸತ್ತಂತೆ ಇರ್‍ತೀನಿ ಮೌನವಾಗಿ
ಹಗಲಾದ್ರೂ ಹೀಗೇನೆ ಇರುಳಾದ್ರೂ ಹೀಗೇನೆ
ಇಲಿಯಂತೆ ಇರಬೇಕು ಯಾರಿಗೂ ಕಾಣಿಸದೆ
ಹೊದ್ದು ಮಲಕೊಳ್ತೀನಿ ಸದ್ದು ಮಾಡದೆ ನಾನು
ಆದ್ರೂ ಬಿಡವಲ್ಲರು ಬಾಗಿಲ ಬಡಿತ
ಬಡೀತಾನೇ ಇದ್ದಾರೆ ಬಡ ಬಡ ಧಡ ಬಡ
ಕೈಲಿ ಬಡೀತಾರೆ ದೊಣ್ಣೆಯಲಿ ಬಡೀತಾರೆ
ಮೊನ್ನೆಯೂ ಹೀಗಿತ್ತು ನಿನ್ನೆಯೂ ಹೀಗಿತ್ತು
ಎಷ್ಟೊತ್ತಿಗೋ ಬಂದು ಬಡೀತಾನೆ ಇರ್‍ತಾರೆ
ನಾಳೇನೂ ಬಡೀತಾರೆ ನಾಡಿದ್ದು ಬಡೀತಾರೆ
ಒಂದಲ್ಲ ಒಂದಿನ ಕೊಂಡೋಗದು ಖಂಡಿತ
ನಾಳೆ ಬರೋದು ಇಂದೇ ಬರ್‍ಲಿ
ತೆರೆದೇ ಬಿಡ್ತೀನಿ ಆಗೋದು ಆಗ್ಲಿ
ನರಕಕ್ಕಿಂತ್ಲು ಅದರ ಭಯವೇ ನರಕಾಂತಾರೆ
ನಾ ಕಾಣದ ನರಕ ಇನ್ನೇನಿದೆ?
ಏನ್ ಬೇಕೋ ಅದು ಮಾಡ್ಳಿ ಏನಾದ್ರೂ ಕಿತ್ಕಳ್ಲಿ
ಕಾಯ ನನ್ದಲ್ಲ ಮನಸು ನನ್ದಲ್ಲ
ಇಂಥ ಭಯಗ್ರಸ್ತ ಊರ್‍ನಲ್ಲಿ
ನಿಲ್ಸಯ್ಯ ನಿನ್ನ ಬಾಗಿಲ ಬಡಿತ
ನಾನಿದೊ ಬಂದೆ ಬಾಗಿಲ ತೆರೆದೆ
ಖಂಡವಿದ ಕೋ ಮಾಂಸವಿದ ಕೊ
ಚಂಡ ವ್ಯಾಘ್ರನೆ ನೀನಿದೆಲ್ಲವನುಂಡು ಸುಖದಿಂದಿರು
ನಾಳೆ ಇನ್ನೊಂದ್ಮನೆ ಹೋಗಿ ನೋಡ್ಕೊ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ