Home / ಕವನ / ಕವಿತೆ / ಬಾಗಿಲು ಬಡೀತಾರೆ

ಬಾಗಿಲು ಬಡೀತಾರೆ

ಬಾಗಿಲು ಬಡೀತಾರೆ ಯಾರಿರಬಹುದು?
ಅದೂ ಇಂಥ ಹೊತ್ತು ಬಡ ಬಡ ಸದ್ದು
ಯಾರಿರಬಹುದು?
ಬಾಗಿಲ ತೆರೆಯೋ ಧೈರ್‍ಯವಿಲ್ಲ
ಯಾರಿರಬಹುದು-ಪೊಲೀಸರಿದ್ದಾರು
ಪಾರ್‍ಟಿಯವರಿದ್ದಾರು
ಎಡಪಕ್ಷ ಬಲಪಕ್ಷ ಜಾಸೂಸಿನವರು
ಕೊಂಡು ಹೋದವರ್‍ಯಾರೂ ಹಿಂದಕ್ಕೆ ಬಂದಿಲ್ಲ
ಬಂದವನೊಬ್ಬನ ನಾಲಿಗೆ ತುಂಡು
ಇನ್ನೊಬ್ಬನ ಕೈತುಂಡು ಮತ್ತೊಬ್ಬನ ಕಾಲ್ತುಂಡು
ಹಲವರಿಗೆ ಕಣ್ಣುಗಳೆ ಇಲ್ಲ
ಅಂಗಾಂಗ ಕತ್ತರಿಸಿ ಬಿಸಾಕುತಾರಂತೆ
ಇಲ್ಲ ತೆರೆಯೋಲ್ಲ ನಾ ಬಾಗ್ಲ ತೆರೆಯೋಲ್ಲ
ದೀಪ ಹಚ್ಚಲ್ಲ ಮಾತಾಡ್ದೆ ಇರ್‍ತೀನಿ
ಸತ್ತಂತೆ ಇರ್‍ತೀನಿ ಮೌನವಾಗಿ
ಹಗಲಾದ್ರೂ ಹೀಗೇನೆ ಇರುಳಾದ್ರೂ ಹೀಗೇನೆ
ಇಲಿಯಂತೆ ಇರಬೇಕು ಯಾರಿಗೂ ಕಾಣಿಸದೆ
ಹೊದ್ದು ಮಲಕೊಳ್ತೀನಿ ಸದ್ದು ಮಾಡದೆ ನಾನು
ಆದ್ರೂ ಬಿಡವಲ್ಲರು ಬಾಗಿಲ ಬಡಿತ
ಬಡೀತಾನೇ ಇದ್ದಾರೆ ಬಡ ಬಡ ಧಡ ಬಡ
ಕೈಲಿ ಬಡೀತಾರೆ ದೊಣ್ಣೆಯಲಿ ಬಡೀತಾರೆ
ಮೊನ್ನೆಯೂ ಹೀಗಿತ್ತು ನಿನ್ನೆಯೂ ಹೀಗಿತ್ತು
ಎಷ್ಟೊತ್ತಿಗೋ ಬಂದು ಬಡೀತಾನೆ ಇರ್‍ತಾರೆ
ನಾಳೇನೂ ಬಡೀತಾರೆ ನಾಡಿದ್ದು ಬಡೀತಾರೆ
ಒಂದಲ್ಲ ಒಂದಿನ ಕೊಂಡೋಗದು ಖಂಡಿತ
ನಾಳೆ ಬರೋದು ಇಂದೇ ಬರ್‍ಲಿ
ತೆರೆದೇ ಬಿಡ್ತೀನಿ ಆಗೋದು ಆಗ್ಲಿ
ನರಕಕ್ಕಿಂತ್ಲು ಅದರ ಭಯವೇ ನರಕಾಂತಾರೆ
ನಾ ಕಾಣದ ನರಕ ಇನ್ನೇನಿದೆ?
ಏನ್ ಬೇಕೋ ಅದು ಮಾಡ್ಳಿ ಏನಾದ್ರೂ ಕಿತ್ಕಳ್ಲಿ
ಕಾಯ ನನ್ದಲ್ಲ ಮನಸು ನನ್ದಲ್ಲ
ಇಂಥ ಭಯಗ್ರಸ್ತ ಊರ್‍ನಲ್ಲಿ
ನಿಲ್ಸಯ್ಯ ನಿನ್ನ ಬಾಗಿಲ ಬಡಿತ
ನಾನಿದೊ ಬಂದೆ ಬಾಗಿಲ ತೆರೆದೆ
ಖಂಡವಿದ ಕೋ ಮಾಂಸವಿದ ಕೊ
ಚಂಡ ವ್ಯಾಘ್ರನೆ ನೀನಿದೆಲ್ಲವನುಂಡು ಸುಖದಿಂದಿರು
ನಾಳೆ ಇನ್ನೊಂದ್ಮನೆ ಹೋಗಿ ನೋಡ್ಕೊ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...