ಬಾಗಿಲು ಬಡೀತಾರೆ

ಬಾಗಿಲು ಬಡೀತಾರೆ ಯಾರಿರಬಹುದು?
ಅದೂ ಇಂಥ ಹೊತ್ತು ಬಡ ಬಡ ಸದ್ದು
ಯಾರಿರಬಹುದು?
ಬಾಗಿಲ ತೆರೆಯೋ ಧೈರ್‍ಯವಿಲ್ಲ
ಯಾರಿರಬಹುದು-ಪೊಲೀಸರಿದ್ದಾರು
ಪಾರ್‍ಟಿಯವರಿದ್ದಾರು
ಎಡಪಕ್ಷ ಬಲಪಕ್ಷ ಜಾಸೂಸಿನವರು
ಕೊಂಡು ಹೋದವರ್‍ಯಾರೂ ಹಿಂದಕ್ಕೆ ಬಂದಿಲ್ಲ
ಬಂದವನೊಬ್ಬನ ನಾಲಿಗೆ ತುಂಡು
ಇನ್ನೊಬ್ಬನ ಕೈತುಂಡು ಮತ್ತೊಬ್ಬನ ಕಾಲ್ತುಂಡು
ಹಲವರಿಗೆ ಕಣ್ಣುಗಳೆ ಇಲ್ಲ
ಅಂಗಾಂಗ ಕತ್ತರಿಸಿ ಬಿಸಾಕುತಾರಂತೆ
ಇಲ್ಲ ತೆರೆಯೋಲ್ಲ ನಾ ಬಾಗ್ಲ ತೆರೆಯೋಲ್ಲ
ದೀಪ ಹಚ್ಚಲ್ಲ ಮಾತಾಡ್ದೆ ಇರ್‍ತೀನಿ
ಸತ್ತಂತೆ ಇರ್‍ತೀನಿ ಮೌನವಾಗಿ
ಹಗಲಾದ್ರೂ ಹೀಗೇನೆ ಇರುಳಾದ್ರೂ ಹೀಗೇನೆ
ಇಲಿಯಂತೆ ಇರಬೇಕು ಯಾರಿಗೂ ಕಾಣಿಸದೆ
ಹೊದ್ದು ಮಲಕೊಳ್ತೀನಿ ಸದ್ದು ಮಾಡದೆ ನಾನು
ಆದ್ರೂ ಬಿಡವಲ್ಲರು ಬಾಗಿಲ ಬಡಿತ
ಬಡೀತಾನೇ ಇದ್ದಾರೆ ಬಡ ಬಡ ಧಡ ಬಡ
ಕೈಲಿ ಬಡೀತಾರೆ ದೊಣ್ಣೆಯಲಿ ಬಡೀತಾರೆ
ಮೊನ್ನೆಯೂ ಹೀಗಿತ್ತು ನಿನ್ನೆಯೂ ಹೀಗಿತ್ತು
ಎಷ್ಟೊತ್ತಿಗೋ ಬಂದು ಬಡೀತಾನೆ ಇರ್‍ತಾರೆ
ನಾಳೇನೂ ಬಡೀತಾರೆ ನಾಡಿದ್ದು ಬಡೀತಾರೆ
ಒಂದಲ್ಲ ಒಂದಿನ ಕೊಂಡೋಗದು ಖಂಡಿತ
ನಾಳೆ ಬರೋದು ಇಂದೇ ಬರ್‍ಲಿ
ತೆರೆದೇ ಬಿಡ್ತೀನಿ ಆಗೋದು ಆಗ್ಲಿ
ನರಕಕ್ಕಿಂತ್ಲು ಅದರ ಭಯವೇ ನರಕಾಂತಾರೆ
ನಾ ಕಾಣದ ನರಕ ಇನ್ನೇನಿದೆ?
ಏನ್ ಬೇಕೋ ಅದು ಮಾಡ್ಳಿ ಏನಾದ್ರೂ ಕಿತ್ಕಳ್ಲಿ
ಕಾಯ ನನ್ದಲ್ಲ ಮನಸು ನನ್ದಲ್ಲ
ಇಂಥ ಭಯಗ್ರಸ್ತ ಊರ್‍ನಲ್ಲಿ
ನಿಲ್ಸಯ್ಯ ನಿನ್ನ ಬಾಗಿಲ ಬಡಿತ
ನಾನಿದೊ ಬಂದೆ ಬಾಗಿಲ ತೆರೆದೆ
ಖಂಡವಿದ ಕೋ ಮಾಂಸವಿದ ಕೊ
ಚಂಡ ವ್ಯಾಘ್ರನೆ ನೀನಿದೆಲ್ಲವನುಂಡು ಸುಖದಿಂದಿರು
ನಾಳೆ ಇನ್ನೊಂದ್ಮನೆ ಹೋಗಿ ನೋಡ್ಕೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ ಬೇಂದ್ರೆಯವರನ್ನು ಕುರಿತು
Next post ಉಮರನ ಒಸಗೆ – ೩೫

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…