Home / ಲೇಖನ / ಇತರೆ / ಇದು ಸಿನಿಮಾ ಅಲ್ಲ

ಇದು ಸಿನಿಮಾ ಅಲ್ಲ

ನೀವೆಲ್ಲ ಜುಲೈ ೨೦೧೫ರಲ್ಲಿ ನಟ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯಿಸಿರುವ ‘ಭಜರಂಗಿ ಭಾಯಿಜಾನ್’ ಚಲನಚಿತ್ರವನ್ನು ನೋಡಿ ಐದಾರು ಸಾರು ಕಣ್ಣೀರು ಸುರಿಸಿರಬಹುದು!

ಭವ್ಯ ಭಾರತದಲ್ಲಿ ಕಳೆದು ಹೋಗುವ ಪಾಕ್‌ನ ಹರ್‍ಷಾಲಿ ಮುನ್ನಿ ಮೂಕ ಬಾಲಕಿಯನ್ನು ನಾಯಕ ಪಾಸ್‌ಪೋರ್ಟ್ ಗೊಡವೆ ಇಲ್ಲದೇ ಸಾಹಸದ ಮೂಲಕವಾಗಿ ಪಾಕಿಸ್ತಾನಕ್ಕೆ ಬಿಟ್ಟು ಬರುವ ಸಾಹಸಮಯದ ಕಥೆ ವ್ಯಥೆ ತೆರೆಯ ಮೇಲೆ ನೋಡಿ ಮನಃ ಕರಗಿ ಹಲ್ಲಿ ಲೋಚಗುಟ್ಟಿದಂತೆ ಎಲ್ಲರೂ ಲೊಚಗುಟ್ಟುವವರೇ….

ಆದರೆ ಪಾಕಿಸ್ಥಾನದಲ್ಲಿ ಸಿಲುಕಿರುವ ಮೂಕ ಬಾಲಕಿಗೆ ತನ್ನ ತವರು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಈಕೆ ಪಾಕ್‌ನ ಸೇವಾ-ಸಂಸ್ಥೆಯೊಂದರಲ್ಲಿದ್ದಾಳೆ! ಇದು ಕರಾಚಿಯ ‘ಈದಿ ಚಾರಿಟಿ’ಯ ಮುಖ್ಯಸ್ಥ ‘ಬಿಲ್ಕೀ ಈದಿ’ ಈಕೆಗೆ ಪ್ರೀತಿಯಿಂದ ‘ಗೀತಾ’ ಎಂದು ಕರೆಯುತ್ತಿರುವರು.

ಕಳೆದ ೧೫ ವರ್ಷಗಳಿಂದ ಪಾಕಿಸ್ತಾನದಲ್ಲೇ ಇರುವ ೨೨ ಹರೆಯದ ಗೀತಾಳಿಗೆ ಮಾತು ಬಾರದ ಕಾರಣ ತನ್ನ ಹೆಸರನ್ನಾಗಲಿ ವಿಳಾಸವನ್ನಾಗಲಿ ಇತರೆ ಯಾವುದೇ ಮಾಹಿತಿ ನೀಡಿರುವುದಿಲ್ಲ!

ಆದರೆ ೨೦೧೨ರಲ್ಲಿ ಈಕೆಯನ್ನು ಭವ್ಯ ಭಾರತಕ್ಕೆ ತಲುಪಿಸುವ ಸಲುವಾಗಿ ಬಿಲ್ಕಿ ಈದಿ ಭವ್ಯಭಾರತಕ್ಕೆ ಬಂದು ಈಕೆಯ ಫೋಟೊ ಸಿಕ್ಕಿದ ಸ್ಥಳ ಇತ್ಯಾದಿ ವಿವರಗಳನ್ನು ಪೊಲೀಸ್ಸಿನವರಿಗೆ ತಲುಪಿಸಿ ಬಂದಿದ್ದರು. ಆದರೂ ಈ ಕೆಲಸ ಇನ್ನೂ ಆಗಿಲ್ಲ.

ಈಗ್ಗೆ ೧೫ ವರ್ಷಗಳ ಹಿಂದೆ ರೈಲಿನಲ್ಲಿ ಲಾಹೋರ್‌ಗೆ ಬಂದಿದ್ದ ಈಕೆಯನ್ನು ಪೊಲೀಸ್ಸಿನವರು ವಶಕ್ಕೆ ಪಡೆದಿದ್ದರು. ಮೂಕಿಯಾಗಿದ್ದರಿಂದ ಬಾಲ ಮಂದಿರಕ್ಕೆ ಸೇರಿಸಿದ್ದರು. ಅಲ್ಲಿ ಈಕೆ ಬಹಳ ಸಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಈದಿ ಚಾರಿಟಿಗೆ ಸೇರಿಸಿದ್ದರು. ಅಲ್ಲಿ ಹೊಂದಿಕೊಳ್ಳದ ಕಾರಣ ಬಿಲ್ಕೀ ಈದಿಯವರು ತಮ್ಮ ಮನೆಯಲ್ಲಿ ಈ ಹುಡುಗಿನ ಸಾಕುತ್ತಿರುವರು!

“ಈಕೆ ಹಿಂದಿಲಿ ಏನೇನೋ ಬರೆದು ತೋರಿಸುವಳು ಇಲ್ಲಿನವರಿಗೆ ಅರ್‍ಥವಾಗುತ್ತಿಲ್ಲ. ಕೈಸನ್ನೆ ಬಾಯಿ ಸನ್ನೆಯಲ್ಲಿ ಭಾರತಕ್ಕೆ ಹೋಗಬೇಕೆಂದು ಕಣ್ಣೀರಿಡುತ್ತಾಳೆ! ಇವಳ ವೇಷಭೂಷಣ ಸಂಪ್ರದಾಯವನ್ನು ಗಮನಿಸಿದರೆ ಪಂಜಾಬಿನ ಹಳ್ಳಿ ಹುಡುಗಿಯಿರಬೇಕೆಂದು ಅನಿಸುವುದು ಹಿಂದೂ ದೇವರುಗಳ ಜತೆಯಲ್ಲಿ ಅಲ್ಲಾನನ್ನೂ ಪ್ರಾರ್‍ಥಿಸುವಳು. ಭಾರತಕ್ಕೆ ಮರಳಬೇಕೆಂಬ ಬಲವಾದ ಕೋರಿಕೆ ಎಂದಿಗೆ ಈಡೇರುವುದೋ…” ಎಂದು ಬಿಲ್ಕೀ ಈದಿಯವರು ತಮ್ಮ ಅಳಲನ್ನು ಇತ್ತೀಚೆಗೆ ಸುದ್ದಿ ಮಾಧ್ಯಮದವರ ಮುಂದೆ ತೋಡಿಕೊಂಡಿದ್ದಾರೆ!

ಹಳ್ಳಿ-ತಾಲ್ಲೂಕು-ಜಿಲ್ಲೆ-ರಾಜ್ಯ-ದೇಶ-ವಿದೇಶದ ಗಡಿಭದ್ರತೆಯ ಮುಂದೆ ಸಂಪರ್‍ಕ ಜಾಲತಾಣ ಕೆಲಸ ಮಾಡುವುದು ಎಷ್ಟೊಂದು ಕಷ್ಟವೆಂದು ನಿಜ ಜೀವನದ ಸಿನಿಮಾದಿಂದ ವ್ಯಕ್ತವಾಗುವುದು.

ಬಹುಶಃ ಪುಟ್ಟ ಬಾಲೆಯನ್ನು ಕಳೆದುಕೊಂಡವರು ಇನ್ನು ನಮ್ಮ ಮಗಳು ಸಿಗಲಾರಳು! ಎಂದು ಕೈಚೆಲ್ಲಿ ಮರೆತಿರಬಹುದೆಂದು ಮೇಲುನೋಟಕ್ಕೆ ಕಂಡುಬರುವುದು. ಈ ಘಟನೆ ಸುಖಾಂತ ಕಾಣಬಹುದೆಂದು ಎದುರು ನೋಡುವ…
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...