ದ್ವೀಪ ಆಯಿರಿ

ದ್ವೀಪ ಆಯಿರಿ

ಈ ನನ್ನ ಶೀರ್‍ಷಿಕೆ ಓದಿ ನೀವೆಲ್ಲ ದಂಗುಬಡಿದು ಹೋಗಿರಬಹುದು. ಹೌದು! ಪೋರ್‍ಚುಗಲ್‌ನ ರಿಯಲ್ ಮ್ಯಾಡ್ರಿಡ್ ಫುಟ್‌ಬಾಲ್‌ ಕ್ಲಬ್‌ನ ಪ್ರಸಿದ್ಧ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ತಮ್ಮ ಆಪ್ತ ಸಲಹೆಗಾರನಿಗೆ ಗ್ರೀಸ್ ದೇಶದ ವ್ಯಾಪ್ತಿಯಲ್ಲಿ ಬರುವ ಒಂದು ಪುಟ್ಟ ದ್ವೀಪವನ್ನೇ ಆಯಿರಿ ಮಾಡಿ ಅಲ್ಲಿದ್ದವರೆನ್ನೆಲ್ಲ ಬೆರಗುಗೊಳಿಸಿರುವರು.

ಈ ತನಕ ನಾವೆಲ್ಲ ಕೇಳಿರುವುದು ನೋಡಿರುವುದು, ಓದಿರುವುದು, ಮದುವೆಯಾದ ದಂಪತಿಗಳಿಗೆ ಅವರ ಬಂಧುಗಳು, ಆಪ್ತರು, ಸ್ನೇಹಿತರು, ಬೆಳ್ಳಿ, ಬಂಗಾರ, ವಜ್ರ ವೈಡೂರ್‍ಯಗಳನ್ನು ಹೂವು ಗುಚ್ಛ, ಬಟ್ಟೆಬರೆ ಇತ್ಯಾದಿ ಆಯಿರಿ ನೀಡುವುದು ಸರ್‍ವೇಸಾಮಾನ್ಯ! ಆದರೆ…. ಇದೊಂದು ವಿಶೇಷ ವಿಶಿಷ್ಟವಾದ ಆಯಿರಿ ಆಗಿದ್ದು ಈ ಶತಮಾನದ ಹೊಸದ್ದು!

ದಿನಾಂಕ ೦೨-೦೮-೨೦೧೫ರಂದು ಭಾನುವಾರದ ದಿನದಂದು ಪೋರ್‍ಚುಗಲ್ಲಿನಲ್ಲಿ ರೊನಾಲ್ಡೊ ಅವರ ಆಪ್ತ ಸಲಹೆಗಾರ ಜೋರ್‍ಗೆಮೆಂಡಸ್ ಸಾಂಡ್ರಾ ಅವರನ್ನು ವಿವಾಹವಾದರು!

ಅಂದು- ದ್ವೀಪ ನೀಡಿದ ಬಗ್ಗೆ ಪೋರ್‍ಚುಗಲ್‌ನ ಸುದ್ದಿ ಸಂಸ್ಥೆ ಮೂವ್ಫ಼್ ನೋಟಿಸಿಯಾ ವಿಶೇಷವಾಗಿ ವರದಿ ಮಾಡಿದೆ!

ಗ್ರೀಸ್ ರಾಷ್ಟ್ರವು ಆರ್‍ಥಿಕ ಮುಗ್ಗಟ್ಟನ್ನು ಸರಿದೂಗಿಸಲು ತನ್ನಲ್ಲಿರುವ ದ್ವೀಪಗಳನ್ನು ಈಗಾಗಲೇ ಮಾರಾಟ ಮಾಡುತ್ತಿದ್ದು ಆ ಪೈಕಿ ರೊನಾಲ್ಡೊ ಕೂಡಾ ಒಂದು ದ್ವೀಪವನ್ನು ಖರೀದಿಸಿದ್ದರು.

ಜೊರ್‍ಗೆ ಮೆಂಡಸ್ ಅವರು ರೊನಾಲ್ಡೊ ಮಾತ್ರವಲ್ಲದೆ ಚೆಲ್ಸಿ ಕ್ಲಬ್‌ನ ಮ್ಯಾನೇಜರ್ ಜೋಸ್ ಮೌರಿನೊ ಈ ಕ್ಲಬ್‌ನ ಸ್ಪ್ರೆಕರ್ ರಾಡಮೆಲ್ ಫಾಲ್ಕಾವೊ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್‌ನ ಗೋಲ್‌ಗೀಪರ್ ಡೇವಿಡ್ ಜಿಯಾ ಅವರಿಗೂ ಸಲಹೆಗಾರರಾಗಿ ಕಾರ್‍ಯ ನಿರ್‍ವಹಿಸುವರು.

ಇದು ಕಲಿಗಾಲ ಸ್ವಾಮಿ! ಏನ್ ಬೇಕಾದರೂ ಆಯಿರಿ ಕೊಡಲಿಲ್ಲಿ ಸಾಧ್ಯವಿದೆ. ಇಂಥಾದ್ದು ಎಂದು ಊಹಿಸಲು ಸಾಧ್ಯವಿಲ್ಲ! ಅಂಥಾ ಕಾಲ ಈಗಾಗಲೇ ಬಂದುಬಿಟ್ಟಿದೆ. ನಾವು ನೀವು ಕುತೂಹಲಿಗಳಾಗಿ ಕಾಯೋಣವಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮಾನಂ ವಿದ್ಧಿ೧
Next post ಶಾಂವಕ್ಕಿ ಕುಟ್ಟಂದ್ರ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…