Home / ಲೇಖನ / ಇತರೆ / ದ್ವೀಪ ಆಯಿರಿ

ದ್ವೀಪ ಆಯಿರಿ

ಈ ನನ್ನ ಶೀರ್‍ಷಿಕೆ ಓದಿ ನೀವೆಲ್ಲ ದಂಗುಬಡಿದು ಹೋಗಿರಬಹುದು. ಹೌದು! ಪೋರ್‍ಚುಗಲ್‌ನ ರಿಯಲ್ ಮ್ಯಾಡ್ರಿಡ್ ಫುಟ್‌ಬಾಲ್‌ ಕ್ಲಬ್‌ನ ಪ್ರಸಿದ್ಧ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ತಮ್ಮ ಆಪ್ತ ಸಲಹೆಗಾರನಿಗೆ ಗ್ರೀಸ್ ದೇಶದ ವ್ಯಾಪ್ತಿಯಲ್ಲಿ ಬರುವ ಒಂದು ಪುಟ್ಟ ದ್ವೀಪವನ್ನೇ ಆಯಿರಿ ಮಾಡಿ ಅಲ್ಲಿದ್ದವರೆನ್ನೆಲ್ಲ ಬೆರಗುಗೊಳಿಸಿರುವರು.

ಈ ತನಕ ನಾವೆಲ್ಲ ಕೇಳಿರುವುದು ನೋಡಿರುವುದು, ಓದಿರುವುದು, ಮದುವೆಯಾದ ದಂಪತಿಗಳಿಗೆ ಅವರ ಬಂಧುಗಳು, ಆಪ್ತರು, ಸ್ನೇಹಿತರು, ಬೆಳ್ಳಿ, ಬಂಗಾರ, ವಜ್ರ ವೈಡೂರ್‍ಯಗಳನ್ನು ಹೂವು ಗುಚ್ಛ, ಬಟ್ಟೆಬರೆ ಇತ್ಯಾದಿ ಆಯಿರಿ ನೀಡುವುದು ಸರ್‍ವೇಸಾಮಾನ್ಯ! ಆದರೆ…. ಇದೊಂದು ವಿಶೇಷ ವಿಶಿಷ್ಟವಾದ ಆಯಿರಿ ಆಗಿದ್ದು ಈ ಶತಮಾನದ ಹೊಸದ್ದು!

ದಿನಾಂಕ ೦೨-೦೮-೨೦೧೫ರಂದು ಭಾನುವಾರದ ದಿನದಂದು ಪೋರ್‍ಚುಗಲ್ಲಿನಲ್ಲಿ ರೊನಾಲ್ಡೊ ಅವರ ಆಪ್ತ ಸಲಹೆಗಾರ ಜೋರ್‍ಗೆಮೆಂಡಸ್ ಸಾಂಡ್ರಾ ಅವರನ್ನು ವಿವಾಹವಾದರು!

ಅಂದು- ದ್ವೀಪ ನೀಡಿದ ಬಗ್ಗೆ ಪೋರ್‍ಚುಗಲ್‌ನ ಸುದ್ದಿ ಸಂಸ್ಥೆ ಮೂವ್ಫ಼್ ನೋಟಿಸಿಯಾ ವಿಶೇಷವಾಗಿ ವರದಿ ಮಾಡಿದೆ!

ಗ್ರೀಸ್ ರಾಷ್ಟ್ರವು ಆರ್‍ಥಿಕ ಮುಗ್ಗಟ್ಟನ್ನು ಸರಿದೂಗಿಸಲು ತನ್ನಲ್ಲಿರುವ ದ್ವೀಪಗಳನ್ನು ಈಗಾಗಲೇ ಮಾರಾಟ ಮಾಡುತ್ತಿದ್ದು ಆ ಪೈಕಿ ರೊನಾಲ್ಡೊ ಕೂಡಾ ಒಂದು ದ್ವೀಪವನ್ನು ಖರೀದಿಸಿದ್ದರು.

ಜೊರ್‍ಗೆ ಮೆಂಡಸ್ ಅವರು ರೊನಾಲ್ಡೊ ಮಾತ್ರವಲ್ಲದೆ ಚೆಲ್ಸಿ ಕ್ಲಬ್‌ನ ಮ್ಯಾನೇಜರ್ ಜೋಸ್ ಮೌರಿನೊ ಈ ಕ್ಲಬ್‌ನ ಸ್ಪ್ರೆಕರ್ ರಾಡಮೆಲ್ ಫಾಲ್ಕಾವೊ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್‌ನ ಗೋಲ್‌ಗೀಪರ್ ಡೇವಿಡ್ ಜಿಯಾ ಅವರಿಗೂ ಸಲಹೆಗಾರರಾಗಿ ಕಾರ್‍ಯ ನಿರ್‍ವಹಿಸುವರು.

ಇದು ಕಲಿಗಾಲ ಸ್ವಾಮಿ! ಏನ್ ಬೇಕಾದರೂ ಆಯಿರಿ ಕೊಡಲಿಲ್ಲಿ ಸಾಧ್ಯವಿದೆ. ಇಂಥಾದ್ದು ಎಂದು ಊಹಿಸಲು ಸಾಧ್ಯವಿಲ್ಲ! ಅಂಥಾ ಕಾಲ ಈಗಾಗಲೇ ಬಂದುಬಿಟ್ಟಿದೆ. ನಾವು ನೀವು ಕುತೂಹಲಿಗಳಾಗಿ ಕಾಯೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...