ಆತ್ಮ ಪೂಜೆ

ಬದುಕಿನಲಿ ನಿ ಒಂಟಿಯಾಗು
ಸತಿ ಸುತರೆಲ್ಲ ನಿನ್ನ ಬಂಧಿ ಯಾಗದಿರಲಿ
ನೀನು ಹೃದಯದಲಿ ಮಡಿವಂತನಾಗು
ಹಗಲಿರುಳು ದೇವ ನುಡಿ ನುಡಿಯಲಿ

ಯಾವ ಜನುಮದಿ ಎಂಥವರೊ ನಿನಗೆ
ನಾಳಿನ ಬಾಳಿಗೊ ಇನ್ನಾರೊ ಯಾರೋ
ಇಂದಿನ ಕ್ಷಣಗಳಲಿ ಸಾರ್‍ಥಕವಾಗಲು
ನಿತ್ಯ ಶುದ್ಧಮನದ ತಿದ್ದು ಬಾರೊ

ಪಾಪ ಪುಣ್ಯಗಳ ಹೋರಾಟ ಆಟ
ಜನುಮ ಜನುಮಗಳಿಗೂ ಸಾಟಿ
ಕ್ಷಣದ ಬಾಳಿಗೆ ಎಷ್ಟೊ ವಂಚನೆ
ಆತ್ಮ ಆನಂದಕ್ಕೆ ಇನ್ನೆಷ್ಟು ಖಟಿಪಿಟಿ

ಕೋಟಿ ಜನುಮಗಳನುಭವಿಸಿ
ಮತ್ತೆ ಈ ನರಜನ್ಮ ಪಡೆದೆ
ಮತ್ತೆಯೂ ಹಳೆಯದೆ ರಾಗ
ಆಯುಷ್ಯ ಮುಗಿದಾಗ ನಡೆದೆ

ಮನವು ತನುವು ಶುದ್ಧವಾಗಲಿ
ಭಾವವು ನಿತ್ಯ ಪವಿತ್ರವಾಗಲಿ
ಕಷ್ಟ ನಷ್ಟ ಸುಖಗಳ ಮಧ್ಯ
ಮಾಣಿಕ್ಯ ವಿಠಲ ಸರ್‍ವತ್ರವಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೦
Next post ಪಾಪಿಯ ಪಾಡು – ೨೩

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…