ಸುಖಕ್ಕೆ ಅಪೇಕ್ಷೆ ಪಡಬೇಡಿ

ಸುಖಕ್ಕೆ ಅಪೇಕ್ಷೆ ಪಡಬೇಡಿ

ಪ್ರತಿಯೊಬ್ಬರು ಬಾಳಿನಲ್ಲಿ ಸುಖವಾಗಿ ಬಾಳಬೇಕೆನ್ನುತ್ತಾರೆ. ಇದು ಮಾನವನ ಸಹಜ ಪ್ರವೃತ್ತಿ. ‘ಸುಖ’ ಎನ್ನುವ ಪದವೇ ಸದಾ ನಮಗೆ ಜೀವನದ ಹೊಯ್ದಾಟಗಳಿಗೆ ಕಾರಣವಾಗುತ್ತದೆ. ಈಗ ಪ್ರತಿಯೊಬ್ಬರಿಗೂ ಕೇಳಿದರೂ ಸುಖದ ಅರ್ಥ ಬೇರೆ ಬೇರೆಯಾಗಿ ಅರ್ಥೈಸುತ್ತಾರೆ. ಆರೋಗ್ಯವಾಗಿರುವುದೇ ಸುಖವೆಂದು ಕೆಲವರೆಂದರೆ, ಹಣ ಗಳಿಕೆ ಮಾಡಿ ಚಿಂತೆಯಿಂದ ದಿನನಿತ್ಯ ಬದುಕುವುದೇ ಸುಖ ಎನ್ನುತ್ತಾರೆ ಹಲವರು. ಮಕ್ಕಳು ಜ್ಞಾನಾರ್ಜನೆ ಮಾಡಿಕೊಂಡು ನೌಕರಿ ಮಾಡಿಕೊಂಡು ನೆಮ್ಮದಿಯಿಂದ ಇದ್ದರಾಯಿತು ಅದೇ ಸುಖ ಎನ್ನುತ್ತಾರೆ. ಹೀಗೆ ಸುಖದ ಅರ್ಥಗಳು ಕಾಲ ಕಾಲಕ್ಕೂ ಬದಲಾಗುತ್ತ ಸಾಗುತ್ತವೆ.

ಹಾಗಾದರೆ ಸುಖ ಯಾವುದು! ಸಿರಿವಂತರಾಗಿದ್ದರೆ ಅಥವಾ ಆರೋಗ್ಯದಿಂದ ಬಾಳಿದರೆ ಅಥವಾ ಮಕ್ಕಳು ಮೊಮ್ಮಕ್ಕಳ ನಡುವೆ ನಗುತ್ತ ಬಾಳುವುದೇ ಹಾಗಾಗದಿದ್ದರೆ ಒಂದು ದೊಡ್ಡ ಬಂಗ್ಲೆ ಕಟ್ಟಿಕೊಂಡು, ಕಾರು ಖರೀದಿಸಿ ಇನ್ನೇನೋ ಆಸೆಗಳಿಗೆ ತೃಪ್ತಿಪಡಿಸಿ ಬಾಳುವುದು ಸುಖವೇ! ಎಲ್ಲಕ್ಕು ಉತ್ತರ ‘ಇಲ್ಲ’ ಎಂಬುದೇ ತಿಳಿಯುತ್ತದೆ.

ಗೌತಮ ಬುದ್ಧರು ‘ಆಸೆಯೆ ದುಃಖಕ್ಕೆ ಕಾರಣ’ ಎಂದರು. ಅಂದರೆ ದಿನನಿತ್ಯ ಸಾವಿರಾರು ಆಸೆಗಳು ನಮ್ಮ ಕಲ್ಪನೆಯಲ್ಲಿ ಹುಟ್ಟುತ್ತವೆ. ಅಂಥ ಹುಟ್ಟಿಕೊಂಡ ಆಸೆಗಳಿಗೆ ಕಟ್ಟಿಕೊಡುತ್ತ ಸಾಗಿದರೆ ನಾವೆಂದೂ ಸುಖಿಗಳಾಗುವುದಿಲ್ಲ. ‘ಎಲ್ಲರ ಮನೆಯ ದೋಸೆ ತೂತು’ ಎಂಬಂತೆ ಎಲ್ಲರೂ ಒಂದಿಲ್ಲ ಒಂದು ತೊಂದರೆಗಳಿಗೆ ಸಿಲುಕಿ ಸುಖದಿಂದ ವಂಚಿತರಾಗಿದ್ದಾರೆ. ಈ ಲೋಕದಲ್ಲಿ ಬಾಳುವ ಯಾರೂ ಸುಖಿಗಳಲ್ಲ. ರಾಜ ಮಹಾರಾಜರಿಂದ ಜನಸಾಮಾನ್ಯನವರೆಗೂ ಏನೋ ಅತೃಪ್ತಿಗಳು ಕಾಡುತ್ತಿವೆ.

ಆ ಅತೃಪ್ತಿಗಳೇ ಸುಖದ ವೈರಿಗಳಾಗಿ ನಮ್ಮನ್ನು ನಿತ್ಯ ಶೋಕದ ಪ್ರಪಾತಕ್ಕೆ ತಳ್ಳುತ್ತಿವೆ. ಸುಖವೆಂಬುದೊಂದು ಮರಿಚೀಕೆಯಾಗಿದೆ. ನಾವು ಅದನ್ನು ಹಿಡಿಯಲು ಓಡುತ್ತಿರುವಾಗಲೆ ಅದೂ ನಮಗೆ ನಿಲುಕದೇ ಹಾಗೇ ದೂರ ಓಡುತ್ತದೆ. ಅಂತಲೇ ಅರಿಸ್ಟಾಟಲ್ ‘ಸುಖದ ಪ್ರಾಪ್ತಿಗೆ ವಸ್ತುಗಳು ಸಂಗ್ರಹಿಸಿದಷ್ಟು ದುಃಖವು ಅಧಿಕವಾಗುತ್ತದೆ’ ಎಂದರು.

ಆದ್ದರಿಂದ ಸಂತರು, ಶರಣರು ನೀನು ಸುಖಕ್ಕೆ ಅಪೇಕ್ಷೆ ಪಡದೇ ಜೀವನದಲ್ಲಿ ಬಂದುದೆಲ್ಲಕ್ಕೂ ನೆಮ್ಮದಿಯಿಂದ ಸ್ವೀಕರಿಸಿದರೆ ಅದೇ ಸುಖವೆಂದು ಅರಹುತ್ತಾರೆ. ಅದೇ ಸಾರ್ಥಕ ಮೈಲಿಗಲ್ಲಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್ತೀಕ
Next post ಉಮರನ ಒಸಗೆ – ೧೫

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys