ಸುಖಕ್ಕೆ ಅಪೇಕ್ಷೆ ಪಡಬೇಡಿ

ಸುಖಕ್ಕೆ ಅಪೇಕ್ಷೆ ಪಡಬೇಡಿ

ಪ್ರತಿಯೊಬ್ಬರು ಬಾಳಿನಲ್ಲಿ ಸುಖವಾಗಿ ಬಾಳಬೇಕೆನ್ನುತ್ತಾರೆ. ಇದು ಮಾನವನ ಸಹಜ ಪ್ರವೃತ್ತಿ. ‘ಸುಖ’ ಎನ್ನುವ ಪದವೇ ಸದಾ ನಮಗೆ ಜೀವನದ ಹೊಯ್ದಾಟಗಳಿಗೆ ಕಾರಣವಾಗುತ್ತದೆ. ಈಗ ಪ್ರತಿಯೊಬ್ಬರಿಗೂ ಕೇಳಿದರೂ ಸುಖದ ಅರ್ಥ ಬೇರೆ ಬೇರೆಯಾಗಿ ಅರ್ಥೈಸುತ್ತಾರೆ. ಆರೋಗ್ಯವಾಗಿರುವುದೇ ಸುಖವೆಂದು ಕೆಲವರೆಂದರೆ, ಹಣ ಗಳಿಕೆ ಮಾಡಿ ಚಿಂತೆಯಿಂದ ದಿನನಿತ್ಯ ಬದುಕುವುದೇ ಸುಖ ಎನ್ನುತ್ತಾರೆ ಹಲವರು. ಮಕ್ಕಳು ಜ್ಞಾನಾರ್ಜನೆ ಮಾಡಿಕೊಂಡು ನೌಕರಿ ಮಾಡಿಕೊಂಡು ನೆಮ್ಮದಿಯಿಂದ ಇದ್ದರಾಯಿತು ಅದೇ ಸುಖ ಎನ್ನುತ್ತಾರೆ. ಹೀಗೆ ಸುಖದ ಅರ್ಥಗಳು ಕಾಲ ಕಾಲಕ್ಕೂ ಬದಲಾಗುತ್ತ ಸಾಗುತ್ತವೆ.

ಹಾಗಾದರೆ ಸುಖ ಯಾವುದು! ಸಿರಿವಂತರಾಗಿದ್ದರೆ ಅಥವಾ ಆರೋಗ್ಯದಿಂದ ಬಾಳಿದರೆ ಅಥವಾ ಮಕ್ಕಳು ಮೊಮ್ಮಕ್ಕಳ ನಡುವೆ ನಗುತ್ತ ಬಾಳುವುದೇ ಹಾಗಾಗದಿದ್ದರೆ ಒಂದು ದೊಡ್ಡ ಬಂಗ್ಲೆ ಕಟ್ಟಿಕೊಂಡು, ಕಾರು ಖರೀದಿಸಿ ಇನ್ನೇನೋ ಆಸೆಗಳಿಗೆ ತೃಪ್ತಿಪಡಿಸಿ ಬಾಳುವುದು ಸುಖವೇ! ಎಲ್ಲಕ್ಕು ಉತ್ತರ ‘ಇಲ್ಲ’ ಎಂಬುದೇ ತಿಳಿಯುತ್ತದೆ.

ಗೌತಮ ಬುದ್ಧರು ‘ಆಸೆಯೆ ದುಃಖಕ್ಕೆ ಕಾರಣ’ ಎಂದರು. ಅಂದರೆ ದಿನನಿತ್ಯ ಸಾವಿರಾರು ಆಸೆಗಳು ನಮ್ಮ ಕಲ್ಪನೆಯಲ್ಲಿ ಹುಟ್ಟುತ್ತವೆ. ಅಂಥ ಹುಟ್ಟಿಕೊಂಡ ಆಸೆಗಳಿಗೆ ಕಟ್ಟಿಕೊಡುತ್ತ ಸಾಗಿದರೆ ನಾವೆಂದೂ ಸುಖಿಗಳಾಗುವುದಿಲ್ಲ. ‘ಎಲ್ಲರ ಮನೆಯ ದೋಸೆ ತೂತು’ ಎಂಬಂತೆ ಎಲ್ಲರೂ ಒಂದಿಲ್ಲ ಒಂದು ತೊಂದರೆಗಳಿಗೆ ಸಿಲುಕಿ ಸುಖದಿಂದ ವಂಚಿತರಾಗಿದ್ದಾರೆ. ಈ ಲೋಕದಲ್ಲಿ ಬಾಳುವ ಯಾರೂ ಸುಖಿಗಳಲ್ಲ. ರಾಜ ಮಹಾರಾಜರಿಂದ ಜನಸಾಮಾನ್ಯನವರೆಗೂ ಏನೋ ಅತೃಪ್ತಿಗಳು ಕಾಡುತ್ತಿವೆ.

ಆ ಅತೃಪ್ತಿಗಳೇ ಸುಖದ ವೈರಿಗಳಾಗಿ ನಮ್ಮನ್ನು ನಿತ್ಯ ಶೋಕದ ಪ್ರಪಾತಕ್ಕೆ ತಳ್ಳುತ್ತಿವೆ. ಸುಖವೆಂಬುದೊಂದು ಮರಿಚೀಕೆಯಾಗಿದೆ. ನಾವು ಅದನ್ನು ಹಿಡಿಯಲು ಓಡುತ್ತಿರುವಾಗಲೆ ಅದೂ ನಮಗೆ ನಿಲುಕದೇ ಹಾಗೇ ದೂರ ಓಡುತ್ತದೆ. ಅಂತಲೇ ಅರಿಸ್ಟಾಟಲ್ ‘ಸುಖದ ಪ್ರಾಪ್ತಿಗೆ ವಸ್ತುಗಳು ಸಂಗ್ರಹಿಸಿದಷ್ಟು ದುಃಖವು ಅಧಿಕವಾಗುತ್ತದೆ’ ಎಂದರು.

ಆದ್ದರಿಂದ ಸಂತರು, ಶರಣರು ನೀನು ಸುಖಕ್ಕೆ ಅಪೇಕ್ಷೆ ಪಡದೇ ಜೀವನದಲ್ಲಿ ಬಂದುದೆಲ್ಲಕ್ಕೂ ನೆಮ್ಮದಿಯಿಂದ ಸ್ವೀಕರಿಸಿದರೆ ಅದೇ ಸುಖವೆಂದು ಅರಹುತ್ತಾರೆ. ಅದೇ ಸಾರ್ಥಕ ಮೈಲಿಗಲ್ಲಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್ತೀಕ
Next post ಉಮರನ ಒಸಗೆ – ೧೫

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…