Home / ಲೇಖನ / ಇತರೆ / ಸುಖಕ್ಕೆ ಅಪೇಕ್ಷೆ ಪಡಬೇಡಿ

ಸುಖಕ್ಕೆ ಅಪೇಕ್ಷೆ ಪಡಬೇಡಿ

ಪ್ರತಿಯೊಬ್ಬರು ಬಾಳಿನಲ್ಲಿ ಸುಖವಾಗಿ ಬಾಳಬೇಕೆನ್ನುತ್ತಾರೆ. ಇದು ಮಾನವನ ಸಹಜ ಪ್ರವೃತ್ತಿ. ‘ಸುಖ’ ಎನ್ನುವ ಪದವೇ ಸದಾ ನಮಗೆ ಜೀವನದ ಹೊಯ್ದಾಟಗಳಿಗೆ ಕಾರಣವಾಗುತ್ತದೆ. ಈಗ ಪ್ರತಿಯೊಬ್ಬರಿಗೂ ಕೇಳಿದರೂ ಸುಖದ ಅರ್ಥ ಬೇರೆ ಬೇರೆಯಾಗಿ ಅರ್ಥೈಸುತ್ತಾರೆ. ಆರೋಗ್ಯವಾಗಿರುವುದೇ ಸುಖವೆಂದು ಕೆಲವರೆಂದರೆ, ಹಣ ಗಳಿಕೆ ಮಾಡಿ ಚಿಂತೆಯಿಂದ ದಿನನಿತ್ಯ ಬದುಕುವುದೇ ಸುಖ ಎನ್ನುತ್ತಾರೆ ಹಲವರು. ಮಕ್ಕಳು ಜ್ಞಾನಾರ್ಜನೆ ಮಾಡಿಕೊಂಡು ನೌಕರಿ ಮಾಡಿಕೊಂಡು ನೆಮ್ಮದಿಯಿಂದ ಇದ್ದರಾಯಿತು ಅದೇ ಸುಖ ಎನ್ನುತ್ತಾರೆ. ಹೀಗೆ ಸುಖದ ಅರ್ಥಗಳು ಕಾಲ ಕಾಲಕ್ಕೂ ಬದಲಾಗುತ್ತ ಸಾಗುತ್ತವೆ.

ಹಾಗಾದರೆ ಸುಖ ಯಾವುದು! ಸಿರಿವಂತರಾಗಿದ್ದರೆ ಅಥವಾ ಆರೋಗ್ಯದಿಂದ ಬಾಳಿದರೆ ಅಥವಾ ಮಕ್ಕಳು ಮೊಮ್ಮಕ್ಕಳ ನಡುವೆ ನಗುತ್ತ ಬಾಳುವುದೇ ಹಾಗಾಗದಿದ್ದರೆ ಒಂದು ದೊಡ್ಡ ಬಂಗ್ಲೆ ಕಟ್ಟಿಕೊಂಡು, ಕಾರು ಖರೀದಿಸಿ ಇನ್ನೇನೋ ಆಸೆಗಳಿಗೆ ತೃಪ್ತಿಪಡಿಸಿ ಬಾಳುವುದು ಸುಖವೇ! ಎಲ್ಲಕ್ಕು ಉತ್ತರ ‘ಇಲ್ಲ’ ಎಂಬುದೇ ತಿಳಿಯುತ್ತದೆ.

ಗೌತಮ ಬುದ್ಧರು ‘ಆಸೆಯೆ ದುಃಖಕ್ಕೆ ಕಾರಣ’ ಎಂದರು. ಅಂದರೆ ದಿನನಿತ್ಯ ಸಾವಿರಾರು ಆಸೆಗಳು ನಮ್ಮ ಕಲ್ಪನೆಯಲ್ಲಿ ಹುಟ್ಟುತ್ತವೆ. ಅಂಥ ಹುಟ್ಟಿಕೊಂಡ ಆಸೆಗಳಿಗೆ ಕಟ್ಟಿಕೊಡುತ್ತ ಸಾಗಿದರೆ ನಾವೆಂದೂ ಸುಖಿಗಳಾಗುವುದಿಲ್ಲ. ‘ಎಲ್ಲರ ಮನೆಯ ದೋಸೆ ತೂತು’ ಎಂಬಂತೆ ಎಲ್ಲರೂ ಒಂದಿಲ್ಲ ಒಂದು ತೊಂದರೆಗಳಿಗೆ ಸಿಲುಕಿ ಸುಖದಿಂದ ವಂಚಿತರಾಗಿದ್ದಾರೆ. ಈ ಲೋಕದಲ್ಲಿ ಬಾಳುವ ಯಾರೂ ಸುಖಿಗಳಲ್ಲ. ರಾಜ ಮಹಾರಾಜರಿಂದ ಜನಸಾಮಾನ್ಯನವರೆಗೂ ಏನೋ ಅತೃಪ್ತಿಗಳು ಕಾಡುತ್ತಿವೆ.

ಆ ಅತೃಪ್ತಿಗಳೇ ಸುಖದ ವೈರಿಗಳಾಗಿ ನಮ್ಮನ್ನು ನಿತ್ಯ ಶೋಕದ ಪ್ರಪಾತಕ್ಕೆ ತಳ್ಳುತ್ತಿವೆ. ಸುಖವೆಂಬುದೊಂದು ಮರಿಚೀಕೆಯಾಗಿದೆ. ನಾವು ಅದನ್ನು ಹಿಡಿಯಲು ಓಡುತ್ತಿರುವಾಗಲೆ ಅದೂ ನಮಗೆ ನಿಲುಕದೇ ಹಾಗೇ ದೂರ ಓಡುತ್ತದೆ. ಅಂತಲೇ ಅರಿಸ್ಟಾಟಲ್ ‘ಸುಖದ ಪ್ರಾಪ್ತಿಗೆ ವಸ್ತುಗಳು ಸಂಗ್ರಹಿಸಿದಷ್ಟು ದುಃಖವು ಅಧಿಕವಾಗುತ್ತದೆ’ ಎಂದರು.

ಆದ್ದರಿಂದ ಸಂತರು, ಶರಣರು ನೀನು ಸುಖಕ್ಕೆ ಅಪೇಕ್ಷೆ ಪಡದೇ ಜೀವನದಲ್ಲಿ ಬಂದುದೆಲ್ಲಕ್ಕೂ ನೆಮ್ಮದಿಯಿಂದ ಸ್ವೀಕರಿಸಿದರೆ ಅದೇ ಸುಖವೆಂದು ಅರಹುತ್ತಾರೆ. ಅದೇ ಸಾರ್ಥಕ ಮೈಲಿಗಲ್ಲಾಗುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...