Home / ಕವನ / ಕವಿತೆ / ಬಿಕ್ಸೆ

ಬಿಕ್ಸೆ

ನನ್ ಎಡ್ತಿ ನುಗ್ಗಿದ್ಲು
ಜೋಬಿಗ್ ಕೈ ಆಕಿದ್ಲು
ಮುನಿಯಣ್ಣ ಯೆಂಡಕ್‌ ಕಾಸಿಲ್ಲ-
ಸಿರಿಕಿಸ್ನ ನಿಂತೌನೆ!
ಕುಚೇಲ ಬಂದೌನೆ!
ಏನಾರ ಕೊಡಲೇಬೇಕಲ್ಲ! ೧

ನಿನ್ ಯೆಂಡ ಬೇಡ್ತೀನಿ
ಕೊಡದಿದ್ರೆ ಆಡ್ತೀನಿ
ಮುನಿಯ ನಿನ್ ಮೇಲೊಂದು ಮಟ್ಟು!
ಬೇವಾರ್‍ಸಿ ಬಂದೌನೆ |
ಬರಕೋಂತ ನಿಂತೌನೆ
ಮುನಿಯ ನಿನ್ ಗುಟ್ಟೆಲ್ಲ ರಟ್ಟು! ೨

ಬೇಡ್ತಿನ್ ಅಂತ್ ಯೋಳಿದ್ರೆ
ನಿನ್ ಯೆಂಡ ಕೇಳಿದ್ರೆ
ದರ್‍ಮಕ್ಕೇನ್ ಕೇಳಾಕಿಲ್ಲೇಳು!
ನರಮನಸಾಂತ್ ಅಂದೋನು
ಬಿಕ್ಸೇಗ್ ಕೈ ತಂದೋನು
ಕತ್ತೆ ನಾಯ್ಗೊಳ್ಗಿಂತ ಕೀಳು! ೩

ನಾ ಸುಂಕೆ ಬೇಡಾಲ್ಲ
ನೀ ಸುಂಕೆ ನೀಡಾಲ್ಲ
ಕಾಸ್ಗೂನೆ ನಿಂಗೂನೆ ಪ್ರಾಣ!
ಚಾಕ್ರಿ ನಂಗೇನಾರ
ಕೊಟ್ಟಿ ಜೀತಕ್ ಪೂರ
ಯೆಂಡ ನೀ ಕೊಡ್ತಂದ್ರೆ ಜಾಣ! ೪

ನಿಂಗೇನ್ರ ಬೇಕಿದ್ರೆ
ನನ್ ಕೆಲಸಕ್ ಆಕಿದ್ರೆ
ತಿಕ್ತೀನಿ ಯೆಂಡದ್ ಪೀಪಾಯ್ನ!
ಇಲ್ದಿದ್ರೆ ಗಲ್ದಲ್ಲಿ
ಬಿದ್ದಿದ್ನ್ ಒಂದ್ ಅಳ್ದಲ್ಲಿ
ಊಳ್ತೀನೀ ತಂದ್ ರೂಪಾಯ್ನ! ೫

ನರಮನಸಾಂತ್ ಉಟ್ದೋನು
ಪಕದೋರ್ ಕಸ್ಟ್ಕ್ ಆಗದೋನು
ಜೀವ್ದೆಣ! ಬೂಮೀಗ್ ಔನ್ ಬಾರ!
ತಾ ಮುನ್ಯ ಯೆಂಡಾನ!
ತುಂಬು ನನ್ ಬುಂಡೇನ!
ನಿನ್ ಕತ್ಗೆ ಪೀಪಾಯ್ಗೋಳ್ ಆರ! ೬
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...