Home / ಕವನ / ಕವಿತೆ / ಬಿಕ್ಸೆ

ಬಿಕ್ಸೆ

ನನ್ ಎಡ್ತಿ ನುಗ್ಗಿದ್ಲು
ಜೋಬಿಗ್ ಕೈ ಆಕಿದ್ಲು
ಮುನಿಯಣ್ಣ ಯೆಂಡಕ್‌ ಕಾಸಿಲ್ಲ-
ಸಿರಿಕಿಸ್ನ ನಿಂತೌನೆ!
ಕುಚೇಲ ಬಂದೌನೆ!
ಏನಾರ ಕೊಡಲೇಬೇಕಲ್ಲ! ೧

ನಿನ್ ಯೆಂಡ ಬೇಡ್ತೀನಿ
ಕೊಡದಿದ್ರೆ ಆಡ್ತೀನಿ
ಮುನಿಯ ನಿನ್ ಮೇಲೊಂದು ಮಟ್ಟು!
ಬೇವಾರ್‍ಸಿ ಬಂದೌನೆ |
ಬರಕೋಂತ ನಿಂತೌನೆ
ಮುನಿಯ ನಿನ್ ಗುಟ್ಟೆಲ್ಲ ರಟ್ಟು! ೨

ಬೇಡ್ತಿನ್ ಅಂತ್ ಯೋಳಿದ್ರೆ
ನಿನ್ ಯೆಂಡ ಕೇಳಿದ್ರೆ
ದರ್‍ಮಕ್ಕೇನ್ ಕೇಳಾಕಿಲ್ಲೇಳು!
ನರಮನಸಾಂತ್ ಅಂದೋನು
ಬಿಕ್ಸೇಗ್ ಕೈ ತಂದೋನು
ಕತ್ತೆ ನಾಯ್ಗೊಳ್ಗಿಂತ ಕೀಳು! ೩

ನಾ ಸುಂಕೆ ಬೇಡಾಲ್ಲ
ನೀ ಸುಂಕೆ ನೀಡಾಲ್ಲ
ಕಾಸ್ಗೂನೆ ನಿಂಗೂನೆ ಪ್ರಾಣ!
ಚಾಕ್ರಿ ನಂಗೇನಾರ
ಕೊಟ್ಟಿ ಜೀತಕ್ ಪೂರ
ಯೆಂಡ ನೀ ಕೊಡ್ತಂದ್ರೆ ಜಾಣ! ೪

ನಿಂಗೇನ್ರ ಬೇಕಿದ್ರೆ
ನನ್ ಕೆಲಸಕ್ ಆಕಿದ್ರೆ
ತಿಕ್ತೀನಿ ಯೆಂಡದ್ ಪೀಪಾಯ್ನ!
ಇಲ್ದಿದ್ರೆ ಗಲ್ದಲ್ಲಿ
ಬಿದ್ದಿದ್ನ್ ಒಂದ್ ಅಳ್ದಲ್ಲಿ
ಊಳ್ತೀನೀ ತಂದ್ ರೂಪಾಯ್ನ! ೫

ನರಮನಸಾಂತ್ ಉಟ್ದೋನು
ಪಕದೋರ್ ಕಸ್ಟ್ಕ್ ಆಗದೋನು
ಜೀವ್ದೆಣ! ಬೂಮೀಗ್ ಔನ್ ಬಾರ!
ತಾ ಮುನ್ಯ ಯೆಂಡಾನ!
ತುಂಬು ನನ್ ಬುಂಡೇನ!
ನಿನ್ ಕತ್ಗೆ ಪೀಪಾಯ್ಗೋಳ್ ಆರ! ೬
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...