Home / ಕವನ / ಅನುವಾದ / ಹೋಮರ್ ಹಾಡಿದ ಹೆಣ್ಣು

ಹೋಮರ್ ಹಾಡಿದ ಹೆಣ್ಣು

ನನ್ನ ಹರೆಯದ ಆ ದಿನಗಳಲ್ಲಿ
ಅವಳತ್ತ ಗಂಡೊಂದು ಸುಳಿದರೆ,
ಪ್ರೀತಿಸುತ್ತಿದ್ದಾನೆ ಅನ್ನಿಸಿ
ಭಯ ದ್ವೇಷ ಉಕ್ಕಿ ತಲ್ಲಣಿಸುತ್ತಿದ್ದೆ.
ನೋಡಿಯೂ ಅವಳತ್ತ ತಿರುಗದೆ
ದಾಟಿ ಹೋದರೆ ಅವನು ‘ಅಯ್ಯೋ
ಘೋರ ಅಪರಾಧ’ ಎಂದೆನ್ನಿಸಿ
ಒಳಗೊಳಗೆ ಒದ್ದಾಡುತ್ತಿದ್ದೆ.

ಆ ಮುಂದೆ ನಾ ಬರೆದೆ ಮುಡಿದೆ,
ಈಗ ಬಿಳಿಕೂದಲಾಗಿರುವೆ,
ಕನಸುವೆನು ಆಗೀಗ ಹೀಗೆ :
ಆ ಬಿಂಬ ಮಿಡಿದ ಚಿಂತನೆಯ
ಎತ್ತಿರುವೆ ಎಂಥ ನೆಲೆಗೆಂದರೆ
ಬರಲಿರುವ ಕಾಲ ಹೇಳೀತು,
‘ಆ ಕಾಯ ಎಂಥದೆಂದೀತ
ನೆರಳಿಸಿದ ಕನ್ನಡಿಯ ಒಳಗೆ’.

ಪ್ರಾಯದವನಿದ್ದಾಗ ನಾನು
ಅವಳಿಗೂ ಕೂಡ ಬಿಸಿರಕ್ತ
ಮುಗಿಲಲ್ಲಿ ನಡೆದಳೆನ್ನಿಸುವ
ಹೆಮ್ಮೆ ಸುಮ್ಮಾನಗಳ ಚಿತ್ರ,
ಹೋಮರ್ ಹಾಡಿದ ಹೆಣ್ಣು ಇವಳು- ಎಂದೇ
ಅವಳ ಧ್ಯಾನದಲ್ಲಾದ ಬಾಳು ಬರೆಹ
ಧೀರೋದಾತ್ತವಾದ ಸ್ವಪ್ನದಂತೆ
ತೋರುವುವು ಹೊರಳಿ ಕಂಡಾಗ
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಹೋಮರ್ ಕ್ರಿ.ಪೂ. ೯೦೦ರಲ್ಲಿ ಇದ್ದನೆನ್ನಲಾದ ಗ್ರೀಕರ ಆದಿಕವಿ ಮತ್ತು ಮಹಾಕವಿ. ಇಲಿಯಡ್ ಮತ್ತು ಒಡಿಸ್ಸಿ ಎಂಬ ಮಹಾಕಾವ್ಯಗಳನ್ನು ಬರೆದಿದ್ದಾನೆ. ಅವನ ಇಲಿಯಡ್ ಕಾವ್ಯದ ನಾಯಕಿ ಹೆಲೆನ್ ಅಪೂರ್‍ವ ಚೆಲುವೆ. ಇಲ್ಲಿ ಮಾಡ್‌ಗಾನಳನ್ನು ಹೆಲೆನ್ನಳ ಜೊತೆ
ಸಮೀಕರಿಸಲಾಗಿದೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...