ಮಗುವಿನ ನಗು

ವರ್‍ಷದ ನಿಶಿಯೊಳು ಮುಗಿಲಿನ ಮರೆಯೊಳು
ಇಣಿಕುವ ಚಂದ್ರನ ಜೊನ್ನದೊಲು,
ಹರ್‍ಷವು ಮೂಡಿತು ಚಿಂತೆಯ ಸದನದಿ
ಹೊಳೆಯಲು ಆಂಡಾಳಿನ ನಗೆಯು.

ಜಾಜಿಯ ಮುಗುಳನು ಮುತ್ತಿಡೆ ನುಸುಳಿದ
ಕಿರಣದ ಚೆಲುವಿನ ಹೊಸ ನಗೆಯು,
ವ್ಯಾಜವೆ ಇಲ್ಲದೆ ಸೋಜಿಗಪಡುವಾ
ಬಲು ಬಲು ಸೊಗಸಿನ ಹೊಸ ನಗೆಯು.

ಉಡುಗಣದೊಡೆಯನ ನಗೆ ಇದ ಹೋಲ್ವುದೆ?
ಈ ಬಗೆ ಚಪಲತೆ ಅದಕೆಲ್ಲಿ?
ಮೋಡದ ಮಿಂಚನು ಹೋಲುವುದೆನಲೆ?
ತುಮುಲವನೆಬ್ಬಿಸದೆದೆಯೊಳಗೆ.

“ಮುದ್ದಾಂಡಾಳೀ ನಗೆಯೆಲ್ಲಿತ್ತೆ,
ಬಗೆಯನು ಸೆರೆಹಿಡಿವೀ ಬಲೆಯು?
ಕದ್ದೆಯ ಭೂತಳಕಿಳಿಯುವ ಸಮಯದಿ
ದಿನದಿಂದೀ ಹೊಸ ಸೋಜಿಗವ?”

ಎಂದೆನು ಹರುಷದಿ ಮುತ್ತಿಡುತವಳಾ
ಸೋಜಿಗ ಪಡುವಾ ಕಂಗಳನು.
ಎಂದೆನು ಅಚ್ಚರಿ ಹೆಚ್ಚಲು ತಿರುಗಿಯು,
“ಆಂಡಾಳೀ ನಗೆಯೆಲ್ಲಿತ್ತೆ?”

ಎನಲಾ ಮಗುವಿನ ನಗೆಯಿಮ್ಮಡಿಸಿತು,
ಕಂಗಳು ಹೊಳೆದುವು ಕೌತುಕದಿ.
ಮೌನದೊಳರೆಚಣ ಒಳಮೊಗವಾದುವು,
ಆತ್ಮನ ನೋಡುವ ತೆರದೊಳಗೆ.

“ಎನ್ನಾಂಡಾಳೀ ನಗೆಯೆಲ್ಲಿತ್ತೆ?”
ಥಟ್ಟನೆ ನುಡಿಯಿತು ಕಿರುಗೂಸು:
“ಎನ್ನೀ ಕಿರುನಗೆ ಕಣ್ಣೊಳಗಿದ್ದಿತು,
ಅಲ್ಲಿಂದುಕ್ಕಿತು ಬಾಯೊಳಗೆ.”

ಉತ್ತರ ಸಿಕ್ಕಿತು, ಒಗಟೂ ಒಡೆಯಿತು,
ಹೊಮ್ಮಿತು ಹರುಷದ ತೆರೆ ತೆರೆಯು.
ಮುತ್ತಿನೊಲಿರುವೀ ಮಾತಿಗೆ ಸೋತೆನು,
ಮೂಡಿತು ಮನದೊಳಗಚ್ಚರಿಯು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೀಗರ ಹಾಡು
Next post ಹೂವು ದುಂಬಿ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…