Home / ಕವನ / ಕವಿತೆ / ಬೀಗರ ಹಾಡು

ಬೀಗರ ಹಾಡು

ಸರಕ್ಕ ಸರಿತಲ್ಲ ಬೀಗರ ಸುರಪ್ಪ ತಿಳಿತಲ್ಲ ||ಪ||

ಆನೀ ಬರತಾವಂತ ಆರಽ ಭಣವೀ ಕೊಂಡ|
ಆನೆಲ್ಲಿ ನಿನ್ಮು ದಳವೆಲ್ಲಿ | ಸರಕ್ಕ ||೧||

ಆನೆಲ್ಲಿ ನಿಮ್ಮ ದಳವೆಲ್ಲಿ ಬೀಗಾ|
ಬೋಳ್ಹೋರಿ ಮ್ಯಾಲ ಬರತಾರ | ಸರಕ್ಕ ||೨||

ಒಂಟೀ ಬರತಾವಂತ ಎಂಟಽ ಭಣವೀ ಕೊಂಡ|
ಒಂಟಿಲ್ಲಿ ನಿಮ್ಮ ದಳವೆಲ್ಲಿ | ಸರಕ್ಕ ||೩||

ಒಂಟಿಲ್ಲಿ ನಿಮ್ಮ ದಳವೆಲ್ಲಿ ಬೀಗಾ|
ಕುಂಟ್ಹೋರಿ ಮ್ಯಾಲ ಬರತಾರ | ಸರಕ್ಕ ||೪||

ಬೀಗೂತೊಳ್ಳೆವಳಂತ ದೇವರಮನಿ ಕೊಟ್ಟ|
ದೇವಽರ ಕದ್ದಾಳ ಬಗಲಾಗ | ಸರಕ್ಕ ||೫||

ಬೀಗೂತೊಳ್ಳೆವಳಂತ ಅಡಗೀಯ ಮನಿ ಕೊಟ್|ಟ
ಹೋಳೀಗಿ ಘಳಿಗಿ ಬಗಲಾಗ | ಸರಕ್ಕ ||೬||

ಹೋಳೀಗಿ ಘಳಿಗಿ ಬಗಲಾಗ ಅವರಣ್ಣ|
ನೀಡ್ಲಿಕ್ಕಿಲ್ಲಂದು ಕಸಗೊಂಡ | ಸರಕ್ಕ ||೭||

ಬೀಗೂತೊಳ್ಳೇಕಂತ ಅಡಗೀಯ ಮನಿ ಕೊಟ್ಟ|
ಬಾನಾದ ದುರುಡಿ ಬಗಲಾಗ | ಸರಕ್ಕ ||೮||

ಬಾನೂಅದಽ ದುರುಡಿ ಬಗಲಾಗ ಅವರಣ್ಣಾ|
ನೀಡ್ಲಿಕ್ಕಿಲ್ಲಂತ ಕಸಗೊಂಡ | ಸರಕ್ಕ ||೯||

ಎಲ್ಲಾರು ಕಟ್ಟ್ಯಾರ ಮಲ್ಲಿಗ್ಹೂವಿನ ದಂಡಿ|
ಬೀಗೂತಿ ಕಟ್ಟ್ಯಾಳ ಹುಲ್ಹೊರಿಯ |ಸರಕ್ಕ ||೧೦||

ಬೀಗೂತಿ ಕಟ್ಟ್ಯಾಳ ಹುಲ್ಹೊರಿ ಅವರಣ್ಣಾ|
ಕುದರೀಗಿಲ್ಲಂದು ಕಸಗೊಂಡ | ಸರಕ್ಕ ||೧೧||

ಎಲ್ಲಾರು ಕಟ್ಟ್ಯಾರ ಗುಳ್ಳಬ್ಯಾಳೀ ಮಣಿ|
ಬೀಗೂತಿ ಕಟ್ಟ್ಯಾಳ ಕೈಪಾಳಿ | ಸರಕ್ಕ ||೧೨||

ಬೀಗೂತಿ ಕಟ್ಟ್ಯಾಳ ಕೈವಾಳಿ ಅವರಣ್ಣಾ|
ಬಳಸಲಕಿಲ್ಲಂತ ಕಸಗೊಂಡ | ಸರಕ್ಕ ||೧೩||

ಒಂದ ಅಡಕೀ ಒಡೆದು ಒಂಬತ್ತು ಮದುವಿ ಮಾಡಿ|
ಇಂದೀನ ಖರ್ಚ ಬಲು ಖರ್ಚ | ಸರಕ್ಕ ||೧೪||

ಇಂದೀನ ಖರ್ಚ ಬಲು ಖರ್ಚ ಬೀಗಾ|
ಖಂಬಽದ ತೆಕ್ಕಿ ಬಿಡವಲ್ಲ | ಸರಕ್ಕ ||೧೫||

ಒಂದಽ ಎಲಿಽ ಹರಿದು ಒಂಬತ್ತು ಮದಿವಿಮಾಡಿ|
ನಿನ್ನೀನ ಖರ್ಚ ಬಲು ಖರ್ಚ | ಸರಕ್ಕ ||೧೬||

ನಿನ್ನೀನ ಖರ್ಚ ಬಲು ಖರ್ಚ ಬೀಗಾ|
ಹಂದಽರ ತೆಕ್ಕಿ ಬಿಡವಲ್ಲ| ಸರಕ್ಕ ||೧೭||

ಹಂದಾವೂರದಾಗ ಮಂದಿ ಬಂದು ಎಟ್ಟೊತ್ತಾಯ್ತು |
ಕಂಬಳಿಲ್ಲೇನ ಇವರಲ್ಲಿ| ಸರಕ್ಕ ||೧೮||

ಕಂಬಳಿಲ್ಲೇನ ಇವರಲಿ ಬೀಗುತಿ|
ಕಂಬ್ಳಿಗ್ಹೋಗ್ಯಾಳ ಮನಿ ಮನಿ | ಸರಕ್ಕ ||೧೯||

ಹಂದರಽದಾಗ ಮಂದಿ ಬಂದೆಟ್ಟೊತ್ತಾಯ್ತು|
ಕೂಕಂ ಇಲ್ಲೇನ ಇವರಲ್ಲಿ | ಸರಕ್ಕ ||೨೦||

ಕೂಕಂ ಇಲ್ಲೇನ ಇವರಲ್ಲಿ ಬೀಗುತಿ|
ಕೂಕಮ್ಮಿಗ್ಹೋಗ್ಯಾಳ ಅಂಗಡೀಗಿ | ಸರಕ್ಕ ||೨೧||

ಆಚ್ಛೀಕ ಹೊಲಗೇರಿ ಇಚ್ಚೀಕ ಮಾದರಗೇರಿ|
ನಟ್ಟನಡಬರಕ ಶಿನಪೂಜೆ | ಸರಕ್ಕ ||೨೨||

ನೆಟ್ಟಽನಡೆಬರಕ ಶಿನವೂಜೆ ಆಗಟಿಗೆ|
ನಾಲತ್ತ ನಾಯಿ ಬೊಗಳ್ಯಾವ | ಸರಕ್ಕ ||೨೩||
*****

“ಹೊಳೆ ದಾಟಿದ ಮೇಲೆ ಅಂಬಿಗರ ಮಿಂಡ” ಎನ್ನುವಂತೆ, ಲಗ್ನದ ಮುಖ್ಯ ವಿಧಾನಗಳೆಲ್ಲ ಮುಗಿದ ಮೇಲೆ, ಮದುಮಕ್ಕಳ ಮೆರವಣಿಗೆ ಹೊರಟ ಕಾಲಕ್ಕೆ ಬೀದಿಯಲ್ಲಿ ಎರಡೂ ಕಡೆಯ ಬೀಗರ ಪಕ್ಷದಿಂದ ಹೆಣ್ಣುಮಕ್ಕಳು ಎರಡು ತಂಡಗಳಾಗಿ ಒಬ್ಬರನ್ನೊಬ್ಬರು ಅಪಹಾಸ್ಯಮಾಡುತ್ತಾರೆ. ಅದರ ಮೂಲಕ ಆಗಿನ ಮಟ್ಟಿಗೆ ಕದನಗಳೂ ಆಗುತ್ತವೆ. ನಮಗೇನೋ ಇಂತಹ ಮಾತು ಅಸಹ್ಯಕರವಾಗಿ ಕಾಣುವುದು ಸಹಜ. ಆದರೆ ಜೀವನದ ಸರ್ವ ಅಂಗಗಳನ್ನೂ ಒಳಗೊಂಡ `ಭೂಮಾ’ಪೂಜಕರಾದ ಪ್ರಾಚೀನರು ಈ ತರಹದ ನಗೆಚಾಟಿಕೆಗೂ ತಕ್ಕ ಸ್ಥಾನವನ್ನೇ ಕೊಟ್ಟದ್ದಾರೆಂದು ತೋರುತ್ತದೆ.

ಛಂದಸ್ಸು:- ತ್ರಿಪದಿ.

ಶಬ್ದಪ್ರಯೋಗಗಳು:- ಸರಕ್ಕ ಸರಿತಲ್ಲ=ಕಾರ್ಯವೆಲ್ಲ ಸರಕ್ಕನೆ ಮುಗಿಯಿತಲ್ಲ. ಸುರಪ್ಪ=ಸ್ವರೂಪ. ಭಣವಿ=ಮೇವಿನ ಒಟ್ಟಲು. ಬೋಳ್ಹೋರಿ=ಕೊಂಬು ಮುರಿದ ಹೋರಿ. ಹೊರಿಹುಲ್ಲು=ಬಾಚಿಕೊಳ್ಳದ ಮುಂಗುರುಳು. ಗುಳ್ಳ=ಮಂಗಲಸೂತ್ರ. ಕೈಪಾಳಿ=ಹಿಡಿಕೆಯ ಬಟ್ಟಲು. ಎಟ್ಟೊತ್ತಾಯ್ತು=ಎಷ್ಟೋ ಹೊತ್ತಾಯ್ತು. ಕೂಕಂ-ಕುಂಕುಮ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...