Home / ಕವನ / ಕೋಲಾಟ / ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ

ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ

ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ

ಕಟ್ಟಿದ ಕಾಲೀಯಾ ಪರದಾಣೀ ನನ್ನ ಒಡೆಯ
ಕಂತೂಕೂ ಹೋಗೂವಾ ಶೂಲಮ್ಮ ಕೋಲೇ || ೧ ||

ಊರ ವಂದೇ ಹತ್ತು ಮಂದಿಗೆ ಹೇಳೂಕೆಯಾ ಕೊಡುವಾನೋ ಮೀರಾಶೀ ಮಗನೇ
ಊರ ವಂದೇ ಹತ್ತು ಮಂದೀ ಶೈವಾಗೆ ಬರುವಾರೆ ಕೋಲೇ || ೨ ||

ಕೊಪ್ಪರದಾ ಈಳೇಯಾ ತಡದಾನೋ ಮೀರಾಶೀ ಮಗನೆ
ಕಾಯೋಂದ ಕರಿಯೆಲೆಯಾನು ತಡದಾನು ಮೀರಾಶೀ ಮಗನೇ || ೩ ||

ಗಂಟೆ ದೂಪಾವಾ ತಡದಾನೋ ಮೀರಾಶೀ ಮಗನೆ
ಅಕಲಿ ಮಗ ಮುಂದಾಗೀ ಮೀರಾಶೀ ಮಗನೆ ಹಿಂದಾಗೀ || ೪ ||

ಊರ ಹತ್ ಮಂದಿ ನೆಡಗಾಗೀ ನೆಡದಾರೋ ಕೋಲೇ
ನೆಡದಾರೋ ಬರಶೀಮಣ್ಣಿನಾ ಗುಡೇಗಾಗಿ ಕೋಲೇ || ೫ ||

ಕಾಯೊಂದ ಕರಿಯೆಲೆಯ ಯತವಾನು ಮೀರಾಶೀ ಮಗನೆ
ಗೆಂಟ್ಯೊಂದು ದೂಪ-ದೀಪವ ತೋ ರ್ಯಾನು ಮೀರಾಶೀ ಮಗನೇ || ೬ ||

ಕರದಿಂಗಳಕ ಕೋಲ ಕಡುದರಲೋ ಕೋಲೇ
ಕರದಿಂಗಳಕ ಕೋಲ ಕಡುದರೋ ಆನಾ ಕೋಲು || ೭ ||

ಬೆಳುದಂಗಳಕ್ಕೆ ಕೋಲ ಬೆಳುಶಿದರೋ ಕೋಲೇ
ಆಸಾರೀ ಮಗನಾ ಕೈಯಲಿ ಕೊಡುವಾರೋ ಕೋಲೇ || ೮ ||
*****
ಕೆಲವು ಪದಗಳ ವಿವರಣೆ
ಕೊಪ್ಪರ = ಕರ್ಪೂರ
ಮದ್ದಲೆ = ನವಿಲಕುಂಚ (ಗಿರಿ)
ಮುಸ್ತಾಪಾ = ಬಿರುದು-ದುಸ್ತು
ಹುಲಿಮಿರಗನ ಶೆಲ್ಲಿ (ಚರ್ಮ) ಮಿಗ = ಮೃಗ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...