Home / ಕವನ / ಕವಿತೆ / ಜಯ ಭಾರತ!

ಜಯ ಭಾರತ!

– ಪಲ್ಲವಿ –
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲವಿಖ್ಯಾತೇ !
ಜಯ ಸತ್ಯಸಾರ ಸಂಭೂತೇ….
ಜಯ ಜಯ ಭಾರತ ಭೂಮಾತೇ !


ವರುಣದೇವ ವರವಾಗಿ ನೀಡಿರುವ
ಶರನಿಧಿಗಳು ಘೂರ್ಣಿಸುತ….
ಮೊರೆಯುತಿಹವು ಹಗಲಿರುಳನು ಗಣಿಸದೆ
ನಿನ್ನ ಯಶದ ಸಂಗೀತ !
ಮೂಡಣ ಪಡುವಣ ತೆಂಕಣ ಗಡಿಯೊಳು
ಎಲ್ಲೆಲ್ಲಿಯು ಜಲದೂತ-
ಹೂಡಿಯಿರುವ ಕಾಸಿನ ಕಡುಗೋಂಟೆಯ
ನಿನ್ನ ರಾಜ್ಯ ನಿರ್ಭೀತ !
ಹೆಣೆದಿವೆ ಅಲೆಗಳ ಮಾಲೆ….ರ-
ಕ್ಷಣೆಯನ್ನು ಪಡೆದಿವೆ ವೇಲೆ….ಓ
ಜನನಿ, ನಿನಗಿರದು ಸೋಲೇ !
ಜಯ ಜಯ ಭಾರತ ಭೂಮಾತೇ-ಜಯ-
ಜಯ ಮಹಿಮಾಕುಲವಿಖ್ಯಾತೇ !


ಗಿರಿಯ ರಾಜ ಪರಿವಾರ ಸಹಿತ ನಿಂ-
ತಿರುವ ಬಡಗಲಲ್ಲಿ….
ಹೊರೆಯುತಿರುವ ದಿಗ್‌ನಾಗನಾಗಿ ನಿಡು-
ನೋಟಗಳನು ಚೆಲ್ಲಿ ;
ಹರಿಸುತಿಹನು ನಿರ್ಝರಿಣಿಗಳನು ನೂ-
ರಾರು ರೂಪಗಳಲಿ….
ಸಿರಿಯಿಂದಲಿ ನಿನ್ನರಮನೆ ತುಂಬುವ
ಹೃದಯಾಕೂತಿಯಲಿ.
ಸುರಗಂಗೆಯನಿಳುಹಿರುವ-ಸುಧೆ-
ಯೊರತೆಯನ್ನು ಬಲಿದಿರುವ-ಬಲ-
ದರಿಮೆಯನ್ನು ಬೆಳಸಿರುವ…
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ !


ಮೊದಲು ನಿನ್ನಂಗಣದಲಿ ಹರಡಿದನು
ರವಿಯು ಕಿರಣ ಜಾಲಾ…
ಮೊದಲ ಬೆಳಕು ಕಂಡವಳು ನೀನೆ ತೋ-
ರಿದೆಯೆ ಲೋಕಕೆಲ್ಲಾ !
ನಿನ್ನ ಸಂತಾನ ಮನು-ಮುನಿ ವಿತಾನ
ಹಾಡಿ ಸಾಮಗಾನಾ….
ಬನ್ನಗಳನ್ನು ನೀಗಿಸಿತು ಬಾಳಿನೊಳೆ
ಮಾಡಿ ಅಮೃತಪಾನಾ !
ಜಗವು ಜಡತಿಯಲ್ಲಿರಲು-ನಿನ-
ಗೊಗೆಯಿತಂದೆ ಮುಂಬಗಲು-ಇದು
ನಿನ್ನ ವುಣ್ಯದೊಂದರಳು….
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ!


ಧರ್ಮದೈವತದ ಮರ್ಮವರಿದು ಕೈ –
ಗೊಡುತ ಕರೆದು ತಂದೆ….
ಕರ್ಮದಾ ಹುರುಳ ಮೊರ್ಮೆದಲೆ ತಿಳಿದು
ದುರ್ಮತಿಯನೆಲ್ಲ ಕೊಂದೆ.
ನೂರು ನೂರು ತರೆಯೂರಿನಲ್ಲಿ ಮರೆ-
ಗೊಂಡ ಸತ್ಯ ಮುಖವ…
ಏರಿ ಮೇಲೆ, ತರೆಹಾರಿಸುತ ಜಗಕೆ
ತೋರಿದೆ ನಿಜಸುಖವ.
ಕವಿರಾಜರ ನೀ ಕರೆದೆ-ನವ-
ನವ ಕಾವ್ಯದ ಮಳೆಗರೆದೆ-ಭುವಿ-
ಗೆಲ್ಲ ಜೀವಕಳೆಯೆರೆದೆ….
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ !
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...