ಜಯ ಭಾರತ!

– ಪಲ್ಲವಿ –
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲವಿಖ್ಯಾತೇ !
ಜಯ ಸತ್ಯಸಾರ ಸಂಭೂತೇ….
ಜಯ ಜಯ ಭಾರತ ಭೂಮಾತೇ !


ವರುಣದೇವ ವರವಾಗಿ ನೀಡಿರುವ
ಶರನಿಧಿಗಳು ಘೂರ್ಣಿಸುತ….
ಮೊರೆಯುತಿಹವು ಹಗಲಿರುಳನು ಗಣಿಸದೆ
ನಿನ್ನ ಯಶದ ಸಂಗೀತ !
ಮೂಡಣ ಪಡುವಣ ತೆಂಕಣ ಗಡಿಯೊಳು
ಎಲ್ಲೆಲ್ಲಿಯು ಜಲದೂತ-
ಹೂಡಿಯಿರುವ ಕಾಸಿನ ಕಡುಗೋಂಟೆಯ
ನಿನ್ನ ರಾಜ್ಯ ನಿರ್ಭೀತ !
ಹೆಣೆದಿವೆ ಅಲೆಗಳ ಮಾಲೆ….ರ-
ಕ್ಷಣೆಯನ್ನು ಪಡೆದಿವೆ ವೇಲೆ….ಓ
ಜನನಿ, ನಿನಗಿರದು ಸೋಲೇ !
ಜಯ ಜಯ ಭಾರತ ಭೂಮಾತೇ-ಜಯ-
ಜಯ ಮಹಿಮಾಕುಲವಿಖ್ಯಾತೇ !


ಗಿರಿಯ ರಾಜ ಪರಿವಾರ ಸಹಿತ ನಿಂ-
ತಿರುವ ಬಡಗಲಲ್ಲಿ….
ಹೊರೆಯುತಿರುವ ದಿಗ್‌ನಾಗನಾಗಿ ನಿಡು-
ನೋಟಗಳನು ಚೆಲ್ಲಿ ;
ಹರಿಸುತಿಹನು ನಿರ್ಝರಿಣಿಗಳನು ನೂ-
ರಾರು ರೂಪಗಳಲಿ….
ಸಿರಿಯಿಂದಲಿ ನಿನ್ನರಮನೆ ತುಂಬುವ
ಹೃದಯಾಕೂತಿಯಲಿ.
ಸುರಗಂಗೆಯನಿಳುಹಿರುವ-ಸುಧೆ-
ಯೊರತೆಯನ್ನು ಬಲಿದಿರುವ-ಬಲ-
ದರಿಮೆಯನ್ನು ಬೆಳಸಿರುವ…
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ !


ಮೊದಲು ನಿನ್ನಂಗಣದಲಿ ಹರಡಿದನು
ರವಿಯು ಕಿರಣ ಜಾಲಾ…
ಮೊದಲ ಬೆಳಕು ಕಂಡವಳು ನೀನೆ ತೋ-
ರಿದೆಯೆ ಲೋಕಕೆಲ್ಲಾ !
ನಿನ್ನ ಸಂತಾನ ಮನು-ಮುನಿ ವಿತಾನ
ಹಾಡಿ ಸಾಮಗಾನಾ….
ಬನ್ನಗಳನ್ನು ನೀಗಿಸಿತು ಬಾಳಿನೊಳೆ
ಮಾಡಿ ಅಮೃತಪಾನಾ !
ಜಗವು ಜಡತಿಯಲ್ಲಿರಲು-ನಿನ-
ಗೊಗೆಯಿತಂದೆ ಮುಂಬಗಲು-ಇದು
ನಿನ್ನ ವುಣ್ಯದೊಂದರಳು….
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ!


ಧರ್ಮದೈವತದ ಮರ್ಮವರಿದು ಕೈ –
ಗೊಡುತ ಕರೆದು ತಂದೆ….
ಕರ್ಮದಾ ಹುರುಳ ಮೊರ್ಮೆದಲೆ ತಿಳಿದು
ದುರ್ಮತಿಯನೆಲ್ಲ ಕೊಂದೆ.
ನೂರು ನೂರು ತರೆಯೂರಿನಲ್ಲಿ ಮರೆ-
ಗೊಂಡ ಸತ್ಯ ಮುಖವ…
ಏರಿ ಮೇಲೆ, ತರೆಹಾರಿಸುತ ಜಗಕೆ
ತೋರಿದೆ ನಿಜಸುಖವ.
ಕವಿರಾಜರ ನೀ ಕರೆದೆ-ನವ-
ನವ ಕಾವ್ಯದ ಮಳೆಗರೆದೆ-ಭುವಿ-
ಗೆಲ್ಲ ಜೀವಕಳೆಯೆರೆದೆ….
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯೆ ಕನ್ನಡಾಂಬೆಗೆ
Next post ಭೋಂಗಾನಾದ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys