ಧಾರವಾಡಕ್ಕೆ

ಧಾರವಾಡ –
ನನ್ನ ಭಾರವಾದ
ಹೃದಯದಿಂದಿಳಿದ
ಕವಿತೆ ಇದು

ನಿನ್ನ ಮಡಿಲೊಳಗಿಟ್ಟು
ಕೆಲ ಕಾಲ ತೂಗಿ
ನಗಿಸಿ – ನನ್ನೊಳಗಿಂದ
ಆಳವಾಗಿ
ಬದುಕುವ ಕಲೆಯ ಕಲಿಸಿದೆ ನನಗೆ
ನಿನ್ನ ನೆನೆಯುತ್ತೇನೆ ಅಹೋರಾತ್ರಿ

ಇಲ್ಲಿ
ಮೋಡಗಳ ನಡುವೆ ನಡೆದಾಡುವಾಗ
ನಗುವಾಗ ಅಳುವಾಗ ದುಃಖವಾದಾಗ
ಈ ನನ್ನ ಮನಸ್ಸು ಮುಟ್ಟುತ್ತದೆ
ಮಾಳಮಡ್ಡಿ
ಸಪ್ತಾಪುರ

ಗೊತ್ತು, ಗುರಿಯಿಲ್ಲದೆ ಅಲ್ಲಿ ಅಲೆದಿದ್ದೇನೆ
ಹುಡುಕಿದ್ದೇನೆ
ನನ್ನನ್ನು ನಾನೆ
ನನ್ನ ಕಥೆಗಳೋ – ಮುಟ್ಟಿದರೆ ಜುಮ್ಮೆನುವ
ಶೃತಿ ಮಾಡಿಟ್ಟ ವೀಣೆ

ನೀ ನನಗೆ ಕೊಟ್ಟಿರುವ ಆತ್ಮೀಯ ಸುಖಕ್ಕೆ
ಎದೆ ಕೊರೆವ ನೋವಿಗೆ
ನೀರಿಗೆ
ಹಾಲಿಗೆ
ಫೇಡೆಗೆ
ಕವಿತೆಗೆ

ತಾಯೀ,
ನಾ ನಿನಗೆ ಏನು ಕೊಟ್ಟಿದ್ದೇನೆ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಹಾಡು
Next post ನಮಕು ಹರಾಮು ನಾಗಪ್ಪಯ್ಯ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…