ಧಾರವಾಡಕ್ಕೆ

ಧಾರವಾಡ –
ನನ್ನ ಭಾರವಾದ
ಹೃದಯದಿಂದಿಳಿದ
ಕವಿತೆ ಇದು

ನಿನ್ನ ಮಡಿಲೊಳಗಿಟ್ಟು
ಕೆಲ ಕಾಲ ತೂಗಿ
ನಗಿಸಿ – ನನ್ನೊಳಗಿಂದ
ಆಳವಾಗಿ
ಬದುಕುವ ಕಲೆಯ ಕಲಿಸಿದೆ ನನಗೆ
ನಿನ್ನ ನೆನೆಯುತ್ತೇನೆ ಅಹೋರಾತ್ರಿ

ಇಲ್ಲಿ
ಮೋಡಗಳ ನಡುವೆ ನಡೆದಾಡುವಾಗ
ನಗುವಾಗ ಅಳುವಾಗ ದುಃಖವಾದಾಗ
ಈ ನನ್ನ ಮನಸ್ಸು ಮುಟ್ಟುತ್ತದೆ
ಮಾಳಮಡ್ಡಿ
ಸಪ್ತಾಪುರ

ಗೊತ್ತು, ಗುರಿಯಿಲ್ಲದೆ ಅಲ್ಲಿ ಅಲೆದಿದ್ದೇನೆ
ಹುಡುಕಿದ್ದೇನೆ
ನನ್ನನ್ನು ನಾನೆ
ನನ್ನ ಕಥೆಗಳೋ – ಮುಟ್ಟಿದರೆ ಜುಮ್ಮೆನುವ
ಶೃತಿ ಮಾಡಿಟ್ಟ ವೀಣೆ

ನೀ ನನಗೆ ಕೊಟ್ಟಿರುವ ಆತ್ಮೀಯ ಸುಖಕ್ಕೆ
ಎದೆ ಕೊರೆವ ನೋವಿಗೆ
ನೀರಿಗೆ
ಹಾಲಿಗೆ
ಫೇಡೆಗೆ
ಕವಿತೆಗೆ

ತಾಯೀ,
ನಾ ನಿನಗೆ ಏನು ಕೊಟ್ಟಿದ್ದೇನೆ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಹಾಡು
Next post ನಮಕು ಹರಾಮು ನಾಗಪ್ಪಯ್ಯ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

cheap jordans|wholesale air max|wholesale jordans|wholesale jewelry|wholesale jerseys