ಧಾರವಾಡಕ್ಕೆ

ಧಾರವಾಡ –
ನನ್ನ ಭಾರವಾದ
ಹೃದಯದಿಂದಿಳಿದ
ಕವಿತೆ ಇದು

ನಿನ್ನ ಮಡಿಲೊಳಗಿಟ್ಟು
ಕೆಲ ಕಾಲ ತೂಗಿ
ನಗಿಸಿ – ನನ್ನೊಳಗಿಂದ
ಆಳವಾಗಿ
ಬದುಕುವ ಕಲೆಯ ಕಲಿಸಿದೆ ನನಗೆ
ನಿನ್ನ ನೆನೆಯುತ್ತೇನೆ ಅಹೋರಾತ್ರಿ

ಇಲ್ಲಿ
ಮೋಡಗಳ ನಡುವೆ ನಡೆದಾಡುವಾಗ
ನಗುವಾಗ ಅಳುವಾಗ ದುಃಖವಾದಾಗ
ಈ ನನ್ನ ಮನಸ್ಸು ಮುಟ್ಟುತ್ತದೆ
ಮಾಳಮಡ್ಡಿ
ಸಪ್ತಾಪುರ

ಗೊತ್ತು, ಗುರಿಯಿಲ್ಲದೆ ಅಲ್ಲಿ ಅಲೆದಿದ್ದೇನೆ
ಹುಡುಕಿದ್ದೇನೆ
ನನ್ನನ್ನು ನಾನೆ
ನನ್ನ ಕಥೆಗಳೋ – ಮುಟ್ಟಿದರೆ ಜುಮ್ಮೆನುವ
ಶೃತಿ ಮಾಡಿಟ್ಟ ವೀಣೆ

ನೀ ನನಗೆ ಕೊಟ್ಟಿರುವ ಆತ್ಮೀಯ ಸುಖಕ್ಕೆ
ಎದೆ ಕೊರೆವ ನೋವಿಗೆ
ನೀರಿಗೆ
ಹಾಲಿಗೆ
ಫೇಡೆಗೆ
ಕವಿತೆಗೆ

ತಾಯೀ,
ನಾ ನಿನಗೆ ಏನು ಕೊಟ್ಟಿದ್ದೇನೆ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಹಾಡು
Next post ನಮಕು ಹರಾಮು ನಾಗಪ್ಪಯ್ಯ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…