Home / ಕವನ / ಕವಿತೆ / ಮಣ್ಣಿನ ಹಾಡು

ಮಣ್ಣಿನ ಹಾಡು

ಬೆಂಕಿಯುದರ ಹಡೆದ ತಂಪು ತೇಜ ಇವಳು
ಯಾರ ತಪೋಮಣಿಯೋ!
ಯಾವ ಆಟದ ಚೆಂಡೋ!
ಗೋಲಿ ಗುಂಡೋ!
ಬೈಗು ಬೆಳಗುಗಳಲ್ಲಿ ಲಜ್ಜೆಯೇರಿ
ಹಗಲೆಲ್ಲ ಕಾವೇರಿ ಇರುಳೆಲ್ಲ ಇನಿಯನ ಸೆಜ್ಜೆಯೇರಿ
ಪ್ರದಕ್ಷಿಣೆಯ ನೇಮವ ಚಾಚೂ ತಪ್ಪದೆ ಪಾಲಿಸಿ
ಪ್ರಿಯನನೋಲೈಸಿ ಪ್ರಣಯಕೇಳಿಯಲನವರತ
ರಮಿಸಿ ದಣಿಯದವಳು
ಹಾಲುನಗುತ್ತ ಇವಳ ಮುದ್ದಿನ ಕಂದ
ಇವಳ ಸೆರಗನೇ ಹಿಡಿದಾಡುವನು
ವಿರಹದಲ್ಲೊಣಗಿ ತಪತಪ ತಪಿಸಿದಾಗಿವಳು
ಮೇಲಿಂದೊಲವಿಳಿಯೆ ಹನಿಹನಿ
ಬಾಯ್ದೆರೆದು ಸವಿದು ಮೈ ಪುಲಕಗೊಂಡು
ಹಸಿರುಟ್ಟು ಹೂಮುಡಿದು ಹಣ್ಣ ನೆಡೆಮಾಡುವಳು

ಉಸಿರ ಚೀಲಗಳ ಹೆತ್ತು ಹೊತ್ತ ತುತ್ತಿಟ್ಟು ಸಲಹುವಳು
ಉಂಡು ಉಣಿಸಿ ಮಡಿಲಿಂಗದವಳು
ಹುಳುಗಳ ಕಚ್ಚಾಟ ಕಡಿದಾಟಗಳನೆಲ್ಲ
ನಸುನಗುತ ತಾಳಿಕೊಂಡು ಬಾಳುವಳು
ಆಗಾಗ ಆಯೆಂದು ನುಂಗಿ ನೀರುಕುಡಿದು
ಬೆಂಕಿ ಸೀನುಗಳ ಸೀನಿ
ಮತ್ತೆ ಏನೂ ಆಗಿಲ್ಲವೆಂಬಂತೆ ಮೌನತಾಳುವಳು

ಹಳೆಕತೆಗಳ ಮೆಲುಕು ಹಾಕುತ್ತ ತಾಂಬೂಲದಂತೆ
ಪಿಚಕ್ಕೆಂದುಗುಳಿ ಮೇಲೆ ಮಣ್ಣು ಮುಚ್ಚಿ
ಎಂದಿನಂತೆ ನಿರ್ಲಿಪ್ತ ಬೀಗುವಳು
ನಾನೆಂದೆಂಬ ದೊಂಬಿಗರನು ತಿಂದು ತೇಗುವಳು
ಅಮಲೇರಿ ಬುಗುರಿಯಾಡುವಳು

ಮುಪ್ಪರಿಯದ ಮುದುಕಿ ಇವಳಿಗೆ
ದಿನದಿನಕೂ ಹೊಸ ಹರೆಯ ಎಲ್ಲಿಂದ ಬರುವುದೋ?
ದಣಿದು ಬಂದವರ ತನ್ನ ಮಡಿಲಲ್ಲಿ ತಟ್ಟಿ
ಚಿರನಿದ್ರೆಯ ಸೆರಗು ಹೊದಿಸಿ
ಲಾಲಿ ಹಾಡಿ ಮಲಗಿಸುವಳು

ಈ ಜೋಗಿತಿಯ ಜೋಗುಳ ಹಾಡಿನಲ್ಲಿ
ಎಬ್ಬಿಸುವ ಹಾಡಾವುದೋ!
ಮಲಗಿಸುವ ಹಾಡಾವುದೋ!
ತಿಳಿಯದು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...