Home / ಕವನ / ಕವಿತೆ / ಅನ್ನಿಸಿತೇ ನಿಮಗನ್ನಸಿತೇ?

ಅನ್ನಿಸಿತೇ ನಿಮಗನ್ನಸಿತೇ?

ಬಸ್ಸಿಗೆ ಕಾದು ಸುಸ್ತಾದಾಗ
ಸೀಟೂ ಸಿಕ್ಕದೆ ನಿಂತಿದ್ದಾಗ
ಬ್ರಹ್ಮವೆ ಸತ್ಯ ಜಗತ್ತು ಮಿಥ್ಯ
ಅನ್ನಿಸಿತೇ ನಿಮಗನ್ನಿಸಿತೇ ?

ತಿಂಡಿಯ ಮೇಲೆ ತಿಂಡಿಯ ತಿಂದು
ಹೊಟ್ಟೆ ತುಂಬದೆಯೂ ಬಿಲ್ಲನು ಕಂಡು
ಬೆಚ್ಚಿ ಬಿದ್ದಿರಿ ಎದ್ದು ನಿಂತಿರಿ
ಬ್ರಹ್ಮವೇ ಸತ್ಯ ಜಗತ್ತು ಮಿಥ್ಯ
ಅನ್ನಿಸಿತೇ ನಿಮಗನ್ನಿಸಿತೇ ?

ತಿಂಗಳ ಸಂಬಳ ಜೇಬಿಗೆ ಹಾಕಿ
ಓಡಿಯೇ ಬಂದಿರಿ ರೂಮಿಗೆ ಜೀಕಿ
ಪರ್ಸನು ತೆಗೆದರೆ ದುಡ್ಡೇ ಇಲ್ಲ
ನೀರಗುಳ್ಳೆಯು ನಿಜವೇ ಅಲ್ಲ
ಬ್ರಹ್ಮವೇ ಸತ್ಯ ಜಗತ್ತು ಮಿಥ್ಯ
ಅನ್ನಿಸಿತೇ ನಿಮಗನ್ನಿಸಿತೇ ?

ಹಿತ್ತಿಲ ತುಂಬಾ ದುಡ್ಡಿನ ರಾಶಿ
ಮನೆ ಎದುರಲ್ಲೇ ನಿಂತಿದೆ ಕಾಶಿ
ಸುಖವೇ ಸುಖ ಆಹಾ ಸಖ
ಎಲ್ಲಾ ನಿನ್ನದು ಹೇ ಗಜಮುಖ
ಎದ್ದು ಕುಳಿತರೆ ಎಲ್ಲವೂ ಕನಸು
ಹಿತ್ತಿಲಿನಿಂದ ವಾಸನೆ ಹೊಲಸು
ಬ್ರಹ್ಮವೇ ಸತ್ಯ ಜಗತ್ತು ಮಿಥ್ಯ
ಅನ್ನಿಸಿತೇ ನಿಮಗನ್ನಿಸಿತೇ?

ಪ್ರೀತಿಯ ಗೆಳೆಯ ಕೆಂಡ ಕಾರಿದ
ಅಪ್ರಾಮಾಣಿಕ ಎಂದೇ ಜರಿದ
ನಿಮ್ಮೆದುರಲ್ಲೇ ಕವಿತೆಯ ಹರಿದ
ವಿಟ ನಗೆ ನಕ್ಕ ಅಯ್ಯೋ ಠಕ್ಕ !
ಬ್ರಹ್ಮವೇ ಸತ್ಯ ಜಗತ್ತು ಮಿಥ್ಯ
ಅನ್ನಿಸಿತೇ ನಿಮಗನ್ನಿಸಿತೇ ?
*****

 

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...