ಶೋಕ ಗೀತೆ

ಹೋದುದಲ್ಲಾ! ಎಲ್ಲಾ ಹೋದುದಲ್ಲಾ!

ಹೋದುದೆಲ್ಲವು ಕಣ್ಣ ಹಿಂದೆ
ಖೇದವಿನ್ನೆನಗುಳಿದುದೊಂದೆ
ಹೇ ದಯಾನಿಧೆ! ಪ್ರೇಮದಿಂದೆ
ಹಾದಿ ತೋರಿಸಿ ನಡಿಸು ಮುಂದೆ
ಹೋದುದಲ್ಲಾ, ಎಲ್ಲಾ ಹೋದುದಲ್ಲಾ.

ತೊಡೆಯ ತೊಟ್ಟಿಲೊಳೆನ್ನನಿಟ್ಟು,
ಕುಡಿಸಿ ಮಮತೆಯ ಗುಣವ ನೆಟ್ಟು,
ಬಿಡದೆ ವಿದ್ಯೆಯ ಬಾಯ್ಗೆಕೊಟ್ಟು
ನಡೆದನೆನ್ನನು ಮರುಗಬಿಟ್ಟು
ಹೋದನಲ್ಲಾ, ಅಪ್ಪ ಹೋದನಲ್ಲಾ.

ಆಟದಿಂದೆನ್ನೊಡನೆ ಬೆಳೆದು,
ಊಟಕೂಟದ ಪ್ರೇಮ ತಳೆದು,
ಕೋಟಲೆಯ ಸಂಸಾರ ಕಳೆದು
ದಾಟಿದನು ಮಮ ಹೃದಯ ಸೆಳೆದು
ಹೋದನಲ್ಲಾ, ತಮ್ಮ ಹೋದನಲ್ಲಾ.

ಮನದಿ ಕೃಷ್ಣತೆಯನ್ನು ಮುಚ್ಚಿ,
ಕನಕತನು ಸೌಂದರ್‍ಯ ಬಿಚ್ಚಿ
ಧನದ ಕಪಟ ಸ್ನೇಹ ಹಚ್ಚಿ
ಕೊನೆಗೆ ಮಿತ್ರ ಭುಜಂಗ ಕಚ್ಚಿ
ಹೋದನಲ್ಲಾ ಮಿತ್ರ ಹೋದನಲ್ಲಾ.

ಅಲೆಯ ಬಡಿತಕೆ ಜಾರ್‍ವ ಮಳಲೋಲ್
ಕೆಳಗಿಳಿವ ಹೊತ್ತರೆಯ ನೆಳಲೋಲ್
ತಳದ ತೂತಿನ ಗಡಿಗೆ ಜಲದೋಳ್
ತಿಳಿದು ತಿಳಿಯದೆ ನೂರಬುದದೋಲ್
ಹೋದುದಲ್ಲಾ, ಪ್ರಾಯ ಹೋದುದಲ್ಲಾ.

ತೋರದಂದದಿ ಸೇರಿ ತೋರುತ
ಭೂರಿ ಸುಖ ಸಂತಸವ ಕೋರುತ
ನೀರಿನೋಲ್ ಕೈಯಿಂದ ಜಾರುತ
ಹಾರಿ ಹೋದುದು ದುಃಖ ಕಾರುತ
ಹೋದುದಲ್ಲಾ, ದ್ರವ್ಯ ಹೋದುದಲ್ಲಾ.

ಅಕಟ! ಈ ಸಂಸಾರದೊಳಗೆ
ಸಕಲ ನಾಶಕೆ ಮೂರು ಗಳಿಗೆ
ಶಕಟ ನಂದದಿ ತಿರುಗಿ ಕೆಳಗೆ
ವಿಕಟ ಭಾರತನಾದೆನಿಳೆಗೆ

ಹೋದುದನು ನಾ ಮರುಗದಂದವ
ಗೈದು ಬಿಗಿ ವೈರಾಗ್ಯ ಬಂಧವ,
ಓ ದಯಾನಿಧೆ ಭಕ್ತಬಾಂಧವ
ಮೋದದಿಂದವತರಿಸಿ ಬಂದವ.
*****
(ಕವಿಶಿಷ್ಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಳವೆನುವಾ ತರುಲತೆಗಳನೊಂಟಿ ಮಾಡುವುದ್ಯಾಕೋ?
Next post ಕನ್ನಡ ಕಾವ್ಯಧಾತುವಿಗೆ ಅಂಟಿಕೊಂಡಿರುವ ಆತ್ಮೀಯ ಕವಿ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys