ಶೋಕ ಗೀತೆ

ಹೋದುದಲ್ಲಾ! ಎಲ್ಲಾ ಹೋದುದಲ್ಲಾ!

ಹೋದುದೆಲ್ಲವು ಕಣ್ಣ ಹಿಂದೆ
ಖೇದವಿನ್ನೆನಗುಳಿದುದೊಂದೆ
ಹೇ ದಯಾನಿಧೆ! ಪ್ರೇಮದಿಂದೆ
ಹಾದಿ ತೋರಿಸಿ ನಡಿಸು ಮುಂದೆ
ಹೋದುದಲ್ಲಾ, ಎಲ್ಲಾ ಹೋದುದಲ್ಲಾ.

ತೊಡೆಯ ತೊಟ್ಟಿಲೊಳೆನ್ನನಿಟ್ಟು,
ಕುಡಿಸಿ ಮಮತೆಯ ಗುಣವ ನೆಟ್ಟು,
ಬಿಡದೆ ವಿದ್ಯೆಯ ಬಾಯ್ಗೆಕೊಟ್ಟು
ನಡೆದನೆನ್ನನು ಮರುಗಬಿಟ್ಟು
ಹೋದನಲ್ಲಾ, ಅಪ್ಪ ಹೋದನಲ್ಲಾ.

ಆಟದಿಂದೆನ್ನೊಡನೆ ಬೆಳೆದು,
ಊಟಕೂಟದ ಪ್ರೇಮ ತಳೆದು,
ಕೋಟಲೆಯ ಸಂಸಾರ ಕಳೆದು
ದಾಟಿದನು ಮಮ ಹೃದಯ ಸೆಳೆದು
ಹೋದನಲ್ಲಾ, ತಮ್ಮ ಹೋದನಲ್ಲಾ.

ಮನದಿ ಕೃಷ್ಣತೆಯನ್ನು ಮುಚ್ಚಿ,
ಕನಕತನು ಸೌಂದರ್‍ಯ ಬಿಚ್ಚಿ
ಧನದ ಕಪಟ ಸ್ನೇಹ ಹಚ್ಚಿ
ಕೊನೆಗೆ ಮಿತ್ರ ಭುಜಂಗ ಕಚ್ಚಿ
ಹೋದನಲ್ಲಾ ಮಿತ್ರ ಹೋದನಲ್ಲಾ.

ಅಲೆಯ ಬಡಿತಕೆ ಜಾರ್‍ವ ಮಳಲೋಲ್
ಕೆಳಗಿಳಿವ ಹೊತ್ತರೆಯ ನೆಳಲೋಲ್
ತಳದ ತೂತಿನ ಗಡಿಗೆ ಜಲದೋಳ್
ತಿಳಿದು ತಿಳಿಯದೆ ನೂರಬುದದೋಲ್
ಹೋದುದಲ್ಲಾ, ಪ್ರಾಯ ಹೋದುದಲ್ಲಾ.

ತೋರದಂದದಿ ಸೇರಿ ತೋರುತ
ಭೂರಿ ಸುಖ ಸಂತಸವ ಕೋರುತ
ನೀರಿನೋಲ್ ಕೈಯಿಂದ ಜಾರುತ
ಹಾರಿ ಹೋದುದು ದುಃಖ ಕಾರುತ
ಹೋದುದಲ್ಲಾ, ದ್ರವ್ಯ ಹೋದುದಲ್ಲಾ.

ಅಕಟ! ಈ ಸಂಸಾರದೊಳಗೆ
ಸಕಲ ನಾಶಕೆ ಮೂರು ಗಳಿಗೆ
ಶಕಟ ನಂದದಿ ತಿರುಗಿ ಕೆಳಗೆ
ವಿಕಟ ಭಾರತನಾದೆನಿಳೆಗೆ

ಹೋದುದನು ನಾ ಮರುಗದಂದವ
ಗೈದು ಬಿಗಿ ವೈರಾಗ್ಯ ಬಂಧವ,
ಓ ದಯಾನಿಧೆ ಭಕ್ತಬಾಂಧವ
ಮೋದದಿಂದವತರಿಸಿ ಬಂದವ.
*****
(ಕವಿಶಿಷ್ಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಳವೆನುವಾ ತರುಲತೆಗಳನೊಂಟಿ ಮಾಡುವುದ್ಯಾಕೋ?
Next post ಕನ್ನಡ ಕಾವ್ಯಧಾತುವಿಗೆ ಅಂಟಿಕೊಂಡಿರುವ ಆತ್ಮೀಯ ಕವಿ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…