Home / ಕವನ / ಕವಿತೆ / ನಿರಾಳ

ನಿರಾಳ

ಉತ್ತಿದ ಮಣ್ಣು
ಮೈ ತುಂಬಾ ಕೆಂಗಣ್ಣಾಗಿ
ಎದೆ ತುಂಬ ಬಿಸಿ ಉಸಿರು
ಹೆಜ್ಜೆ ಇಟ್ಟಲ್ಲೆಲ್ಲ ಧೂಳು
ಮತ್ತೆ ಮತ್ತೆ ಮುಖಕೆ ರಾಚಿ
ಮಳೆಗಾಗಿ ಹಪಹಪಿಸಿ ಅಳುವ ದೈನ್ಯತೆ.

ಕಾಲಿಟ್ಟಲ್ಲೆಲ್ಲ ಒಣಗರಿಕೆ
ಬೆಟ್ಟದೊಳಗಿನ ಬೋಳು ಗಿಡಮರ
ನದಿಯ ತಳದ ಬಿರುಕು
ಬಸವಳಿದು ಬೋರಲಾದ ಮನ,
ನಕ್ಷತ್ರಗಳು ಫಳಫಳ ಹೊಳೆದದ್ದು
ನಾಡು ಧಗಧಗಿಸಿ ನೀರ್‍ಗುದುರೆಯಾದದ್ದು
ಹಿಡಿತಕ್ಕೆ ಸಿಗದ ನೋವು ನರಳಾಟ
ಕಣ್ಣೀರಿಲ್ಲದ ಅಳು.

ಗಂಟಲುಬ್ಬಿನ ಎದೆಯಾಳದ ಆರ್‍ತಧ್ವನಿ
ಏರಿ ಏರಿ ಮೇಲೇರಿ ಹಬ್ಬಿಹರವಿನೊಳಗೆ
ಗೂಡುಕಟ್ಟುತ ಮೋಡಕಾರ್‍ಮೋಡ
ಬಿಸಿಲು ನೂಕಿ ನೆರಳು ನುಗ್ಗಿ
ತುಂತುರ ಹನಿಗಳ ಚಿತ್ತ
ಕ್ಷಣಾರ್ಧದಲ್ಲಿ ನೂರಿಪ್ಪತ್ತು ವೇಷಗಳ
ಗುಡುಗು ಸಿಡಿಲು ಮಳೆಯ
ನಿಸರ್‍ಗತಂಡದ ನಾಟಕರಂಗ
ಜಾಣಹುಡುಗರ ಕಿಲಾಡಿ ಪಾತ್ರಗಳ
ಓಡಾಟ ಮೆರೆದಾಟ
ಬಿಸಿಯುಸಿರಿಗೆ ಸಂತಸದ ಕಣ್ಣೀರು
ಎಲ್ಲೆಲ್ಲೂ ನಿರಾಳ.
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...