ನಿರಾಳ

ಉತ್ತಿದ ಮಣ್ಣು
ಮೈ ತುಂಬಾ ಕೆಂಗಣ್ಣಾಗಿ
ಎದೆ ತುಂಬ ಬಿಸಿ ಉಸಿರು
ಹೆಜ್ಜೆ ಇಟ್ಟಲ್ಲೆಲ್ಲ ಧೂಳು
ಮತ್ತೆ ಮತ್ತೆ ಮುಖಕೆ ರಾಚಿ
ಮಳೆಗಾಗಿ ಹಪಹಪಿಸಿ ಅಳುವ ದೈನ್ಯತೆ.

ಕಾಲಿಟ್ಟಲ್ಲೆಲ್ಲ ಒಣಗರಿಕೆ
ಬೆಟ್ಟದೊಳಗಿನ ಬೋಳು ಗಿಡಮರ
ನದಿಯ ತಳದ ಬಿರುಕು
ಬಸವಳಿದು ಬೋರಲಾದ ಮನ,
ನಕ್ಷತ್ರಗಳು ಫಳಫಳ ಹೊಳೆದದ್ದು
ನಾಡು ಧಗಧಗಿಸಿ ನೀರ್‍ಗುದುರೆಯಾದದ್ದು
ಹಿಡಿತಕ್ಕೆ ಸಿಗದ ನೋವು ನರಳಾಟ
ಕಣ್ಣೀರಿಲ್ಲದ ಅಳು.

ಗಂಟಲುಬ್ಬಿನ ಎದೆಯಾಳದ ಆರ್‍ತಧ್ವನಿ
ಏರಿ ಏರಿ ಮೇಲೇರಿ ಹಬ್ಬಿಹರವಿನೊಳಗೆ
ಗೂಡುಕಟ್ಟುತ ಮೋಡಕಾರ್‍ಮೋಡ
ಬಿಸಿಲು ನೂಕಿ ನೆರಳು ನುಗ್ಗಿ
ತುಂತುರ ಹನಿಗಳ ಚಿತ್ತ
ಕ್ಷಣಾರ್ಧದಲ್ಲಿ ನೂರಿಪ್ಪತ್ತು ವೇಷಗಳ
ಗುಡುಗು ಸಿಡಿಲು ಮಳೆಯ
ನಿಸರ್‍ಗತಂಡದ ನಾಟಕರಂಗ
ಜಾಣಹುಡುಗರ ಕಿಲಾಡಿ ಪಾತ್ರಗಳ
ಓಡಾಟ ಮೆರೆದಾಟ
ಬಿಸಿಯುಸಿರಿಗೆ ಸಂತಸದ ಕಣ್ಣೀರು
ಎಲ್ಲೆಲ್ಲೂ ನಿರಾಳ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೨
Next post ರಂಗಣ್ಣನ ಕನಸಿನ ದಿನಗಳು – ೨೭

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys