ಗೀಜಗನ ಗೂಡು

ಸತ್ಯಾನ್ವೇಷಣೆ ಮಾಡುವುದೇ…
ಕಥೆಗಳು ರೈಲುಬಿಡುವ ಚಿತ್ರಣದೊಳಗೆ
ತನ್ನವೇ ವಜ್ರಖಚಿತ ವಸ್ತ್ರ ಒಡವೆ ನೋಡಿ
ತಾನೇ ಮುಖವಾಡವಾಗುತ
ಕಿರೀಟದೊಳಗೆ ದೇವರು ಹುದುಗಿ ಉಸಿರುಗಟ್ಟಿ
ನಡುರಾತ್ರಿಗೆ ಎದ್ದೋಡಿದ ಬಗೆಗೆ ಮೂರ್ಖನಾಗಿ
ನಿಂತಲ್ಲೇ ನಿಂತು ಯೋಗದಲಿ ತೊಡಗಿ
ಸೂರ್‍ಯಪಾನ ಚಿತ್ತಚಂಚಲವೊ
ಮತ್ತೇರಿದ ಮನದ ಗೊಂಚಲವೊ

ಗಜಿಬಿಜಿ ಗೀಜಗನ ಗೂಡಿನೊಳಹೊರಗೆ
ಕೂಡಿಸಿ ಕಳೆದು ಗುಣಿಸಿ ಭಾಗಿಸಿದ ಪರಿಗೆ
ಮೂಡಿದ ಭಿತ್ತಿಚಿತ್ರಗಳು ಹಗುರಾಗಿ ಹಾರುವ ಚಿಟ್ಟೆಗಳು
ಹಂಜಿಯಾಗಿ ತೇಲುವ ಮೋಡಗಳ ಚಿತ್ತಾಪಹಾರಕೆ
ಪ್ರಶ್ನೆ ಪ್ರಶ್ನೆ ಮೊಳಗೆ ಭಾರವೊ.

ನೆಲದಗಲ ಚಿತ್ತಚಂಚಲ ಕಲ್ಮಶಗಳ ನಿಗೂಢ
ಮೂಕವಿಸ್ಮಿತ ಮನದಬಣ್ಣಗಳ ಅಂಕುಡೊಂಕು
ಗಿರಕಿ ಹೊಡೆದು ಮುಳ್ಳಾಗಿಸುವ
ಮಗದೊಮ್ಮೆ ಮೃದುವಾಗಿಸುವ ತೆರನಕೆ
ಭಾವಚಿತ್ತದ ಸೋಪಾನ ಕಡಲತಡಿಯ ಕಂಪನಗಳ
ಉತ್ತರದಂತಹ ಪ್ರಶ್ನಾರ್ಥಕ ಪ್ರಶ್ನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೯
Next post ಬಾಳೆಯೂ ಸುಗಂಧರಾಜನೂ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys