Home / ಕವನ / ಕವಿತೆ / ಗೀಜಗನ ಗೂಡು

ಗೀಜಗನ ಗೂಡು

ಸತ್ಯಾನ್ವೇಷಣೆ ಮಾಡುವುದೇ…
ಕಥೆಗಳು ರೈಲುಬಿಡುವ ಚಿತ್ರಣದೊಳಗೆ
ತನ್ನವೇ ವಜ್ರಖಚಿತ ವಸ್ತ್ರ ಒಡವೆ ನೋಡಿ
ತಾನೇ ಮುಖವಾಡವಾಗುತ
ಕಿರೀಟದೊಳಗೆ ದೇವರು ಹುದುಗಿ ಉಸಿರುಗಟ್ಟಿ
ನಡುರಾತ್ರಿಗೆ ಎದ್ದೋಡಿದ ಬಗೆಗೆ ಮೂರ್ಖನಾಗಿ
ನಿಂತಲ್ಲೇ ನಿಂತು ಯೋಗದಲಿ ತೊಡಗಿ
ಸೂರ್‍ಯಪಾನ ಚಿತ್ತಚಂಚಲವೊ
ಮತ್ತೇರಿದ ಮನದ ಗೊಂಚಲವೊ

ಗಜಿಬಿಜಿ ಗೀಜಗನ ಗೂಡಿನೊಳಹೊರಗೆ
ಕೂಡಿಸಿ ಕಳೆದು ಗುಣಿಸಿ ಭಾಗಿಸಿದ ಪರಿಗೆ
ಮೂಡಿದ ಭಿತ್ತಿಚಿತ್ರಗಳು ಹಗುರಾಗಿ ಹಾರುವ ಚಿಟ್ಟೆಗಳು
ಹಂಜಿಯಾಗಿ ತೇಲುವ ಮೋಡಗಳ ಚಿತ್ತಾಪಹಾರಕೆ
ಪ್ರಶ್ನೆ ಪ್ರಶ್ನೆ ಮೊಳಗೆ ಭಾರವೊ.

ನೆಲದಗಲ ಚಿತ್ತಚಂಚಲ ಕಲ್ಮಶಗಳ ನಿಗೂಢ
ಮೂಕವಿಸ್ಮಿತ ಮನದಬಣ್ಣಗಳ ಅಂಕುಡೊಂಕು
ಗಿರಕಿ ಹೊಡೆದು ಮುಳ್ಳಾಗಿಸುವ
ಮಗದೊಮ್ಮೆ ಮೃದುವಾಗಿಸುವ ತೆರನಕೆ
ಭಾವಚಿತ್ತದ ಸೋಪಾನ ಕಡಲತಡಿಯ ಕಂಪನಗಳ
ಉತ್ತರದಂತಹ ಪ್ರಶ್ನಾರ್ಥಕ ಪ್ರಶ್ನೆ.
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...