Home / ಕವನ / ಕವಿತೆ / ಜೋಳಿಗೆ

ಜೋಳಿಗೆ

ಮಳೆಯಜೋಳಿಗೆ ಹರಿದುಬಿತ್ತಿಲ್ಲಿ
ಹಿಡಿತಕೆ ಸಿಗದೆ ಸವೆದ ಬಟ್ಟೆಯೊಳಗಿಂದ
ದೇವನ ಮಳೆಯ ಜೋಳಿಗೆ ಹರಿದುಬಿತ್ತಿಲ್ಲಿ.

ಕಪ್ಪು ಕಡುರಾತ್ರಿಗೆ ಊಹಿಸದ
ಹಳ್ಳಹೊಳೆಗಳ ನೆರೆತೊರೆ ಒಡ್ಡುಗಳು
ಒಡೆದೋಡುವ ಹುಚ್ಚು ರಭಸ
ಹಾದಿಬೀದಿಗಳಿಗೂ ನಡುಕ
ಕ್ಷಣಕ್ಷಣಕೂ ದ್ವೀಪಗಳಾಕೃತಿ.
ದಿಕ್ಕುತಪ್ಪಿತೆಲ್ಲೊ
ಚೀತ್ಕಾರ ಆಕ್ರಂದನ ನೀರೆಲ್ಲ ನೆತ್ತರು
ಗುಡಿಗುಂಡಾರ ಮನೆಮಠಗಳೆಲ್ಲ ಮುಳುಗಿ
ಸ್ಮಶಾನ, ಮೇಲೆ ಧಾರಾಕಾರ ಮಳೆ
ಚಂದ್ರತಾರೆಯರು ಸಾಕ್ಷಿಯಾಗದೆ
ಅದೆಲ್ಲೋ ತಿರುಗಾಟ

ತೇಪೆಹಚ್ಚಿದ ಹಿಡಿಕೆ ಹರಿದ ಜೋಳಿಗೆ
ಒಳಗೆಲ್ಲ ಆಕ್ರಂದದ ಕೂಗು ಹೆಣಗಳ ರಾಶಿರಾಶಿ
ಕೆಂಪು ಕರಿನೀರು ಮಣ್ಣೀರು ಕಣ್ಣೀರು
ತುಂಬಿಕೊಂಡು ಮತ್ತೆಲ್ಲೋ ದೇವ ನಡೆದೇಬಿಟ್ಟ.

ಸೂತಕದ ಮನೆ ಮನಗಳಿಗೀಗ
ಕರಿನೆರಳಿನಾ ಛಾಯೆ ಸರಿಸಿ
ಸಾಂತ್ವನಕೊಡಲು ಬಂತು ಬಂತು
ತುಂಬಿಬಂತು ಕರುಣಾಳು
ಹೃದಯವಂತರ ನೋಟಿನ ಜೋಳಿಗೆ
ಬೆಂದ ಹೃದಯಗಳಿಗೊಂದಿಷ್ಟು ಉಸಿರು
ನೆತ್ತಿಗೊಂದು ಸೂರು
ಹೆಜ್ಜೆಗಳಿಗಳಿಗೊಂದಷ್ಟು ಭರವಸೆಗಳಿಗೆ…

ಆದರೆಲ್ಲೋ ನರಿ ನಾಯಿಗಳ ಕಿವಿ ನಿಮಿರಿ
ವಾಸನೆ ಬಡಿದು ಜೋಳಿಗೆ ಎಳೆದಾಡಿ
ಹರಿದು ಹಿಂಜುವ ಮುನ್ನ
ಇಲಿ ಹೆಗ್ಗಣಗಳು ತಿಂದು ತೇಗುವ ಮುನ್ನ
ಬೇಕೀ ಜೋಳಿಗೆಗಳಿಗೆ
ಡಬ್ಬಣ ಸುತಳಿ
ಕಳ್ಳನಲ್ಲದ ಕಾವಲಗಾರನೂ ಕೂಡಾ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...