Home / ಕವನ / ಕವಿತೆ / ಫಾಲ್ಗುಣದ ಹೂಮಳೆಯೊಳಗೆ (ಯುಗಾದಿ)

ಫಾಲ್ಗುಣದ ಹೂಮಳೆಯೊಳಗೆ (ಯುಗಾದಿ)

ಫಾಲ್ಗುಣದ ಮುಂಜಾವು ದಿನಗಳು
ನನ್ನ ಕಿಡಕಿಯಾಚೆ ಸ್ವರ್‍ಗ
ಸ್ಪರ್‍ಧೆಗಿಳಿಯುವಂತೆ ಧರೆಗೆ
ಝೆಕರಾಂಡಾ, ಬೋಗನ್ ವಿಲ್ಲಾ, ಮಲ್ಲಿಗೆ, ಗುಲಾಬಿ, ಸಂಪಿಗೆ

ಹಳದಿ ಕೆಂಪು ನೀಲಿ ಗುಲಾಬಿ ಹೂಗಳ ಸುರಿಮಳೆ
ಹಗಲು ರಾತ್ರಿಗಳಿಗೆ ಬಿಡುವಿಲ್ಲದ ಕೆಲಸ
ನೆಲತುಂಬ ಚಿತ್ತ ಚಿತ್ತಾರದ ಹಾಸುಗೆ
ಉಸಿರಿನೊಳಗೆ ಪರಿಮಳ ಮಕರಂದ ಜೇನು.

ದುಡಿದು ಹಣ್ಣಾದ ಇಳಿಗಾಲದ ಅಜ್ಜಿ
ನೂರೆಂಟು ಚಿಂತೆಗಳಲಿ ಚಿತೆಯಾಗಿ
ನಾಲ್ಕೆಳೆ ಬಿಳಿ ಕೂದಲಿನ ಬೆಳ್ಳುಳ್ಳಿ ತುರುಬ ಕಟ್ಟಿ
ಮಾಸಿದ ಸೀರೆ ಮೈಗೆ ಸುತ್ತಿ
ಹೆಜ್ಜೆಹೆಜ್ಜೆಗೂ ಬಾಗಿ
ಮತ್ತೊಮ್ಮೆ ಎದೆ ಸೆಟಿಸಿ ನಿಂತು
ಒಮ್ಮೆ ಸೋತು ಮತ್ತೊಮ್ಮೆ ನಕ್ಕು
ಮರದ ಕೆಳಗೆ ಕುಳಿತು ಮೌನ
ಮನದೊಳಗಿನ ಗೊಂದಲಗಳ ನಡುವೆ ನಿಶ್ಯಬ್ಧ

ತಾನೇ ಕೈಯಾರೆ ನಿರುಣಿಸಿ ಬೆಳೆಸಿದ
ಹಚ್ಚ ಹಸಿರಿನ ತೋಟದ
ಬಾಳೆ ಮಾವು ತೆಂಗುಗಳು ತೊನೆದಾಡಿ
ಮಾತನಾಡಲೆಳಿಸಿ, ಅರ್ಪಿಸಿಕೊಳ್ಳಲು ಹಾತೊರೆಯುವಿಕೆ
ಮಕ್ಕಳು ಮೊಮ್ಮಕ್ಕಳ ಕಲರವದ
ಹಣ್ಣುಗಳು ಉಡಿತುಂಬಿ
ಬಣ್ಣ ಬಣ್ಣದ ಹೂಮಳೆ
ಅವಳ ಕೊರಳಿಗೆ ಪದಕವಾಗಿ
ತುರುಬಿಗೆ ಮಾಲೆಯಾಗಿ
ನೆರಿಗೆ ಕೆನ್ನೆಗೆ ಪರಾಗಮೆತ್ತಿ
ಸೀರೆಗೆ ಹೂಬಳ್ಳಿಯ ಬಣ್ಣ ತುಂಬಿ,
ಬಿರುದು ಸಮ್ಮಾನಗಳ ಹಂಗಿಲ್ಲದೆ
ನಿಸರ್ಗಕೊಟ್ಟ ಸಂತಸಕೆ
ಹೊಂಬಣ್ಣದ ಸೂರ್ಯನಿಗೆ ನಮಸ್ಕರಿಸಿ
ಮೆಲ್ಲನೆ ಹೂ ಹಾಸಿನ ಮೇಲೆ ಹೆಜ್ಜೆ ಹಾಕಿದಳು
ಹೂವು ಹುಡಿ ಮುತ್ತಿದ ಅಜ್ಜಿ
ಆಗಿದ್ದಳು ಬೆಡಗು ಬಿಂಕ ಬಿನ್ನಾಣದ
ಫಾಲ್ಗುಣಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...