ಧರ್ಮಕ್ಷೇತ್ರೇ ಕುರುಕ್ಷೇತ್ರೇ

ಧರ್ಮಕ್ಷೇತ್ರೇ ಕುರುಕ್ಷೇತ್ರೇ
ಏನು ನಡೆಯಿತೊ ಸಂಜಯ
ಯಾರು ಸೋತರು ಯಾರು ಗೆದ್ದರು
ಎಲ್ಲ ಬಣ್ಣಿಸೊ ಸಂಜಯ

ಯಾರ ಬಾಣಕೆ ಯಾರು ಗುರಿಯೊ
ಯಾರ ತಲೆಗಿನ್ನೆಷ್ಟು ಗರಿಯೊ ಸಂಜಯ
ಯಾರು ತಪ್ಪೊ ಯಾರು ಸರಿಯೊ
ತಪ್ಪು ಸರಿಗಳ ಮೀರಿದಂಥ ಪರಿಯೊ ಸಂಜಯ

ಧರ್ಮ ಯುದ್ಧವೊ ಕರ್ಮ ಯುದ್ಧವೊ
ದೈವ ನಿರ್‍ಮಿಸಿದಂಥ ಯುದ್ಧವೊ ಸಂಜಯ
ಎಲ್ಲ ಯುದ್ಧಗಳಾದಿ ಯುದ್ಧವೊ
ಎಂದಿಗೂ ಮುಗಿಯದನಾದಿ ಯುದ್ಧವೊ ಸಂಜಯ

ಯುಗವು ಕೊನೆಗೊಳ್ಳುವುದು ಹಾಗೆಯೊ
ಮುಂದಿನದು ಮೊದಲಾಗುವುದು ಹೀಗೆಯೊ ಸಂಜಯ
ಒಂದರೊಳಗಿನ್ನೊಂದು ಬೇಗೆಯೊ
ಜಾದುಗಾರನು ಎಬ್ಬಿಸಿದ ಹೊಗೆಯೊ ಸಂಜಯ

ಕಾಲದ ಮಹಾಚಕ್ರವುರುಳಿಕೊ
ಈ ಮಹಾಭಾರತವ ಮೆಟ್ಟಿ ಹೋಯಿತೊ ಸಂಜಯ
ಕ್ರಾಂತಿಯಾಯಿತೊ ಶಾಂತಿಯಾಯಿತೊ
ಕಣ್ಕಟ್ಟಿನ ವಿಭ್ರಾಂತಿಯಾಯಿತೊ ಸಂಜಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವ ಜೀವ ಸೃಷ್ಠಿಯಾದದ್ದೂ ಸಮುದ್ರ ಬಂಡೆಯ ನಡುವೆ
Next post ಬೆಳಕ ಹುಡುಕುತ್ತ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…