Home / ಕವನ / ಕವಿತೆ / ಮೂರು ಮೊಗಗಳು

ಮೂರು ಮೊಗಗಳು

ಮೂರು ಮೊಗಗಳು ಮಾತ್ರ ಎದುರಿಗೆ ಕಂಡರೂ
ನಾಲ್ಕನೆಯ ಮೊಗ ಇದ್ದೇ ಇರುವುದು
ಕಾಣುವುದರಾಚೆಗೇ ಕಾಣದುದು ಇರುವುದು
ಕಾಣುವುದೆ ಮರೆ ಕಾಣದಿರುವುದಕೆ
ಓ ಧರ್ಮಚಕ್ರವೇ
ಕೈಹಿಡಿದು ನಡೆಸೆನ್ನನು
ಸತ್ಯಮೇವ ಜಯತೆ

ಒಂದು ಹಕ್ಕಿಯು ತಿನ್ನುತಿದ್ದರು
ಇನ್ನೊಂದು ಹಕ್ಕಿಯು ನೋಡುತಿದ್ದರು
ಒಂದು ಹಕ್ಕಿಗೆ ಹೇಗೆ ಗೊತ್ತು
ಇನ್ನೊಂದು ಹಕ್ಕಿ ಹೊರಡಲು ಯೋಚಿಸಿರುವುದು
ಒಟ್ಟಿಗೇ ಅವು ರೆಕ್ಕೆ ಬಿಚ್ಚಿ
ಆಕಾಶದಲ್ಲದೊ ಹಾರುತಿರುವುವು
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ಹಗಲಿಗಿರುಳನು ಕಂಡರಾಗದು
ಇರುಳಿಗೆ ಬಳಕೆಂದರಾಗದು
ಆದರೂ ಅವು ಒಬ್ಬನೇ ನಟ
ಎರಡು ಪಾತ್ರಗಳ ಮಾಡಿದಂತೆ
ಒಂದು ವೇಷವ ಕಳಚದೇ ಇ-
ನ್ನೊಂದು ರಂಗಕೆ ಬರುವುದುಂಟೆ
ಹಗಲು ಯಾವುದು ಇರುಳು ಯಾವುದು
ಒಂದ ಚುಚ್ಚಿದರಿನ್ನೊಂದು ನೋಯುವುದು
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ತಿಳಿನೀರಿನೊಳಗೆ ಮಳೆನೀರಿನೊಳಗೆ
ಬಚ್ಚಲ ನೀರಿನೊಳಗೆ ಹಬೆಯ ಕನ್ನಡಿಯೊಳಗೆ
ಅಂಗಡಿಕಿಟಿಕಿಗಳ ಗಾಜಿನೊಳಗೆ
ಎಲ್ಲೆಲ್ಲೂ ಬಿಂಬವೆ ಪ್ರತಿಯೊಂದು ಬಿಂಬವೆ
ಪ್ರತಿಸಲವು ನೋಡಿದರು ಪ್ರತಿಸಲವು ಸೋಜಿಗವೆ
ಈ ಪ್ರತಿರೂಪಕೇನರ್ಥ
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ಪುಣ್ಯಕೋಟಿಯ ಕತೆಯ ಕೇಳಿ
ಕಣ್ಣೀರು ಕರೆಯದ ಮನುಜನಿರುವನೆ
ಮಾತು ಮರೆಯದ ಮಾತಿಗಾಗಿಯೊ
ಮಮತ ಮರೆಯದ ಮಾತೆಗಾಗಿಯೊ
ಕಟ್ಟು ಕತೆಯೋ ಸತ್ಯಕತೆಯೊ
ಎಲ್ಲ ಕತೆಗಳ ಒಟ್ಟುಕತೆಯೋ
ಓ ಧರ್ಮಚಕ್ರವೇ
ಸತ್ಯಮೇವ ಜಯತೆ
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...