Home / ಕವನ / ಕವಿತೆ / ಮೂರು ಮೊಗಗಳು

ಮೂರು ಮೊಗಗಳು

ಮೂರು ಮೊಗಗಳು ಮಾತ್ರ ಎದುರಿಗೆ ಕಂಡರೂ
ನಾಲ್ಕನೆಯ ಮೊಗ ಇದ್ದೇ ಇರುವುದು
ಕಾಣುವುದರಾಚೆಗೇ ಕಾಣದುದು ಇರುವುದು
ಕಾಣುವುದೆ ಮರೆ ಕಾಣದಿರುವುದಕೆ
ಓ ಧರ್ಮಚಕ್ರವೇ
ಕೈಹಿಡಿದು ನಡೆಸೆನ್ನನು
ಸತ್ಯಮೇವ ಜಯತೆ

ಒಂದು ಹಕ್ಕಿಯು ತಿನ್ನುತಿದ್ದರು
ಇನ್ನೊಂದು ಹಕ್ಕಿಯು ನೋಡುತಿದ್ದರು
ಒಂದು ಹಕ್ಕಿಗೆ ಹೇಗೆ ಗೊತ್ತು
ಇನ್ನೊಂದು ಹಕ್ಕಿ ಹೊರಡಲು ಯೋಚಿಸಿರುವುದು
ಒಟ್ಟಿಗೇ ಅವು ರೆಕ್ಕೆ ಬಿಚ್ಚಿ
ಆಕಾಶದಲ್ಲದೊ ಹಾರುತಿರುವುವು
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ಹಗಲಿಗಿರುಳನು ಕಂಡರಾಗದು
ಇರುಳಿಗೆ ಬಳಕೆಂದರಾಗದು
ಆದರೂ ಅವು ಒಬ್ಬನೇ ನಟ
ಎರಡು ಪಾತ್ರಗಳ ಮಾಡಿದಂತೆ
ಒಂದು ವೇಷವ ಕಳಚದೇ ಇ-
ನ್ನೊಂದು ರಂಗಕೆ ಬರುವುದುಂಟೆ
ಹಗಲು ಯಾವುದು ಇರುಳು ಯಾವುದು
ಒಂದ ಚುಚ್ಚಿದರಿನ್ನೊಂದು ನೋಯುವುದು
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ತಿಳಿನೀರಿನೊಳಗೆ ಮಳೆನೀರಿನೊಳಗೆ
ಬಚ್ಚಲ ನೀರಿನೊಳಗೆ ಹಬೆಯ ಕನ್ನಡಿಯೊಳಗೆ
ಅಂಗಡಿಕಿಟಿಕಿಗಳ ಗಾಜಿನೊಳಗೆ
ಎಲ್ಲೆಲ್ಲೂ ಬಿಂಬವೆ ಪ್ರತಿಯೊಂದು ಬಿಂಬವೆ
ಪ್ರತಿಸಲವು ನೋಡಿದರು ಪ್ರತಿಸಲವು ಸೋಜಿಗವೆ
ಈ ಪ್ರತಿರೂಪಕೇನರ್ಥ
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ಪುಣ್ಯಕೋಟಿಯ ಕತೆಯ ಕೇಳಿ
ಕಣ್ಣೀರು ಕರೆಯದ ಮನುಜನಿರುವನೆ
ಮಾತು ಮರೆಯದ ಮಾತಿಗಾಗಿಯೊ
ಮಮತ ಮರೆಯದ ಮಾತೆಗಾಗಿಯೊ
ಕಟ್ಟು ಕತೆಯೋ ಸತ್ಯಕತೆಯೊ
ಎಲ್ಲ ಕತೆಗಳ ಒಟ್ಟುಕತೆಯೋ
ಓ ಧರ್ಮಚಕ್ರವೇ
ಸತ್ಯಮೇವ ಜಯತೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...