Home / ಕವನ / ಕವಿತೆ / ಮೂರು ಮೊಗಗಳು

ಮೂರು ಮೊಗಗಳು

ಮೂರು ಮೊಗಗಳು ಮಾತ್ರ ಎದುರಿಗೆ ಕಂಡರೂ
ನಾಲ್ಕನೆಯ ಮೊಗ ಇದ್ದೇ ಇರುವುದು
ಕಾಣುವುದರಾಚೆಗೇ ಕಾಣದುದು ಇರುವುದು
ಕಾಣುವುದೆ ಮರೆ ಕಾಣದಿರುವುದಕೆ
ಓ ಧರ್ಮಚಕ್ರವೇ
ಕೈಹಿಡಿದು ನಡೆಸೆನ್ನನು
ಸತ್ಯಮೇವ ಜಯತೆ

ಒಂದು ಹಕ್ಕಿಯು ತಿನ್ನುತಿದ್ದರು
ಇನ್ನೊಂದು ಹಕ್ಕಿಯು ನೋಡುತಿದ್ದರು
ಒಂದು ಹಕ್ಕಿಗೆ ಹೇಗೆ ಗೊತ್ತು
ಇನ್ನೊಂದು ಹಕ್ಕಿ ಹೊರಡಲು ಯೋಚಿಸಿರುವುದು
ಒಟ್ಟಿಗೇ ಅವು ರೆಕ್ಕೆ ಬಿಚ್ಚಿ
ಆಕಾಶದಲ್ಲದೊ ಹಾರುತಿರುವುವು
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ಹಗಲಿಗಿರುಳನು ಕಂಡರಾಗದು
ಇರುಳಿಗೆ ಬಳಕೆಂದರಾಗದು
ಆದರೂ ಅವು ಒಬ್ಬನೇ ನಟ
ಎರಡು ಪಾತ್ರಗಳ ಮಾಡಿದಂತೆ
ಒಂದು ವೇಷವ ಕಳಚದೇ ಇ-
ನ್ನೊಂದು ರಂಗಕೆ ಬರುವುದುಂಟೆ
ಹಗಲು ಯಾವುದು ಇರುಳು ಯಾವುದು
ಒಂದ ಚುಚ್ಚಿದರಿನ್ನೊಂದು ನೋಯುವುದು
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ತಿಳಿನೀರಿನೊಳಗೆ ಮಳೆನೀರಿನೊಳಗೆ
ಬಚ್ಚಲ ನೀರಿನೊಳಗೆ ಹಬೆಯ ಕನ್ನಡಿಯೊಳಗೆ
ಅಂಗಡಿಕಿಟಿಕಿಗಳ ಗಾಜಿನೊಳಗೆ
ಎಲ್ಲೆಲ್ಲೂ ಬಿಂಬವೆ ಪ್ರತಿಯೊಂದು ಬಿಂಬವೆ
ಪ್ರತಿಸಲವು ನೋಡಿದರು ಪ್ರತಿಸಲವು ಸೋಜಿಗವೆ
ಈ ಪ್ರತಿರೂಪಕೇನರ್ಥ
ಓ ಧರ್ಮಚಕ್ರವೇ
ಸತ್ಯಮೇವ ಜಯತೆ

ಪುಣ್ಯಕೋಟಿಯ ಕತೆಯ ಕೇಳಿ
ಕಣ್ಣೀರು ಕರೆಯದ ಮನುಜನಿರುವನೆ
ಮಾತು ಮರೆಯದ ಮಾತಿಗಾಗಿಯೊ
ಮಮತ ಮರೆಯದ ಮಾತೆಗಾಗಿಯೊ
ಕಟ್ಟು ಕತೆಯೋ ಸತ್ಯಕತೆಯೊ
ಎಲ್ಲ ಕತೆಗಳ ಒಟ್ಟುಕತೆಯೋ
ಓ ಧರ್ಮಚಕ್ರವೇ
ಸತ್ಯಮೇವ ಜಯತೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...