Home / ಕವನ / ಕವಿತೆ / ಗಡಿಯಲ್ಲಿ ಕಾವ್ಯ

ಗಡಿಯಲ್ಲಿ ಕಾವ್ಯ

ಸುಮ್ಮನೆ ಬಿದ್ದಿರುವ ಉದ್ದುದ್ದ ಸರಹದ್ದು
ಎತ್ತೆರತ್ತರಕ್ಕೆ ಬೆಳೆದ ದೇವದಾರುಗಳು
ಅಸ್ತಿತ್ವ ಅಲುಗಾಡುವ ಯಾತನೆಗಳ ಮಧ್ಯೆ
ಶಬ್ದ ಮೀರಿದ ಸಂಕಟಗಳ ನುಂಗಿ
ದೀರ್ಘ ಬದುಕಿನ ವಿಷಾದಗಳ ಮರೆತು
ಗುನಿಗುನಿಸಿ ಹಾಡುತ್ತಿದೆ ನೋಡು ಗಡಿಯಲ್ಲಿ
ಸರಹದ್ದುಗಳೇ ಇಲ್ಲದ ಮಹಾಕಾವ್ಯ.

ನನ್ನ ಕಾವ್ಯದ ಒಂದೊಂದು ಅಕ್ಷರವೂ
ನೂರಾರು ಪ್ರತಿಮೆಗಳ ಮೂಡಿಸುತ್ತಲೇ
ಅರ್ಥವಿಲ್ಲದ ಸರಹದ್ದುಗಳ ಅಳಿಸುತ್ತದೆ
ಮಾನವ ಕಾವ್ಯದ ಒಂದೊಂದು ಸ್ವರವೂ
ಅನಂತ ಆಗಸದಲಿ
ಸ್ನೇಹದ ಬಣ್ಣ ಹರಡುತ್ತಿದೆ.
ಸರಹದ್ದುಗಳೇ ಇಲ್ಲದ ಕಾವ್ಯ
ಗುನುಗುನಿಸಿ ಹಾಡುತ್ತಿದೆ.
ಎರಡು ದೇಶಗಳ ಮಧ್ಯೆ ಎಳೆದ ರೇಖೆಗಳನು
ಎಡಬಿಡದೇ ಸುರಿದ ಮಳೆ ಅಳಿಸಬಹುದೆ?
ಗುನುಗುನಿಸಿ ಹಾಡಿದ ನನ್ನ
ಮೇಘ ಮಲ್ಹಾರದ ರಾಗ
ಹೇಗೆ ಮುರಿಯುತ್ತದೆ ನೋಡು
ಗಡಿಗಳ ಗೋಡೆ ಸರಹದ್ದು ಸರಪಳಿಗಳನು
ಲೋಕವೇ ನಿದ್ದೆಯ ತೆಕ್ಕೆಗೆ ಜಾರಿರಲು
ಗಸ್ತು ನಿಂತಿದೆ ನೋಡು ಗಡಿಯಲ್ಲಿ ಕಾವ್ಯ.

ಬೇಕಿಲ್ಲ ಗನ್ನು ಬಂದೂಕು ಮಿಸಾಯಿಲ್ಲು ನನಗೆ
ಹೃದಯ ಬೆಸೆಯುವ ಜೀವಂತ ಕಾವ್ಯವಿದೆಯಲ್ಲ?
ನನ್ನವರ ಹಾಡಿಗೆ ಗಡಿಯಾಚೆಗಿನ
ಅವರೂ ಹಾಡುತ್ತಿದ್ದಾರೆ
ನೋಡು, ನನ್ನವರ ಹೆಜ್ಜೆಯೊಂದಿಗೆ
ಅವರೂ ಕುಣಿಯುತ್ತಿದ್ದಾರೆ
ಹೇಗೆ ಅರಳುತ್ತಿದೆ ನೋಡು ಗಡಿಯಲ್ಲಿ
ನಿರ್ಭಂಧಗಳೇ ಇಲ್ಲದ ಮಾನವ ಕಾವ್ಯ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...