Home / ಕವನ / ಕವಿತೆ / ಗಡಿಯಲ್ಲಿ ಕಾವ್ಯ

ಗಡಿಯಲ್ಲಿ ಕಾವ್ಯ

ಸುಮ್ಮನೆ ಬಿದ್ದಿರುವ ಉದ್ದುದ್ದ ಸರಹದ್ದು
ಎತ್ತೆರತ್ತರಕ್ಕೆ ಬೆಳೆದ ದೇವದಾರುಗಳು
ಅಸ್ತಿತ್ವ ಅಲುಗಾಡುವ ಯಾತನೆಗಳ ಮಧ್ಯೆ
ಶಬ್ದ ಮೀರಿದ ಸಂಕಟಗಳ ನುಂಗಿ
ದೀರ್ಘ ಬದುಕಿನ ವಿಷಾದಗಳ ಮರೆತು
ಗುನಿಗುನಿಸಿ ಹಾಡುತ್ತಿದೆ ನೋಡು ಗಡಿಯಲ್ಲಿ
ಸರಹದ್ದುಗಳೇ ಇಲ್ಲದ ಮಹಾಕಾವ್ಯ.

ನನ್ನ ಕಾವ್ಯದ ಒಂದೊಂದು ಅಕ್ಷರವೂ
ನೂರಾರು ಪ್ರತಿಮೆಗಳ ಮೂಡಿಸುತ್ತಲೇ
ಅರ್ಥವಿಲ್ಲದ ಸರಹದ್ದುಗಳ ಅಳಿಸುತ್ತದೆ
ಮಾನವ ಕಾವ್ಯದ ಒಂದೊಂದು ಸ್ವರವೂ
ಅನಂತ ಆಗಸದಲಿ
ಸ್ನೇಹದ ಬಣ್ಣ ಹರಡುತ್ತಿದೆ.
ಸರಹದ್ದುಗಳೇ ಇಲ್ಲದ ಕಾವ್ಯ
ಗುನುಗುನಿಸಿ ಹಾಡುತ್ತಿದೆ.
ಎರಡು ದೇಶಗಳ ಮಧ್ಯೆ ಎಳೆದ ರೇಖೆಗಳನು
ಎಡಬಿಡದೇ ಸುರಿದ ಮಳೆ ಅಳಿಸಬಹುದೆ?
ಗುನುಗುನಿಸಿ ಹಾಡಿದ ನನ್ನ
ಮೇಘ ಮಲ್ಹಾರದ ರಾಗ
ಹೇಗೆ ಮುರಿಯುತ್ತದೆ ನೋಡು
ಗಡಿಗಳ ಗೋಡೆ ಸರಹದ್ದು ಸರಪಳಿಗಳನು
ಲೋಕವೇ ನಿದ್ದೆಯ ತೆಕ್ಕೆಗೆ ಜಾರಿರಲು
ಗಸ್ತು ನಿಂತಿದೆ ನೋಡು ಗಡಿಯಲ್ಲಿ ಕಾವ್ಯ.

ಬೇಕಿಲ್ಲ ಗನ್ನು ಬಂದೂಕು ಮಿಸಾಯಿಲ್ಲು ನನಗೆ
ಹೃದಯ ಬೆಸೆಯುವ ಜೀವಂತ ಕಾವ್ಯವಿದೆಯಲ್ಲ?
ನನ್ನವರ ಹಾಡಿಗೆ ಗಡಿಯಾಚೆಗಿನ
ಅವರೂ ಹಾಡುತ್ತಿದ್ದಾರೆ
ನೋಡು, ನನ್ನವರ ಹೆಜ್ಜೆಯೊಂದಿಗೆ
ಅವರೂ ಕುಣಿಯುತ್ತಿದ್ದಾರೆ
ಹೇಗೆ ಅರಳುತ್ತಿದೆ ನೋಡು ಗಡಿಯಲ್ಲಿ
ನಿರ್ಭಂಧಗಳೇ ಇಲ್ಲದ ಮಾನವ ಕಾವ್ಯ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...