ಶುದ್ಧಾತ್ಮ

ನರಜನ್ಮ ದೇವರು ಕೊಟ್ಟ ಸದವಕಾಶ
ಬಹಳ ಎಚ್ಚರದಿಂದ ಇದನ್ನು ಅನುಸರಿಸು
ಬೆಳ್ಳಗಿದ್ದುದೆಲ್ಲ ಹಾಲಲ್ಲ ಮನುಜ
ನಿತ್ಯ ನಿನ್ನ ಹೋರಾಟದಲ್ಲಿ ಪಾಪ ಬೀಜ

ಮನಸ್ಸು ಒಂದು ಕ್ಷೀರಾಮೃತ ಹಾಗೆ
ಅದರಲ್ಲಿ ಶರೀರವೆಂಬ ಮಧು ಬೆರೆಸು
ಪರಮಾತ್ಮನೈವೇದ್ಯಕ್ಕೆ ಅರ್ಪಿಸಬೇಕು
ನಿನ್ನ ನೀನು ಸಮರ್‍ಪಿಸಿಕೊಳ್ಳಬೇಕು

ಶರೀರವದು ಗಾಜಿನ ಮನೆಯ ಹಾಗೆ
ಅದರಲ್ಲಿ ಆತ್ಮ ವಜ್ರಹೊಳಪಿನ ಹಾಗೆ
ರಕ್ಷಣಿ ಗೈಯುವುದು ತನು ಸಹಜ ಧರ್‍ಮ
ಅದರ ಹೊಳಪನ್ನು ಕಾಯ್ದುದೇ ಜೀವಧರ್‍ಮ

ಬೇಡ ನಿನ್ನ ಶರೀರ ಢಂಭಭಿಮಾನ
ಎಷ್ಟೊತ್ತಿನ ವರೆಗೆ ಈ ದೇಹಮಾನ
ನೀನು ಶರೀರವಲ್ಲ ಮನಸ್ಸಲ್ಲ ಭಾಮನಲ್ಲ
ನೀನು ಮಾಣಿಕ್ಯ ವಿಠಲನ ದಾಸನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ
Next post ತಿಪ್ಪಜ್ಜಿ ಸರ್ಕಲ್

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…