ಕರುಳಿನ ಕೊರಗು


ಮನವು ನಿನಗಾಗಿಯೇ ಮೊರೆಯುತಿದೆಯೇ-ಚಿನ್ನ
ನೆನಹು ನಿಡುಸುಯಿಲುಗಳ ಕರೆಯುತಿದೆಯೆ?
ಕನಸು ನಿನ್ನದೆ ಚಿತ್ರ ಬರೆಯುತಿದೆಯೇ-ನಿನ್ನ
ಇನಿದುದನಿ ಕಿವಿಗಳನ್ನು ಕೊರೆಯುತ್ತಿದೆಯೆ!


ತೆಳುದುಟಿಯ ತಿಳಿಜೊಲ್ಲು, ಬಿಳಿಯ ಮೊಳೆವಲ್ಲು – ಆ
ಎಳಗಲ್ಲಗಳ ಚೆಲ್ಲು, ಮೆಲುನಗೆಯ ಸೊಲ್ಲು,
ಎಳಯುತ್ತಲಿಹವು ನನ್ನೊಳಗೆ ನಿನ್ನೊಡನೆಯೇ
ಎಳಗೂಸೆ, ನಿನ್ನೆದುರು ನನ್ನ ಬಲ ಹುಲ್ಲು!


ಕೆಳೆಯ ಬಳ್ಳಿಯ ಮೊಳೆಯು ನೀನೆಂದು ಇದ್ದೆ-ಕಂ-
ಮಲರು ತನಿವಣ್ಣುಗಳ ಬೆಳೆವೆನೆಂದಿದ್ದೆ.
ಅಳಿಯಾಸೆಯಲಿ ಕಾಲ ಸೆಳೆದೊಯ್ಯೆ ತನಗೆಂದು
ಅಳಿದು ಕೆಳೆಯಾಶೆ ನಾ ಕಳವಳದಿ ಬಿದ್ದೆ!


ಸಾಕಾಯಿತೇನೆ ಸವಿಸವಿಯ ಕೂಳು-ನಿನಗೆ
ಬೇಕಾಯಿತೇನೆ ಕಣ್ಣೀರ ಕಾಳು !
ಸಕ್ಕರೆಯ ತನಿವಾಲನೊಕ್ಕರಿಸಿ ಸವುಳುಪ್ಪ-
ನಿಕ್ಕಿರುವ ನೀರ ಬಯಸುವರೆ ಹೇಳು !


ಆಗಸದ ತೊಟ್ಟಿಲಲಿ ತೂಗಾಡಲೆಂದು-ನೀ
ಹೋಗಿರುವೆಯೆನುತ ಬಗೆ ಹೇಳುತಿಹುದು ;
ತೂಗುದೊಟ್ಟಿಲ ಹಗ್ಗವಾಗಬೇಕೆಂದು- ತಾ-
ನೇಗಲೂ ಕರುಳು ಹುರಿಗೊಳ್ಳುತಿಹುದು.


ಎಂದಿನಂದದ ನಗೆಯ ಚೆಂದಮೊಗದಿಂದ-ನೀ
ಬಂದು ಕುಳಿತಿರಲು ತೊಡೆಯಲ್ಲಿ ಕಂದ !
ಒಂದೆ ಸವಿಮುತ್ತಿಡುವೆನೆಂದಿರಲು ಎಚ್ಚತ್ತು
ಕಂದೆರೆಯಲರಿತೆ ಹಾಳ್‌ಗನಸಿನಂದ!


ಎನಿತೊ ಮುತ್ತಿಟ್ಟಿದ್ದೆ, ನಲಿವ ಪಟ್ಟಿದ್ದೆ-ಮೈ-
ಮನಗಳನು ತಣಿವಿನಲಿ ತೇಲಬಿಟ್ಟಿದ್ದೆ;
ಕನಸಿನೀ ಮುತ್ತಿನಾ ಗುಣವೇನೊ! ಎದ್ದಾಗ
ಮನಸು ಮೈ ಮುಳ್‌ಬಲೆಗೆ ಬಿದ್ದ ಹಾಗಿದ್ದೆ.


ಸಂತೆ ಬಯಲಾದಂತೆ ಹೃದಯ ಹಾಳು!- ಹೆರರ
ಸಂತಸದ ಸುಗ್ಗಿಯದು ನನಗೆ ಬೀಳು!
ತಂತಿ ಕಿಳ್ತಿಹ ವೀಣೆಯಂತೆ ಬಾಳು-ಇದರ
ಅಂತವೆಲ್ಲಿದೆ ಮಗುವ ಹೇಳು, ಹೇಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಟ್ಟು ಒಳ್ಳೆಯವನು
Next post ಪೆರುಮಾಳನ ಕೆಂದಾವರೆ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

cheap jordans|wholesale air max|wholesale jordans|wholesale jewelry|wholesale jerseys