ಕೋರಿಕೆ

ಕಾನಡಾ


ಒಡೆಯ ನಿನ್ನಡಿಯೆಡೆಯ ಹುಡುಕುತಲಿ ನಡೆದಿಹೆನು,
ಅಡಿಗಡಿಗೆ ದಾರಿಯೊಳು ತಡೆವಡೆಯುತಿಹೆ ನಾನು,
ಹಲವು ಮುನಿಗಳು ನುಡಿದ ಹಲವು ಮಾತುಗಳಿಂದೆ
ಅಲುಗಾಡಿ ಮನವು ಉಯ್ಯಲೆಯಾಡುವಂತಿಹೆನು.


ನಿನ್ನೆಡೆಗೆ ಬರುವದಿದೆ ನನ್ನ ಕೋರಿಕೆ ದೊರೆಯೆ,
ನಿನ್ನ ದನಿ ಕೇಳುತಿಹ ಕಡೆಗೆ ಬರಬೇಕೆನುವೆ;
ನನ್ನ ಕಿವಿ ಬಳಿಯೆ ಜನ ಕಲೆತು ಬಲುಬಲು ವಾದ-
ವನ್ನು ಬಳೆಯಿಸಿ ಮರೆಯಿಸುವರು ನಿನ್ನಯ ನಾದ.


ಹಂಬಲಿಸಿ ನಿನ್ನ ಕರೆದಾಗೆಲ್ಲ ಬಳಸಿ ಜನ
ಇಂಬು ಬಿಡದೆಯೆ ನಡುವೆ ತುಂಬಿ ನಿಲುವರು ಚೆನ್ನ!
ನಿನ್ನಡಿಯ ಹುಡಿಗಾಗಿ ಬಾಯಬಿಡುತಿಹ ನಾನು
ಮಣ್ಣ ಹುಡಿಯನೆ ಹೊಂದಿ ಮನದಾಶೆಗುಂದುವೆನು.


ಬಗೆಯೊಳಗೆ ನೂರಾರು ಅಲೆಯೆದ್ದು ಕಲಕಲಿಸಿ
ಬಗೆಬಗೆಯ ಕಡೆಗಳಲ್ಲಿ ತೆರಳಿ ತಿರುಗುತಲಿಹವು;
ಬಗೆಗಾಣೆನಿವನೆಲ್ಲ ಬಿಗಿದು ಕೂಡಿಸಿ ತಂದು
ಜಗದೊಡೆಯ ನಿನ್ನಡಿಗದೆಂತು ನಾ ಸಲಿಸುವುದು?


ನಿನ್ನ ಬಳಿಯಲಿ ಬೇಡಿಕೊಳುವೆನೊಂದೇ ಒಂದು
ನಿನ್ನೊಲುಮೆಗಣ್ಣಿಯಲಿ ಬಂಧಿಸೆನ್ನನು ಬಿಗಿದ!
ಚೆನ್ನಾದ ದಾರಿಯೊಂದನ್ನು ತೋರಿಸಿ ನನ್ನ
ನಿನ್ನಡಿಗಳೆಡೆಯಲ್ಲಿ ಕರೆದುಕೊಳ್ಳುವುದು ಚೆನ್ನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ನಿನ್ನ ಮಗನಮ್ಮ
Next post ಸಾಕ್ಷಿ ಮತ್ತು ಚಕ್ರ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys