ಕಡಲಿನಾಳದ ನದಿ


ಜೀಯಾ
ಹೀಗೆ ನಿನ್ನ ಮುಂದೆ
ಒಳಗಿನದೆಲ್ಲ ಸುರಿದು
ಖಾಲಿಯಾಗಿ ನಿಂತುದು
ಅದೆಷ್ಟನೆಯ ಸಲವೋ
ಲೆಕ್ಕವಿಟ್ಟಿರಬಹುದು ನೀನು.
ಮತ್ತೆ ಮತ್ತೆ ನನ್ನ ತುಂಬುವವನು
ಕರುಣಾಳು ನೀನೇ ತಾನೇ?

ಅಬ್ಬರದ ಶರಧಿಯಲಿ
ಅಲೆವ ಮೀನು ನಾನು
ದಿಕ್ಕು ತಪ್ಪುತ್ತ ಬೆಚ್ಚಿ ಸ್ತಬ್ಧವಾಗುತ್ತ
ಅಲೆಗಳು ಕೊಂಡೊಯ್ದಾಗ ದಡಕ್ಕೆ
ಗುರುತ್ವ ಸೆಳೆದರೆ ಒಳಕ್ಕೆ
ಸಾಕು ಬೇಕುಗಳ ಏತಾಪಾತಾ
ಈಜುವುದೆಂಬುದೂ ಈಗ
ಜಾಡಿಗೆ ಬಿದ್ದ ಉಸಿರು.

ನೀರೆಣ್ಣೆಗೆ ಬೆಂಕಿ ಹೊತ್ತಿ
ಶರಧಿಯ ಬಾಹುಗಳ
ಚಾಚುತ್ತವೆ ಕೆನ್ನಾಲಿಗೆ
ಅತ್ತಲಿಂದ ನುಣುಚಿಕೊಂಡು
ಇತ್ತ ತಿರುಗಿದರೆ
ಉಸಿರು ಕಟ್ಟುವ
ಮತ್ತೆ ಬಿಡುವ ಪ್ರಾಣಾಯಾಮ.
ತುಂಬುವವರ ಸುರಿಯುವವರ
ಯಾರ್‍ಯಾರದೋ ಕೈಚಳಕ!
ಒಳಗಿನ ಹೊರಗಿನ
ಯಾವ್ಯಾವುದೋ ಅಸಂಬದ್ಧ ಲೆಕ್ಕ.


ಮೊರೆವ ಕಡಲಿನಾಳದಲೆಲ್ಲೋ
ತಣ್ಣಗೆ ಹರಿವ ನದಿಯಿದೆಯಂತೆ
ಅಲ್ಲಿ ಸಿಹಿ ನೀರಿನ
ನುಣುಪು ಮರಳಿನೆದೆ
ಮೇಲೆ ನೀರು
ಸದ್ದಿಲ್ಲದೇ ಮಲಗುತ್ತದಂತೆ
ಒಂದಕ್ಕೆ ಇನ್ನೊಂದು
ಮೌನದಲಿ ಲಾಲಿ
ಹಾಡುತ್ತವಂತೆ
ಕಾಣದಂತೆ ಎತ್ತಲೋ ಸಾಗುತ್ತವಂತೆ

ಹೊರಗೆಂಬುದಿಲ್ಲ
ಒಳಗೆಂಬುದಿಲ್ಲ.

ತೋರು ನನಗೆ ಜೀಯಾ
ಆ ಕಡಲಿನಾಳದ
ನದಿಯ ತೋರು ನನಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಷೇಧಿತ ಜಗತ್ತಿನೊಳಗೊಂದು ಇಣುಕುನೋಟ
Next post ಮನ ಮಂಥನ ಸಿರಿ – ೭

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…