Home / ಕವನ / ಕವಿತೆ / ಕಡಲಿನಾಳದ ನದಿ

ಕಡಲಿನಾಳದ ನದಿ


ಜೀಯಾ
ಹೀಗೆ ನಿನ್ನ ಮುಂದೆ
ಒಳಗಿನದೆಲ್ಲ ಸುರಿದು
ಖಾಲಿಯಾಗಿ ನಿಂತುದು
ಅದೆಷ್ಟನೆಯ ಸಲವೋ
ಲೆಕ್ಕವಿಟ್ಟಿರಬಹುದು ನೀನು.
ಮತ್ತೆ ಮತ್ತೆ ನನ್ನ ತುಂಬುವವನು
ಕರುಣಾಳು ನೀನೇ ತಾನೇ?

ಅಬ್ಬರದ ಶರಧಿಯಲಿ
ಅಲೆವ ಮೀನು ನಾನು
ದಿಕ್ಕು ತಪ್ಪುತ್ತ ಬೆಚ್ಚಿ ಸ್ತಬ್ಧವಾಗುತ್ತ
ಅಲೆಗಳು ಕೊಂಡೊಯ್ದಾಗ ದಡಕ್ಕೆ
ಗುರುತ್ವ ಸೆಳೆದರೆ ಒಳಕ್ಕೆ
ಸಾಕು ಬೇಕುಗಳ ಏತಾಪಾತಾ
ಈಜುವುದೆಂಬುದೂ ಈಗ
ಜಾಡಿಗೆ ಬಿದ್ದ ಉಸಿರು.

ನೀರೆಣ್ಣೆಗೆ ಬೆಂಕಿ ಹೊತ್ತಿ
ಶರಧಿಯ ಬಾಹುಗಳ
ಚಾಚುತ್ತವೆ ಕೆನ್ನಾಲಿಗೆ
ಅತ್ತಲಿಂದ ನುಣುಚಿಕೊಂಡು
ಇತ್ತ ತಿರುಗಿದರೆ
ಉಸಿರು ಕಟ್ಟುವ
ಮತ್ತೆ ಬಿಡುವ ಪ್ರಾಣಾಯಾಮ.
ತುಂಬುವವರ ಸುರಿಯುವವರ
ಯಾರ್‍ಯಾರದೋ ಕೈಚಳಕ!
ಒಳಗಿನ ಹೊರಗಿನ
ಯಾವ್ಯಾವುದೋ ಅಸಂಬದ್ಧ ಲೆಕ್ಕ.


ಮೊರೆವ ಕಡಲಿನಾಳದಲೆಲ್ಲೋ
ತಣ್ಣಗೆ ಹರಿವ ನದಿಯಿದೆಯಂತೆ
ಅಲ್ಲಿ ಸಿಹಿ ನೀರಿನ
ನುಣುಪು ಮರಳಿನೆದೆ
ಮೇಲೆ ನೀರು
ಸದ್ದಿಲ್ಲದೇ ಮಲಗುತ್ತದಂತೆ
ಒಂದಕ್ಕೆ ಇನ್ನೊಂದು
ಮೌನದಲಿ ಲಾಲಿ
ಹಾಡುತ್ತವಂತೆ
ಕಾಣದಂತೆ ಎತ್ತಲೋ ಸಾಗುತ್ತವಂತೆ

ಹೊರಗೆಂಬುದಿಲ್ಲ
ಒಳಗೆಂಬುದಿಲ್ಲ.

ತೋರು ನನಗೆ ಜೀಯಾ
ಆ ಕಡಲಿನಾಳದ
ನದಿಯ ತೋರು ನನಗೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ