Home / ಕವನ / ಕವಿತೆ / ಕಡಲಿನಾಳದ ನದಿ

ಕಡಲಿನಾಳದ ನದಿ


ಜೀಯಾ
ಹೀಗೆ ನಿನ್ನ ಮುಂದೆ
ಒಳಗಿನದೆಲ್ಲ ಸುರಿದು
ಖಾಲಿಯಾಗಿ ನಿಂತುದು
ಅದೆಷ್ಟನೆಯ ಸಲವೋ
ಲೆಕ್ಕವಿಟ್ಟಿರಬಹುದು ನೀನು.
ಮತ್ತೆ ಮತ್ತೆ ನನ್ನ ತುಂಬುವವನು
ಕರುಣಾಳು ನೀನೇ ತಾನೇ?

ಅಬ್ಬರದ ಶರಧಿಯಲಿ
ಅಲೆವ ಮೀನು ನಾನು
ದಿಕ್ಕು ತಪ್ಪುತ್ತ ಬೆಚ್ಚಿ ಸ್ತಬ್ಧವಾಗುತ್ತ
ಅಲೆಗಳು ಕೊಂಡೊಯ್ದಾಗ ದಡಕ್ಕೆ
ಗುರುತ್ವ ಸೆಳೆದರೆ ಒಳಕ್ಕೆ
ಸಾಕು ಬೇಕುಗಳ ಏತಾಪಾತಾ
ಈಜುವುದೆಂಬುದೂ ಈಗ
ಜಾಡಿಗೆ ಬಿದ್ದ ಉಸಿರು.

ನೀರೆಣ್ಣೆಗೆ ಬೆಂಕಿ ಹೊತ್ತಿ
ಶರಧಿಯ ಬಾಹುಗಳ
ಚಾಚುತ್ತವೆ ಕೆನ್ನಾಲಿಗೆ
ಅತ್ತಲಿಂದ ನುಣುಚಿಕೊಂಡು
ಇತ್ತ ತಿರುಗಿದರೆ
ಉಸಿರು ಕಟ್ಟುವ
ಮತ್ತೆ ಬಿಡುವ ಪ್ರಾಣಾಯಾಮ.
ತುಂಬುವವರ ಸುರಿಯುವವರ
ಯಾರ್‍ಯಾರದೋ ಕೈಚಳಕ!
ಒಳಗಿನ ಹೊರಗಿನ
ಯಾವ್ಯಾವುದೋ ಅಸಂಬದ್ಧ ಲೆಕ್ಕ.


ಮೊರೆವ ಕಡಲಿನಾಳದಲೆಲ್ಲೋ
ತಣ್ಣಗೆ ಹರಿವ ನದಿಯಿದೆಯಂತೆ
ಅಲ್ಲಿ ಸಿಹಿ ನೀರಿನ
ನುಣುಪು ಮರಳಿನೆದೆ
ಮೇಲೆ ನೀರು
ಸದ್ದಿಲ್ಲದೇ ಮಲಗುತ್ತದಂತೆ
ಒಂದಕ್ಕೆ ಇನ್ನೊಂದು
ಮೌನದಲಿ ಲಾಲಿ
ಹಾಡುತ್ತವಂತೆ
ಕಾಣದಂತೆ ಎತ್ತಲೋ ಸಾಗುತ್ತವಂತೆ

ಹೊರಗೆಂಬುದಿಲ್ಲ
ಒಳಗೆಂಬುದಿಲ್ಲ.

ತೋರು ನನಗೆ ಜೀಯಾ
ಆ ಕಡಲಿನಾಳದ
ನದಿಯ ತೋರು ನನಗೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...