Home / ಕವನ / ಕವಿತೆ / ಬುದ್ಧ ಪಾದದ ಮೇಲೆ

ಬುದ್ಧ ಪಾದದ ಮೇಲೆ

ಹೆಜ್ಜೆ-೧

ಅವನ ದೃಢ ವಿಶಾಲ
ಪಾದದ ಮೇಲೆ
ಪುಟ್ಟಾಣಿ ಹುಳು
ಅಂಗುಲಂಗುಲ ಏರಿ
ಪುಟ್ಟ ಪಾದವನೂರಿ
ಅತ್ತಿಂದಿತ್ತ ಜೀಕುತ್ತಾ ಜೋಕಾಲೆ.
ಅವನ ಪಾದದ ಮೇಲೆ
ಅದರ ಪದತಳ.

ಒಂದಿಂಚೋ ಎರಡಿಂಚೋ ಮೂರೋ
ತಗುಲದೇ ಬಿಟ್ಟೂ ಅಂಟುವ
ಆ ಪುಟಾಣಿ ಪಾದ
ಭೂಮಿಗಪ್ಪಿದ ಅವನ ಪಾದಕ್ಕೆ
ಖೋ ಕೊಟ್ಟೆಬ್ಬಿಸಿ
ಆತು ಹಿಡಿದ
ಚುಲ್ಟಾಣಿ ಹುಳುವಿನ ಪಾದ
ಹೆಜ್ಜೆಯೂರಲು ಉಳಿದ
ಕೊನೆಯ ಜಾಗ!

ಹೆಜ್ಜೆ-೨

ಅವನ ದೃಢ ವಿಶಾಲ
ಪಾದದ ಮೇಲೆ
ಚಿಕ್ಕಾಣಿ ಚಿಕ್ಕ ಕೀಟ
ತನ್ನ ಅಂಗೈ ಇಟ್ಟು
ಒತ್ತುತ್ತಾ ಒತ್ತುತ್ತಾ
ಹೆಬ್ಬೆರಳು ಅದರ ಪಕ್ಕದ್ದು
ನಡುಕಿನದು, ಉಂಗುರದ್ದು, ಕಿರಿಯದು
ನೆಕ್ಕುತ್ತಾ ನೇವರಿಸುತ್ತಾ
ಆಟವೋ ಹುಡುಗಾಟವೋ….

ಹೆಜ್ಜೆ-೩

ಅವನ ದೃಢ ವಿಶಾಲ
ಪಾದದ ಮೇಲೆ
ಬೊಟ್ಟಿನಗಲದ ಕ್ರಿಮಿಯೊಂದು ತಲೆಯೂರಿ
ತನ್ನ ತಲೆಗೂದಲಲೇ ಗುಡಿಸಿ ಒರೆಸಿ
ತಲೆಕೆಳಗೆ ಕಾಲು ಮೇಲೆತ್ತಿ ಶಿರ್ಷಾಸನ
ಪಾದದ ಮೇಲಿಂದ
ಬೆರಳ ತುದಿವರೆಗೆ
ಜೊಯ್ಯನೆ ಜಾರೋಬಂಡಿ
ಮತ್ತೆ ಮೊದಲಿಂದ
ಪಾದಕ್ಕೆ ತಲೆಯೂರಿ
ಉಲ್ಟಾಪಲ್ಟಾ ಸರ್ಕಸ್
ಆಟಕ್ಕೆ ಉಳಿದ ಏಕೈಕ ಮೈದಾನ!

ಹೆಜ್ಜೆ-೪

ಅವನ ದೃಢ ವಿಶಾಲ
ಪಾದದ ಮೇಲೆ
ಬೆನ್ನುತಿಕ್ಕಿ ಹಗುರಾಗುವ
ಈ ಕ್ಷುದ್ರಜಂತು
ಅಂಗಾತ ಮಲಗಿ ಶವಾಸನ.
ಕ್ಷಣಕ್ಕೇ ತಿರುವು ಮುರುವಾಗಿ
ಹೊಟ್ಟೆ ಮೇಲೆ ದೇಕುತ್ತಾ
ಬೆರಳಿಂದ ಪಾದಬುಡಕ್ಕೆ
ಪಾದ ಮೂಲದಿಂದ
ಬೆರಳ ತುತ್ತತುದಿಗೆ ಉರುಳಾಟ
ಕೊಬ್ಬಿದ ದೇಹ ಸವೆತಕ್ಕೆ ಒದ್ದಾಟ!

ಹೆಜ್ಜೆ-೫

ಕೊಟ್ಟಕೊನೆಯ ವಿಹಾರಧಾಮ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...