Home / ಕವನ / ಕವಿತೆ / ತನ್ನಷ್ಟಕ್ಕೆ

ತನ್ನಷ್ಟಕ್ಕೆ

ಭೂಮಿಯಾಳದಲ್ಲಿ ಮಾತ್ರ
ಈಜುವ ಪುರಾವೆಗಳಿವೆ
ಈ ಮರದ ಬೇರಿಗೆ
ಹೆಬ್ಬಂಡೆಯೂ ಮಿದು ಮಣ್ಣಾಗಿ
ಹುಡಿ ಹುಡಿಯೂ
ಮಿಸುಕುತ್ತದಂತೆ

ಕಾಣಲಾರದು
ನಮ್ಮಂಥ ಪಾಮರರಿಗೆ!

ಈ ಮರದ ಕೊಂಬೆ ಕೊಂಬೆಗಳಲ್ಲಿ
ನೇತು ಬೀಳಬಹುದು ಯಾರೂ
ಉಯ್ಯಾಲೆಯಾಡಬಹುದು
ಹತ್ತಿ ಕುಪ್ಪಳಿಸಿ ಕುಣಿದು
ಮರಹತ್ತಿ ಮರಕೋತಿಯಾಡಬಹುದು
ನೆಳಲಿನಲಿ ಕುಂಟೋಬಿಲ್ಲೆ……
ರೆಂಬೆಗಳ ಮರೆಯಲ್ಲಿ
ಗೂಡು ಕಟ್ಟಬಹುದು
ತಾವು ಹುಡುಕಬಹುದು!

ಮರ ಸಿಡುಕುವುದಿಲ್ಲ
ಚಡಪಡಿಸಿ ನೂಕುವುದಿಲ್ಲ
ಅಷ್ಟೇ ಅಲ್ಲ
ಯಾವ ಮಾಂತ್ರಿಕತೆಗೂ
ಮಿಡುಕುವುದೂ ಇಲ್ಲ!

ಅದು ಕೇಳುವುದಿಲ್ಲ ನೋಡುವುದಿಲ್ಲ
ನುಡಿಯುವುದೂ ಇಲ್ಲ.
ಅದರ ಅತೀತ ಬೇರಿಗೇ
ಪಂಚೇಂದ್ರಿಯಗಳಂಟಿಕೊಂಡು
ಬೇರು ಮಾತ್ರ ತುಡಿಯುವುದಂತೆ
ಒಳಗೇ,
ಏನು ಮಾಡುವುದು
ನಮ್ಮ ಕಣ್ಣಿಗದು ಕಾಣುವುದೇ ಇಲ್ಲ!

ಗಾಳಿ ಬೀಸಿದಾಗ
ಮಳೆ ಬಿದ್ದಾಗ
ಬಿಸಿಲು ಕಾಯಿಸಿದಾಗ
ಆ ಕ್ಷಣಕ್ಕೆ ಒಡ್ಡಿಕೊಳ್ಳುವುದು ಎಲೆಯೇ
ಮರ ನಿಂತಿರುತ್ತದಷ್ಟೇ ತನ್ನಷ್ಟಕ್ಕೇ!

ಏನೂ ಆಗಿಲ್ಲದಂತೆ!

ಅದಕ್ಕೆ ಅದರದ್ದೇ
ಜನ್ಮಾಂತರದ ಕಥೆಗಳು
ಜೊತೆಗೇ
ಹೊಳೆದೂ ಹೊಳೆಯದ ನಕ್ಷತ್ರಗಳು.
ನಂಟಿದ್ದೂ ಅಂಟಿಯೂ ಅಂಟದಂತೆ
ಹಿಂದಿಲ್ಲದೇ ಮುಂದಿಲ್ಲದೇ
ಬಯಲಲ್ಲಿ ವಿರಾಗಿಯಂತೆ
ನಿಂತ ಮರಕ್ಕೆ

ನಾವೆಷ್ಟಾದರೂ ಜೋತು ಬೀಳಬಹುದು
ಅದು ಆತುಕೊಳ್ಳುವುದಿಲ್ಲವಷ್ಟೇ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...