ಅನೇಕತೆಯಲ್ಲಿ ಏಕತೆ

ಮೌನವಾಗಿದೆ ಧರಿತ್ರಿ
ಮೌನವಾಗಿದೆ ದಿಗಂತ
ಮೌನವಾಗಿದೆ ಸಾಗರ;
ಒಂದಾಗಿದೆ ಭೂಮಂಡಲವಾಗಿ.

ಜತೆಯಾಗಿದೆ ಮೌನದಲಿ
ಅಖಂಡವಾದ ನಂಟಿನಲಿ
ನಿರಂತರತ್ವದ ಸಂಕೇತದಲಿ
ಅವಿಚ್ಛಿನ್ನತೆಯ ಭಾವದಲಿ.

ನೆಲವ ಬಿಟ್ಟು ಜಲವಿಲ್ಲ
ಜಲವಬಿಟ್ಟು ಗಗನವಿಲ್ಲ
ಒಂದಕ್ಕೊಂದು ಜತೆಯಾಗಿದೆ
ಗಾಢವಾದ ಮೌನದಲಿ.

ಆ ಮೌನವ ಸೀಳಿ
ಸ್ವಲ್ಪ ನೀನು ಹೇಳು
ಸ್ವಲ್ಪ ನಾನು ಹೇಳುತ್ತೇನೆ
ಸ್ವಲ್ಪ ಅವರು ಹೇಳುತ್ತಾರೆ.

ನಡೆವುದಾಗ ಭಾವ ಸಮ್ಮೇಳನ
ನಮ್ಮ ನೆಲ ನಮ್ಮ ಚರಿತ್ರೆ
ನಮ್ಮ ಸಂಸ್ಕೃತಿ ನಮ್ಮ ಸಾಹಿತ್ಯದ
ಸ್ನೇಹ ಸಮ್ಮೇಳನ.

ಎಲ್ಲವೂ ಒಂದಾದಾಗ
ಅನೇಕತೆಯು ಏಕತೆಯಲ್ಲಿ ಲೀನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ನೆತ್ತಿಗೆ ಛತ್ರ ಹಿಡಿದು ಹೊರಗಿನ ಮಂದಿ
Next post ಕಷ್ಟ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…