Home / ಕವನ / ಕವಿತೆ / ಪರಿಸರ ಮಾಲಿನ್ಯ

ಪರಿಸರ ಮಾಲಿನ್ಯ

ಮಲಿನವಾಗಿದೆ ಪರಿಸರ
ಗಾಳಿ ನೀರು ಭೂಮಿ ಎಲ್ಲ
ಹಾಳುಗೆಟ್ಟಿದ ಪರಿಸರ
ಮನಸ್ಸು ಹೃದಯ ಭಾವ ಎಲ್ಲ.

ಮಲಿನವಾಗಿದೆ ಪರಿಸರ
ಮರೆತು ಹೋಗಿದೆ ಸದ್ಭಾವ
ಮಡುಗಟ್ಟಿ ರಾಡಿಯಾಗಿದೆ
ಮಾನಸ ಸರೋವರ.

ಮಾಯವಾಗಿದೆ ಮಾನವೀಯತೆ
ಅಟ್ಟಹಾಸ ಗೈದಿದೆ ದಾನವೀಯತೆ
ಮರೆಯಾದಾಗ ಜೀವಿಸುವ ಆಸ್ಥೆ
ಎಲ್ಲಿ ಹುಡುಕಲಿ ದೈವೀಯತೆ?

ನ್ಯಾಯವಿಲ್ಲ, ಧರ್ಮವಿಲ್ಲ,
ನೀತಿ ಇಲ್ಲ, ಪ್ರೀತಿ ಇಲ್ಲ
ಗಾಳಿ ಇಲ್ಲ, ನೀರು ಇಲ್ಲ, ಜಾಗವಿಲ್ಲ
ಎಲ್ಲೆಲ್ಲೂ ನಾಶ, ಪರಿಸರ ನಾಶ!

ಯಾರು ತೊಳೆವರು ಈ ಅಸಹ್ಯತೆ
ಉಸಿರುಗಟ್ಟಿಸುವ ಅಪರಿಶುದ್ಧತೆ
ಯಾರು ತರುವರು ಇಲ್ಲಿಗೆ
ಸ್ವಚ್ಛಭಾವ ತನ್ಮಯತೆ?

ನಾವೆ ಜೀವನದ ಹರಿಕಾರರು
ಆಳುವ ಗುರಿಕಾರರು
ನಾವೆ ಪರಿಸರ ರಕ್ಷಿಸುವವರು
ನಾವೆ ಹಾಳುಗೆಡಹುವವರು.

ನಾವಾಗಬೇಕು ಮಾನವರು
ನಿತ್ಯ ನಿರಂತರ ಜೀವಿಸುವ
ಒಲುಮೆ ಉಕ್ಕಿಸುವ ನಿತ್ಯ ಚೇತನರು.
ಆಗಲಾಗದೇ ಆಗ ಪರಿಸರ ಸಂರಕ್ಷಣೆ
ಮಾನವೀಯತೆಯ ರಕ್ಷಣೆ
ಹಾಕಲಾರವೆ ಸ್ಪಚ್ಛ ಭಾವರಾಗಗಳು
ನಿತ್ಯ ಜೀವನ ಪ್ರದಕ್ಷಿಣೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...