ಪರಿಸರ ಮಾಲಿನ್ಯ

ಮಲಿನವಾಗಿದೆ ಪರಿಸರ
ಗಾಳಿ ನೀರು ಭೂಮಿ ಎಲ್ಲ
ಹಾಳುಗೆಟ್ಟಿದ ಪರಿಸರ
ಮನಸ್ಸು ಹೃದಯ ಭಾವ ಎಲ್ಲ.

ಮಲಿನವಾಗಿದೆ ಪರಿಸರ
ಮರೆತು ಹೋಗಿದೆ ಸದ್ಭಾವ
ಮಡುಗಟ್ಟಿ ರಾಡಿಯಾಗಿದೆ
ಮಾನಸ ಸರೋವರ.

ಮಾಯವಾಗಿದೆ ಮಾನವೀಯತೆ
ಅಟ್ಟಹಾಸ ಗೈದಿದೆ ದಾನವೀಯತೆ
ಮರೆಯಾದಾಗ ಜೀವಿಸುವ ಆಸ್ಥೆ
ಎಲ್ಲಿ ಹುಡುಕಲಿ ದೈವೀಯತೆ?

ನ್ಯಾಯವಿಲ್ಲ, ಧರ್ಮವಿಲ್ಲ,
ನೀತಿ ಇಲ್ಲ, ಪ್ರೀತಿ ಇಲ್ಲ
ಗಾಳಿ ಇಲ್ಲ, ನೀರು ಇಲ್ಲ, ಜಾಗವಿಲ್ಲ
ಎಲ್ಲೆಲ್ಲೂ ನಾಶ, ಪರಿಸರ ನಾಶ!

ಯಾರು ತೊಳೆವರು ಈ ಅಸಹ್ಯತೆ
ಉಸಿರುಗಟ್ಟಿಸುವ ಅಪರಿಶುದ್ಧತೆ
ಯಾರು ತರುವರು ಇಲ್ಲಿಗೆ
ಸ್ವಚ್ಛಭಾವ ತನ್ಮಯತೆ?

ನಾವೆ ಜೀವನದ ಹರಿಕಾರರು
ಆಳುವ ಗುರಿಕಾರರು
ನಾವೆ ಪರಿಸರ ರಕ್ಷಿಸುವವರು
ನಾವೆ ಹಾಳುಗೆಡಹುವವರು.

ನಾವಾಗಬೇಕು ಮಾನವರು
ನಿತ್ಯ ನಿರಂತರ ಜೀವಿಸುವ
ಒಲುಮೆ ಉಕ್ಕಿಸುವ ನಿತ್ಯ ಚೇತನರು.
ಆಗಲಾಗದೇ ಆಗ ಪರಿಸರ ಸಂರಕ್ಷಣೆ
ಮಾನವೀಯತೆಯ ರಕ್ಷಣೆ
ಹಾಕಲಾರವೆ ಸ್ಪಚ್ಛ ಭಾವರಾಗಗಳು
ನಿತ್ಯ ಜೀವನ ಪ್ರದಕ್ಷಿಣೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲೆ ಕಳ್ಳಿ, ವಾಣಿ, ಮೊದಲಿಲ್ಲಿ ಇಡು ಪರಿಹಾರ
Next post ಇಂದಿನ ಸ್ಪೆಷಲ್

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys