ಕಂದರ

ನಾವು ನೀವು ಎಲ್ಲರೊಂದೆ
ಆ ದೇವರ ಮುಂದೆ
ಆದರೆ ಎಲ್ಲರೂ ಬೇರೆ ಬೇರೆ
ಕಾಣದಿರುವ ಅವನ ಹಿಂದೆ.

ಜಾತಿ ಮತ ಬೇರೆ ಬೇರ
ರೀತಿ ನೀತಿ ಬೇರೆ ಬೇರೆ
ಅಲ್ಲೆ ಇದೆ ಭೇದಭಾವ
ಒಬ್ಬರನ್ನೊಬ್ಬರು ದ್ವೇಷಿಸುವ ಮನೋಭಾವ

ಮಾತು ಬೇರೆ ಆಚಾರ ಬೇರೆ
ನಡೆಗೂ ನುಡಿಗೂ ನಡುವೆ ದೊಡ್ಡ ಕಂದರ.
ಅದಕ್ಕೇ ದ್ವೇಷ, ಮತ್ಸರ, ಒಳಜಗಳ
ಕೋಮುವಾದ, ಬಾಂಬು ದಾಳಿ.

ದೇವರೊಬ್ಬನೆ ರೂಪ ಹಲವು
ಮಂದಿರ ಮಸೀದಿ ಇಗರ್ಜಿ
ಪ್ರತಿಷ್ಠಾಪಿಸಿದ್ದೇವೆ ಒಬ್ಬೊಬ್ಬರ
ನಾವು ಕಟ್ಟಿದ ಗರ್ಭಗುಡಿಗಳಲ್ಲಿ!

ರಾಮ ಮ೦ದಿರ
ಬಾಬರಿ ಮಸೀದಿ ಜಗಳದಲ್ಲಿ
ವರುಷವರುಷವೂ ಕೊಡುತ್ತೇವೆ
ಪವಿತ್ರ ನೆಲಕೆ ರಕ್ತತರ್ಪಣ!

ನಾವು ನೀವು ಎಲ್ಲರೊಂದೆ
ಆ ದೇವರ ಮುಂದೆ
ಆದರೆ ಎಲ್ಲರೂ ಬೇರೆ ಬೇರೆ
ಕಾಣದಿರುವ ಅವನ ಹಿಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ
Next post ಪೂರ್‍ಣ ಫಲ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…