ಕಂದರ

ನಾವು ನೀವು ಎಲ್ಲರೊಂದೆ
ಆ ದೇವರ ಮುಂದೆ
ಆದರೆ ಎಲ್ಲರೂ ಬೇರೆ ಬೇರೆ
ಕಾಣದಿರುವ ಅವನ ಹಿಂದೆ.

ಜಾತಿ ಮತ ಬೇರೆ ಬೇರ
ರೀತಿ ನೀತಿ ಬೇರೆ ಬೇರೆ
ಅಲ್ಲೆ ಇದೆ ಭೇದಭಾವ
ಒಬ್ಬರನ್ನೊಬ್ಬರು ದ್ವೇಷಿಸುವ ಮನೋಭಾವ

ಮಾತು ಬೇರೆ ಆಚಾರ ಬೇರೆ
ನಡೆಗೂ ನುಡಿಗೂ ನಡುವೆ ದೊಡ್ಡ ಕಂದರ.
ಅದಕ್ಕೇ ದ್ವೇಷ, ಮತ್ಸರ, ಒಳಜಗಳ
ಕೋಮುವಾದ, ಬಾಂಬು ದಾಳಿ.

ದೇವರೊಬ್ಬನೆ ರೂಪ ಹಲವು
ಮಂದಿರ ಮಸೀದಿ ಇಗರ್ಜಿ
ಪ್ರತಿಷ್ಠಾಪಿಸಿದ್ದೇವೆ ಒಬ್ಬೊಬ್ಬರ
ನಾವು ಕಟ್ಟಿದ ಗರ್ಭಗುಡಿಗಳಲ್ಲಿ!

ರಾಮ ಮ೦ದಿರ
ಬಾಬರಿ ಮಸೀದಿ ಜಗಳದಲ್ಲಿ
ವರುಷವರುಷವೂ ಕೊಡುತ್ತೇವೆ
ಪವಿತ್ರ ನೆಲಕೆ ರಕ್ತತರ್ಪಣ!

ನಾವು ನೀವು ಎಲ್ಲರೊಂದೆ
ಆ ದೇವರ ಮುಂದೆ
ಆದರೆ ಎಲ್ಲರೂ ಬೇರೆ ಬೇರೆ
ಕಾಣದಿರುವ ಅವನ ಹಿಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ
Next post ಪೂರ್‍ಣ ಫಲ

ಸಣ್ಣ ಕತೆ

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…