ನಾವು

ಕಣ್ಣಲ್ಲಿ ನೀರು ತುಂಬಿ
ತುಟಿಯಲ್ಲಿ ನಗು ಅರಳಿಸುತ್ತೇವೆ ನಾವು
ನಗುನಗುತ್ತಾ ಅಳುತ್ತೇವೆ.
ಅಳು ಮುಚ್ಚಿ ನೋವು ಮರೆಸಿ
ನಗುನಗುತ್ತಾ ಬೆರೆಯುತ್ತೇವೆ.
ಹೊರಜಗತ್ತಿಗೆ ಸದಾ ಸುಖಿಗಳು ನಾವು
ನಗುನಗುತ್ತಲೇ ಇರುವ
ಅದೃಷ್ಟಶಾಲಿಗಳು!
ಗೃಹಲಕ್ಷ್ಮಿಗಳು.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಹತ್ತಿರ ಹೋದರೆ
ಏರು ತಗ್ಗು ಕಲ್ಲು ಮುಳ್ಳು ಎಲ್ಲ-
ಹೆಜ್ಜೆ ಹಾಕುವುದು ಕಷ್ಟ.
ಆದರೂ ಹೆಜ್ಜೆ ಹಾಕುತ್ತೇವೆ ನಾವು,
ಕಾಲಲ್ಲಿ ನೆತ್ತರು ಸುರಿಸುತ್ತಾ
ಮುಖದಲ್ಲಿ ನಗು ಸೂಸುತ್ತಾ
ಹೆಜ್ಜೆ ಹಾಕುತ್ತೇವೆ!
ಏನಾದರೂ ನಗುತ್ತೇವೆ ನಾವು
ಕಣ್ಣಲ್ಲಿ ನೀರು ತುಂಬಿ ನಗುತ್ತೇವೆ
ನಗುನಗುತ್ತಾ ಅಳುತ್ತೇವೆ.
ಯಾಕೆಂದರೆ,
ಹೆಣ್ಣಾಗಿ ಹುಟ್ಟಿದ್ದೇವೆ ನಾವು
ನಮ್ಮ ಜೀವನವೇ ಹಾಗೆ
ಚಕ್ರವ್ಯೂಹವ ಒಳಹೊಕ್ಕು
ಹೊರಬರಲು ದಾರಿಕಾಣದ ಹಾಗೆ.
ಯಾವ ವಾದಗಳೂ ನಮ್ಮ ನೆರವಿಗೆ ಬರಲಿಲ್ಲ;
ಜಾಗತೀಕರಣ ನಮ್ಮ ನೋವಿಗೆ
ಪರಿಹಾರ ಹುಡುಕಲಿಲ್ಲ.
ನಾವಿನ್ನೂ ಬದುಕುತ್ತಿದ್ದೇವೆ
ಮೊದಲಿನ ಹಾಗೇ.
ಚಕ್ರವ್ಯೂಹವ ಒಳಹೊಕ್ಕು ಹೊರಬರದ
ಅಭಿಮನ್ಯುವಿನ ಹಾಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೋಯಿಸುವ ಬಲವಿದ್ದರೂ ಯಾರು ನೋಯಿಸರೊ
Next post ಪ್ರೇಮಿ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…