Home / ಕವನ / ಕವಿತೆ / ನಾವು

ನಾವು

ಕಣ್ಣಲ್ಲಿ ನೀರು ತುಂಬಿ
ತುಟಿಯಲ್ಲಿ ನಗು ಅರಳಿಸುತ್ತೇವೆ ನಾವು
ನಗುನಗುತ್ತಾ ಅಳುತ್ತೇವೆ.
ಅಳು ಮುಚ್ಚಿ ನೋವು ಮರೆಸಿ
ನಗುನಗುತ್ತಾ ಬೆರೆಯುತ್ತೇವೆ.
ಹೊರಜಗತ್ತಿಗೆ ಸದಾ ಸುಖಿಗಳು ನಾವು
ನಗುನಗುತ್ತಲೇ ಇರುವ
ಅದೃಷ್ಟಶಾಲಿಗಳು!
ಗೃಹಲಕ್ಷ್ಮಿಗಳು.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಹತ್ತಿರ ಹೋದರೆ
ಏರು ತಗ್ಗು ಕಲ್ಲು ಮುಳ್ಳು ಎಲ್ಲ-
ಹೆಜ್ಜೆ ಹಾಕುವುದು ಕಷ್ಟ.
ಆದರೂ ಹೆಜ್ಜೆ ಹಾಕುತ್ತೇವೆ ನಾವು,
ಕಾಲಲ್ಲಿ ನೆತ್ತರು ಸುರಿಸುತ್ತಾ
ಮುಖದಲ್ಲಿ ನಗು ಸೂಸುತ್ತಾ
ಹೆಜ್ಜೆ ಹಾಕುತ್ತೇವೆ!
ಏನಾದರೂ ನಗುತ್ತೇವೆ ನಾವು
ಕಣ್ಣಲ್ಲಿ ನೀರು ತುಂಬಿ ನಗುತ್ತೇವೆ
ನಗುನಗುತ್ತಾ ಅಳುತ್ತೇವೆ.
ಯಾಕೆಂದರೆ,
ಹೆಣ್ಣಾಗಿ ಹುಟ್ಟಿದ್ದೇವೆ ನಾವು
ನಮ್ಮ ಜೀವನವೇ ಹಾಗೆ
ಚಕ್ರವ್ಯೂಹವ ಒಳಹೊಕ್ಕು
ಹೊರಬರಲು ದಾರಿಕಾಣದ ಹಾಗೆ.
ಯಾವ ವಾದಗಳೂ ನಮ್ಮ ನೆರವಿಗೆ ಬರಲಿಲ್ಲ;
ಜಾಗತೀಕರಣ ನಮ್ಮ ನೋವಿಗೆ
ಪರಿಹಾರ ಹುಡುಕಲಿಲ್ಲ.
ನಾವಿನ್ನೂ ಬದುಕುತ್ತಿದ್ದೇವೆ
ಮೊದಲಿನ ಹಾಗೇ.
ಚಕ್ರವ್ಯೂಹವ ಒಳಹೊಕ್ಕು ಹೊರಬರದ
ಅಭಿಮನ್ಯುವಿನ ಹಾಗೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...