Home / ಕವನ / ಕವಿತೆ / ಭಾರತೀಯ ಏಡಿಗಳು

ಭಾರತೀಯ ಏಡಿಗಳು

ದಿನಾ ಪತ್ರಿಕೆ ಬಿಡಿಸಿದರೆ ಸಾಕು
ನೆನಪಿಗೆ ಬರುವುದು ಎಂದೋ ಕೇಳಿದ್ದ ಏಡಿಗಳ ಕಥೆ;
ಮನತುಂಬುವುದು ಆ ಕಥೆಯೊಳಗಿನ ವ್ಯಥೆ.
ಪರದೇಶಗಳಿಗೆ ಕಳುಹಿಸಲೆಂದು ಹಡಗು ತುಂಬಿದ್ದರು
ಮೀನು ತುಂಬಿದ್ದ ಬುಟ್ಟಿಗಳ.
ದೀರ್ಘ ಪ್ರಯಾಣ, ತೆರೆಗಳ ನಿರಂತರ ಹೊಡೆತ
ಕುಲುಕಾಟದಲಿ ಸಡಿಲಗೊಂಡಿತೊಂದು ಬುಟ್ಟಿಯ ಮುಚ್ಚಳ.
ಕಟ್ಟಲೆಂದು ತೆರೆದನೊಬ್ಬ ಬುಟ್ಟಿಯ
ಕಟ್ಟುವುದ ಬಿಟ್ಟು ದಂಗಾಗಿ ಕುಳಿತನವ
ಏಡಿಗಳ ಕಾಲೆಳೆಯುವ ಆಟವ ನೋಡುತ.
ಮೇಲೇರುತ್ತಿದ್ದ ಏಡಿಗಳ ಕಾಲು ಹಿಡಿದು
ಕೆಳಗಳೆಯುತ್ತಿದ್ದವು ಕೆಳಗಿದ್ದ ಏಡಿಗಳು!
ಪದೇ ಪದೇ ಕೆಳಗುರುಳುತ್ತಿದ್ದವು ಮೇಲೇರುತ್ತಿದ್ದ ಏಡಿಗಳು!
ಈ ಎಳೆದಾಟದ ಆಟವ ನೋಡುತ ಮೈಮರೆತನವ ವಿಸ್ಮಯದಿಂದ,
ಮೇಲೇರ ಪ್ರಯತ್ನಿಸಿಯೂ ಮೇಲೆರಲಾಗದ
ಏಡಿಗಳ ಸ್ಥಿತಿಗೆ ಮಮ್ಮಲ ಮರುಗುತ.
ಇದ ನೋಡಿ ಅಲ್ಲಿದ್ದ ವಿದೇಶಿಯನೊಬ್ಬ
ಉದ್ಘರಿಸಿದ “ಓ ಇಂಡಿಯನ್ ಕ್ರ್ಯಾಬ್ಸ್” “ಅಪ್ಪಟ ಭಾರತೀಯ ಏಡಿಗಳು”!
ಈ ಬುಟ್ಟಿಗೆ ಮುಚ್ಚಳದಗತ್ಯವಿಲ್ಲ.
ಇವು ಹೊರಗೆ ಬರುವುದಿಲ್ಲ ಏಡಿಗೆ ಏಡಿಯೇ ಸರ್ಪಗಾವಲು!

ನಾವೇನು ಬೇರೆಯೇ?
ಮೇಲೇರುತ್ತಿರುವವರ ಕೆಳಕೆ ಜಗ್ಗುವುದು ನಮ್ಮ ನಿರಂತರ ಆಟ.
ಈ ಆಟದಲಿ ಮೇಲೇರಿದವರು ಕೆಳಕ್ಕುರುಳುವುದು
ಒದ್ದಾಡುವುದು, ನಗೆಗೀಡಾಗುವುದು ನಮ್ಮ ಜನ್ಮಕ್ಕಂಟಿದ ಶಾಪ.
ಮೇಲೇರುವವರ ಕ೦ಡರೆ ನಮಗಾಗದು
ಯಾರನ್ನೂ ಮೇಲೇರ ಬಿಡೆವು, ಕೆಳಗುರುಳಿಸಿಯೇ ತೀರುವೆವು
ಕೊನೆಗೊಮ್ಮೆ ಎಲ್ಲರೂ ನೆಲಸಮವಾಗುವೆವು
ಮತ್ತೆ ಮೇಲೇರಲೇ ಆಗದಂತೆ!
ಆಗ ಬರುವುದು ಇನ್ನೊಂದು ಗುಂಪು ಇದೇ ಆಟ ಆಡುತ.
ಪತ್ರಿಕೆ ತುಂಬಾ ಇದೇ ಸುದ್ದಿ
ಎಲ್ಲ ಕಡೆ ಏಡಿಗಳಂತವರದ್ದ ಆಟ.
ಕುರ್ಚಿಗಾಗಿ, ಹಣಕ್ಕಾಗಿ, ಹೆಣ್ಣಿಗಾಗಿ ಕಾದಾಟ, ಎಳೆದಾಟ, ಜಗ್ಗಾಟ.
ಅವರ ಕಾಲನ್ನಿವರು ಇವರು ಕಾಲನ್ನವರು
ಎಳೆದು ಉರುಳಿಸುತ್ತಿರೋ ಕಥೆಗಳು
ಈ ಎಳೆದಾಟದಲಿ ಕಂಗೆಟ್ಟಿರುವ ಪ್ರಜೆಗಳ
ಪರಿಹಾರ ಕಾಣದ ವ್ಯಥೆಗಳು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...