Home / ಕವನ / ಕವಿತೆ / ಭಾರತೀಯ ಏಡಿಗಳು

ಭಾರತೀಯ ಏಡಿಗಳು

ದಿನಾ ಪತ್ರಿಕೆ ಬಿಡಿಸಿದರೆ ಸಾಕು
ನೆನಪಿಗೆ ಬರುವುದು ಎಂದೋ ಕೇಳಿದ್ದ ಏಡಿಗಳ ಕಥೆ;
ಮನತುಂಬುವುದು ಆ ಕಥೆಯೊಳಗಿನ ವ್ಯಥೆ.
ಪರದೇಶಗಳಿಗೆ ಕಳುಹಿಸಲೆಂದು ಹಡಗು ತುಂಬಿದ್ದರು
ಮೀನು ತುಂಬಿದ್ದ ಬುಟ್ಟಿಗಳ.
ದೀರ್ಘ ಪ್ರಯಾಣ, ತೆರೆಗಳ ನಿರಂತರ ಹೊಡೆತ
ಕುಲುಕಾಟದಲಿ ಸಡಿಲಗೊಂಡಿತೊಂದು ಬುಟ್ಟಿಯ ಮುಚ್ಚಳ.
ಕಟ್ಟಲೆಂದು ತೆರೆದನೊಬ್ಬ ಬುಟ್ಟಿಯ
ಕಟ್ಟುವುದ ಬಿಟ್ಟು ದಂಗಾಗಿ ಕುಳಿತನವ
ಏಡಿಗಳ ಕಾಲೆಳೆಯುವ ಆಟವ ನೋಡುತ.
ಮೇಲೇರುತ್ತಿದ್ದ ಏಡಿಗಳ ಕಾಲು ಹಿಡಿದು
ಕೆಳಗಳೆಯುತ್ತಿದ್ದವು ಕೆಳಗಿದ್ದ ಏಡಿಗಳು!
ಪದೇ ಪದೇ ಕೆಳಗುರುಳುತ್ತಿದ್ದವು ಮೇಲೇರುತ್ತಿದ್ದ ಏಡಿಗಳು!
ಈ ಎಳೆದಾಟದ ಆಟವ ನೋಡುತ ಮೈಮರೆತನವ ವಿಸ್ಮಯದಿಂದ,
ಮೇಲೇರ ಪ್ರಯತ್ನಿಸಿಯೂ ಮೇಲೆರಲಾಗದ
ಏಡಿಗಳ ಸ್ಥಿತಿಗೆ ಮಮ್ಮಲ ಮರುಗುತ.
ಇದ ನೋಡಿ ಅಲ್ಲಿದ್ದ ವಿದೇಶಿಯನೊಬ್ಬ
ಉದ್ಘರಿಸಿದ “ಓ ಇಂಡಿಯನ್ ಕ್ರ್ಯಾಬ್ಸ್” “ಅಪ್ಪಟ ಭಾರತೀಯ ಏಡಿಗಳು”!
ಈ ಬುಟ್ಟಿಗೆ ಮುಚ್ಚಳದಗತ್ಯವಿಲ್ಲ.
ಇವು ಹೊರಗೆ ಬರುವುದಿಲ್ಲ ಏಡಿಗೆ ಏಡಿಯೇ ಸರ್ಪಗಾವಲು!

ನಾವೇನು ಬೇರೆಯೇ?
ಮೇಲೇರುತ್ತಿರುವವರ ಕೆಳಕೆ ಜಗ್ಗುವುದು ನಮ್ಮ ನಿರಂತರ ಆಟ.
ಈ ಆಟದಲಿ ಮೇಲೇರಿದವರು ಕೆಳಕ್ಕುರುಳುವುದು
ಒದ್ದಾಡುವುದು, ನಗೆಗೀಡಾಗುವುದು ನಮ್ಮ ಜನ್ಮಕ್ಕಂಟಿದ ಶಾಪ.
ಮೇಲೇರುವವರ ಕ೦ಡರೆ ನಮಗಾಗದು
ಯಾರನ್ನೂ ಮೇಲೇರ ಬಿಡೆವು, ಕೆಳಗುರುಳಿಸಿಯೇ ತೀರುವೆವು
ಕೊನೆಗೊಮ್ಮೆ ಎಲ್ಲರೂ ನೆಲಸಮವಾಗುವೆವು
ಮತ್ತೆ ಮೇಲೇರಲೇ ಆಗದಂತೆ!
ಆಗ ಬರುವುದು ಇನ್ನೊಂದು ಗುಂಪು ಇದೇ ಆಟ ಆಡುತ.
ಪತ್ರಿಕೆ ತುಂಬಾ ಇದೇ ಸುದ್ದಿ
ಎಲ್ಲ ಕಡೆ ಏಡಿಗಳಂತವರದ್ದ ಆಟ.
ಕುರ್ಚಿಗಾಗಿ, ಹಣಕ್ಕಾಗಿ, ಹೆಣ್ಣಿಗಾಗಿ ಕಾದಾಟ, ಎಳೆದಾಟ, ಜಗ್ಗಾಟ.
ಅವರ ಕಾಲನ್ನಿವರು ಇವರು ಕಾಲನ್ನವರು
ಎಳೆದು ಉರುಳಿಸುತ್ತಿರೋ ಕಥೆಗಳು
ಈ ಎಳೆದಾಟದಲಿ ಕಂಗೆಟ್ಟಿರುವ ಪ್ರಜೆಗಳ
ಪರಿಹಾರ ಕಾಣದ ವ್ಯಥೆಗಳು!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...