Home / ಕವನ / ಕವಿತೆ / ಭಾರತೀಯ ಏಡಿಗಳು

ಭಾರತೀಯ ಏಡಿಗಳು

ದಿನಾ ಪತ್ರಿಕೆ ಬಿಡಿಸಿದರೆ ಸಾಕು
ನೆನಪಿಗೆ ಬರುವುದು ಎಂದೋ ಕೇಳಿದ್ದ ಏಡಿಗಳ ಕಥೆ;
ಮನತುಂಬುವುದು ಆ ಕಥೆಯೊಳಗಿನ ವ್ಯಥೆ.
ಪರದೇಶಗಳಿಗೆ ಕಳುಹಿಸಲೆಂದು ಹಡಗು ತುಂಬಿದ್ದರು
ಮೀನು ತುಂಬಿದ್ದ ಬುಟ್ಟಿಗಳ.
ದೀರ್ಘ ಪ್ರಯಾಣ, ತೆರೆಗಳ ನಿರಂತರ ಹೊಡೆತ
ಕುಲುಕಾಟದಲಿ ಸಡಿಲಗೊಂಡಿತೊಂದು ಬುಟ್ಟಿಯ ಮುಚ್ಚಳ.
ಕಟ್ಟಲೆಂದು ತೆರೆದನೊಬ್ಬ ಬುಟ್ಟಿಯ
ಕಟ್ಟುವುದ ಬಿಟ್ಟು ದಂಗಾಗಿ ಕುಳಿತನವ
ಏಡಿಗಳ ಕಾಲೆಳೆಯುವ ಆಟವ ನೋಡುತ.
ಮೇಲೇರುತ್ತಿದ್ದ ಏಡಿಗಳ ಕಾಲು ಹಿಡಿದು
ಕೆಳಗಳೆಯುತ್ತಿದ್ದವು ಕೆಳಗಿದ್ದ ಏಡಿಗಳು!
ಪದೇ ಪದೇ ಕೆಳಗುರುಳುತ್ತಿದ್ದವು ಮೇಲೇರುತ್ತಿದ್ದ ಏಡಿಗಳು!
ಈ ಎಳೆದಾಟದ ಆಟವ ನೋಡುತ ಮೈಮರೆತನವ ವಿಸ್ಮಯದಿಂದ,
ಮೇಲೇರ ಪ್ರಯತ್ನಿಸಿಯೂ ಮೇಲೆರಲಾಗದ
ಏಡಿಗಳ ಸ್ಥಿತಿಗೆ ಮಮ್ಮಲ ಮರುಗುತ.
ಇದ ನೋಡಿ ಅಲ್ಲಿದ್ದ ವಿದೇಶಿಯನೊಬ್ಬ
ಉದ್ಘರಿಸಿದ “ಓ ಇಂಡಿಯನ್ ಕ್ರ್ಯಾಬ್ಸ್” “ಅಪ್ಪಟ ಭಾರತೀಯ ಏಡಿಗಳು”!
ಈ ಬುಟ್ಟಿಗೆ ಮುಚ್ಚಳದಗತ್ಯವಿಲ್ಲ.
ಇವು ಹೊರಗೆ ಬರುವುದಿಲ್ಲ ಏಡಿಗೆ ಏಡಿಯೇ ಸರ್ಪಗಾವಲು!

ನಾವೇನು ಬೇರೆಯೇ?
ಮೇಲೇರುತ್ತಿರುವವರ ಕೆಳಕೆ ಜಗ್ಗುವುದು ನಮ್ಮ ನಿರಂತರ ಆಟ.
ಈ ಆಟದಲಿ ಮೇಲೇರಿದವರು ಕೆಳಕ್ಕುರುಳುವುದು
ಒದ್ದಾಡುವುದು, ನಗೆಗೀಡಾಗುವುದು ನಮ್ಮ ಜನ್ಮಕ್ಕಂಟಿದ ಶಾಪ.
ಮೇಲೇರುವವರ ಕ೦ಡರೆ ನಮಗಾಗದು
ಯಾರನ್ನೂ ಮೇಲೇರ ಬಿಡೆವು, ಕೆಳಗುರುಳಿಸಿಯೇ ತೀರುವೆವು
ಕೊನೆಗೊಮ್ಮೆ ಎಲ್ಲರೂ ನೆಲಸಮವಾಗುವೆವು
ಮತ್ತೆ ಮೇಲೇರಲೇ ಆಗದಂತೆ!
ಆಗ ಬರುವುದು ಇನ್ನೊಂದು ಗುಂಪು ಇದೇ ಆಟ ಆಡುತ.
ಪತ್ರಿಕೆ ತುಂಬಾ ಇದೇ ಸುದ್ದಿ
ಎಲ್ಲ ಕಡೆ ಏಡಿಗಳಂತವರದ್ದ ಆಟ.
ಕುರ್ಚಿಗಾಗಿ, ಹಣಕ್ಕಾಗಿ, ಹೆಣ್ಣಿಗಾಗಿ ಕಾದಾಟ, ಎಳೆದಾಟ, ಜಗ್ಗಾಟ.
ಅವರ ಕಾಲನ್ನಿವರು ಇವರು ಕಾಲನ್ನವರು
ಎಳೆದು ಉರುಳಿಸುತ್ತಿರೋ ಕಥೆಗಳು
ಈ ಎಳೆದಾಟದಲಿ ಕಂಗೆಟ್ಟಿರುವ ಪ್ರಜೆಗಳ
ಪರಿಹಾರ ಕಾಣದ ವ್ಯಥೆಗಳು!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...