ಭಾರತೀಯ ಏಡಿಗಳು

ದಿನಾ ಪತ್ರಿಕೆ ಬಿಡಿಸಿದರೆ ಸಾಕು
ನೆನಪಿಗೆ ಬರುವುದು ಎಂದೋ ಕೇಳಿದ್ದ ಏಡಿಗಳ ಕಥೆ;
ಮನತುಂಬುವುದು ಆ ಕಥೆಯೊಳಗಿನ ವ್ಯಥೆ.
ಪರದೇಶಗಳಿಗೆ ಕಳುಹಿಸಲೆಂದು ಹಡಗು ತುಂಬಿದ್ದರು
ಮೀನು ತುಂಬಿದ್ದ ಬುಟ್ಟಿಗಳ.
ದೀರ್ಘ ಪ್ರಯಾಣ, ತೆರೆಗಳ ನಿರಂತರ ಹೊಡೆತ
ಕುಲುಕಾಟದಲಿ ಸಡಿಲಗೊಂಡಿತೊಂದು ಬುಟ್ಟಿಯ ಮುಚ್ಚಳ.
ಕಟ್ಟಲೆಂದು ತೆರೆದನೊಬ್ಬ ಬುಟ್ಟಿಯ
ಕಟ್ಟುವುದ ಬಿಟ್ಟು ದಂಗಾಗಿ ಕುಳಿತನವ
ಏಡಿಗಳ ಕಾಲೆಳೆಯುವ ಆಟವ ನೋಡುತ.
ಮೇಲೇರುತ್ತಿದ್ದ ಏಡಿಗಳ ಕಾಲು ಹಿಡಿದು
ಕೆಳಗಳೆಯುತ್ತಿದ್ದವು ಕೆಳಗಿದ್ದ ಏಡಿಗಳು!
ಪದೇ ಪದೇ ಕೆಳಗುರುಳುತ್ತಿದ್ದವು ಮೇಲೇರುತ್ತಿದ್ದ ಏಡಿಗಳು!
ಈ ಎಳೆದಾಟದ ಆಟವ ನೋಡುತ ಮೈಮರೆತನವ ವಿಸ್ಮಯದಿಂದ,
ಮೇಲೇರ ಪ್ರಯತ್ನಿಸಿಯೂ ಮೇಲೆರಲಾಗದ
ಏಡಿಗಳ ಸ್ಥಿತಿಗೆ ಮಮ್ಮಲ ಮರುಗುತ.
ಇದ ನೋಡಿ ಅಲ್ಲಿದ್ದ ವಿದೇಶಿಯನೊಬ್ಬ
ಉದ್ಘರಿಸಿದ “ಓ ಇಂಡಿಯನ್ ಕ್ರ್ಯಾಬ್ಸ್” “ಅಪ್ಪಟ ಭಾರತೀಯ ಏಡಿಗಳು”!
ಈ ಬುಟ್ಟಿಗೆ ಮುಚ್ಚಳದಗತ್ಯವಿಲ್ಲ.
ಇವು ಹೊರಗೆ ಬರುವುದಿಲ್ಲ ಏಡಿಗೆ ಏಡಿಯೇ ಸರ್ಪಗಾವಲು!

ನಾವೇನು ಬೇರೆಯೇ?
ಮೇಲೇರುತ್ತಿರುವವರ ಕೆಳಕೆ ಜಗ್ಗುವುದು ನಮ್ಮ ನಿರಂತರ ಆಟ.
ಈ ಆಟದಲಿ ಮೇಲೇರಿದವರು ಕೆಳಕ್ಕುರುಳುವುದು
ಒದ್ದಾಡುವುದು, ನಗೆಗೀಡಾಗುವುದು ನಮ್ಮ ಜನ್ಮಕ್ಕಂಟಿದ ಶಾಪ.
ಮೇಲೇರುವವರ ಕ೦ಡರೆ ನಮಗಾಗದು
ಯಾರನ್ನೂ ಮೇಲೇರ ಬಿಡೆವು, ಕೆಳಗುರುಳಿಸಿಯೇ ತೀರುವೆವು
ಕೊನೆಗೊಮ್ಮೆ ಎಲ್ಲರೂ ನೆಲಸಮವಾಗುವೆವು
ಮತ್ತೆ ಮೇಲೇರಲೇ ಆಗದಂತೆ!
ಆಗ ಬರುವುದು ಇನ್ನೊಂದು ಗುಂಪು ಇದೇ ಆಟ ಆಡುತ.
ಪತ್ರಿಕೆ ತುಂಬಾ ಇದೇ ಸುದ್ದಿ
ಎಲ್ಲ ಕಡೆ ಏಡಿಗಳಂತವರದ್ದ ಆಟ.
ಕುರ್ಚಿಗಾಗಿ, ಹಣಕ್ಕಾಗಿ, ಹೆಣ್ಣಿಗಾಗಿ ಕಾದಾಟ, ಎಳೆದಾಟ, ಜಗ್ಗಾಟ.
ಅವರ ಕಾಲನ್ನಿವರು ಇವರು ಕಾಲನ್ನವರು
ಎಳೆದು ಉರುಳಿಸುತ್ತಿರೋ ಕಥೆಗಳು
ಈ ಎಳೆದಾಟದಲಿ ಕಂಗೆಟ್ಟಿರುವ ಪ್ರಜೆಗಳ
ಪರಿಹಾರ ಕಾಣದ ವ್ಯಥೆಗಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಟ್ಟಿನಲಿ ಹೆಮ್ಮೆ ಕೆಲವರಿಗೆ, ನೈಪುಣ್ಯದ್ದು
Next post ವಾಪಸ್ಸು

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys