ಹುಟ್ಟಿನಲಿ ಹೆಮ್ಮೆ ಕೆಲವರಿಗೆ, ನೈಪುಣ್ಯದ್ದು
ಮತ್ತೆ ಕೆಲವರಿಗೆ, ಸಂಪತ್ತಿನೊಳು ಹಲವರಿಗೆ,
ದೇಹದಾರ್ಢ್ಯದಲಿ ಇತರರಿಗೆ, ಹೊಂದದೆ ಇದ್ದೂ
ಉಡುತೊಡುವ ಹೊಳಪಿನುಡುಪಗಳಲ್ಲಿ ಕೆಲವರಿಗೆ,
ಬೇಟೆನಾಯಿಗಳಲ್ಲಿ, ಗಿಡುಗ ಕುದುರೆಗಳಲ್ಲಿ
ಬಗೆಬಗೆಯ ಗೀಳು ಬಗೆಬಗೆ ಮನೋಧರ್ಮಕ್ಕೆ.
ರುಚಿಯಿಲ್ಲ ನನಗೆ ಈ ಯಾವುದೆ ವಿಷಯದಲ್ಲಿ
ಇದನೆಲ್ಲ ಮೀರಿನಿಂತಿರುವ ಸಿರಿಯೊಂದಕ್ಕೆ
ಮನ ಪೂರ ಮಾರುಹೋಗಿದೆ. ನನಗೆ ನಿನ್ನೊಲವು
ಹುಟ್ಟು, ನೈಪುಣ್ಯ, ಉಡುಪಿಗೂ ಮೇಲೆ ಎನ್ನುವೆನು,
ಗಿಡುಗ ಕುದುರೆಗಳನೂ ಮೀರಿಸಿದ ಸಂಪದವು
ಮನುಜರೆಲ್ಲರ ಹೆಮ್ಮೆ ನಿನ್ನ ಪಡೆದುಬ್ಬುವೆನು.
ಒಂದೆ ದುರ್ವಿಧಿ ನನಗೆ, ನೀನಿರಾದ ಪಕ್ಷಕ್ಕೆ
ಯಾವುದೂ ಇರದ ನತದೃಷ್ಟ ನಾಲೋಕಕ್ಕೆ.
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 91
Some glory in their birth, some in their skill
Related Post
ಸಣ್ಣ ಕತೆ
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
-
ನಿರಾಳ
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…