ಯುಗಪುರುಷ

ನಮನವು ನಿಮಗೆ ಕಾರಂತ
ನಿಮಗಿಂತ ಬೇರಾರಿಲ್ಲ ಧೀಮಂತ
ಕೊನೆಯವರೆಗೂ ಚುರುಕು ಶ್ರೀಮಂತ
ಸಾಕೆನಿಸಿದಾಗ ಒಮ್ಮೆಲೆ ಎಲ್ಲವೂ ಶಾಂತ.

ಮನುಷ್ಯನ ಅಳೆವುದು ಸಾವು
ಸಾಧಿಸಿ ತೋರಿದಿರಿ ನೀವು
ಇರುವಾಗ ಕಡಲ ತೀರದ ಭಾರ್ಗವ
ಮರಣದಲಿ ಯುಗಪುರುಷ!

ಬದುಕು ವೈವಿಧ್ಯಮಯ
ಬರೆದ ಹಾಳೆಗಳು ಅಗಾಧ, ವಿಶಾಲ
ಮಿತಿ ಇಲ್ಲ ಮೇರೆ ಇಲ್ಲ
ನಿಮ್ಮ ಸಾಧನೆಗೆ ಸಾಟಿಯೇ ಇಲ್ಲ.

ನಡೆಸಿದ್ದು ಸಾಂಸ್ಕೃತಿಕ ಉತ್ಖನನ
ಜೀವನ ಪರ್ಯಂತ ಪ್ರಯೋಗ
ಆಶಿಸಲಿಲ್ಲ ಪ್ರಶಸ್ತಿಗಾಗಿ
ಆದರೂ ತುಂಬಿತು ಖ್ಯಾತಿ, ಪ್ರಖ್ಯಾತಿ!

ಬಂಗಾಳಿಗೆ ಠಾಗೋರರಂತೆ ಕನ್ನಡಕ್ಕೆ ಕಾರಂತ
ಗೆಜ್ಜೆ ಕಟ್ಟಿ ಕುಣಿದದ್ದೇನು; ಜಗತ್ತೆಲ್ಲ ಅಲೆದದ್ದೇನು
ಗುಡ್ಡ ಬೆಟ್ಟವ ಹತ್ತಿ ಇಳಿದದ್ದೇನು, ಕಡಲತಡಿಯ ತುಳಿದದ್ದೇನು
ಬಾಚಿ ಬಾಚಿ ತಬ್ಬಿಕೊಂಡದ್ದು ಜ್ಞಾನ ಸಂಪತ್ತು.

ನಿಮ್ಮಾದರ್ಶಗಳು ದಾರಿದೀಪ
ಈ ನೆಲವಿರುವ ತನಕ ಸಾಹಿತ್ಯ ಲೋಕದ ಸಾಮ್ರಾಟ!
ಸಾವಲ್ಲಿ ಗಾಂಧಿಯಂತೆ ಜನರ ಎದೆಯಲ್ಲಿ
ಶೋಕ ತುಂಬಿ ಸೇರಿದಿರಿ ಮರಳಿಮಣ್ಣಿಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿತ ಅಹಿತ ಹೀಗೆ ನನಗುಂಟು ಒಲವೆರಡು
Next post ಸಾಧನೆ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys