ಯುಗಪುರುಷ

ನಮನವು ನಿಮಗೆ ಕಾರಂತ
ನಿಮಗಿಂತ ಬೇರಾರಿಲ್ಲ ಧೀಮಂತ
ಕೊನೆಯವರೆಗೂ ಚುರುಕು ಶ್ರೀಮಂತ
ಸಾಕೆನಿಸಿದಾಗ ಒಮ್ಮೆಲೆ ಎಲ್ಲವೂ ಶಾಂತ.

ಮನುಷ್ಯನ ಅಳೆವುದು ಸಾವು
ಸಾಧಿಸಿ ತೋರಿದಿರಿ ನೀವು
ಇರುವಾಗ ಕಡಲ ತೀರದ ಭಾರ್ಗವ
ಮರಣದಲಿ ಯುಗಪುರುಷ!

ಬದುಕು ವೈವಿಧ್ಯಮಯ
ಬರೆದ ಹಾಳೆಗಳು ಅಗಾಧ, ವಿಶಾಲ
ಮಿತಿ ಇಲ್ಲ ಮೇರೆ ಇಲ್ಲ
ನಿಮ್ಮ ಸಾಧನೆಗೆ ಸಾಟಿಯೇ ಇಲ್ಲ.

ನಡೆಸಿದ್ದು ಸಾಂಸ್ಕೃತಿಕ ಉತ್ಖನನ
ಜೀವನ ಪರ್ಯಂತ ಪ್ರಯೋಗ
ಆಶಿಸಲಿಲ್ಲ ಪ್ರಶಸ್ತಿಗಾಗಿ
ಆದರೂ ತುಂಬಿತು ಖ್ಯಾತಿ, ಪ್ರಖ್ಯಾತಿ!

ಬಂಗಾಳಿಗೆ ಠಾಗೋರರಂತೆ ಕನ್ನಡಕ್ಕೆ ಕಾರಂತ
ಗೆಜ್ಜೆ ಕಟ್ಟಿ ಕುಣಿದದ್ದೇನು; ಜಗತ್ತೆಲ್ಲ ಅಲೆದದ್ದೇನು
ಗುಡ್ಡ ಬೆಟ್ಟವ ಹತ್ತಿ ಇಳಿದದ್ದೇನು, ಕಡಲತಡಿಯ ತುಳಿದದ್ದೇನು
ಬಾಚಿ ಬಾಚಿ ತಬ್ಬಿಕೊಂಡದ್ದು ಜ್ಞಾನ ಸಂಪತ್ತು.

ನಿಮ್ಮಾದರ್ಶಗಳು ದಾರಿದೀಪ
ಈ ನೆಲವಿರುವ ತನಕ ಸಾಹಿತ್ಯ ಲೋಕದ ಸಾಮ್ರಾಟ!
ಸಾವಲ್ಲಿ ಗಾಂಧಿಯಂತೆ ಜನರ ಎದೆಯಲ್ಲಿ
ಶೋಕ ತುಂಬಿ ಸೇರಿದಿರಿ ಮರಳಿಮಣ್ಣಿಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿತ ಅಹಿತ ಹೀಗೆ ನನಗುಂಟು ಒಲವೆರಡು
Next post ಸಾಧನೆ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…