Home / ಕವನ / ಕವಿತೆ / ಯುಗಪುರುಷ

ಯುಗಪುರುಷ

ನಮನವು ನಿಮಗೆ ಕಾರಂತ
ನಿಮಗಿಂತ ಬೇರಾರಿಲ್ಲ ಧೀಮಂತ
ಕೊನೆಯವರೆಗೂ ಚುರುಕು ಶ್ರೀಮಂತ
ಸಾಕೆನಿಸಿದಾಗ ಒಮ್ಮೆಲೆ ಎಲ್ಲವೂ ಶಾಂತ.

ಮನುಷ್ಯನ ಅಳೆವುದು ಸಾವು
ಸಾಧಿಸಿ ತೋರಿದಿರಿ ನೀವು
ಇರುವಾಗ ಕಡಲ ತೀರದ ಭಾರ್ಗವ
ಮರಣದಲಿ ಯುಗಪುರುಷ!

ಬದುಕು ವೈವಿಧ್ಯಮಯ
ಬರೆದ ಹಾಳೆಗಳು ಅಗಾಧ, ವಿಶಾಲ
ಮಿತಿ ಇಲ್ಲ ಮೇರೆ ಇಲ್ಲ
ನಿಮ್ಮ ಸಾಧನೆಗೆ ಸಾಟಿಯೇ ಇಲ್ಲ.

ನಡೆಸಿದ್ದು ಸಾಂಸ್ಕೃತಿಕ ಉತ್ಖನನ
ಜೀವನ ಪರ್ಯಂತ ಪ್ರಯೋಗ
ಆಶಿಸಲಿಲ್ಲ ಪ್ರಶಸ್ತಿಗಾಗಿ
ಆದರೂ ತುಂಬಿತು ಖ್ಯಾತಿ, ಪ್ರಖ್ಯಾತಿ!

ಬಂಗಾಳಿಗೆ ಠಾಗೋರರಂತೆ ಕನ್ನಡಕ್ಕೆ ಕಾರಂತ
ಗೆಜ್ಜೆ ಕಟ್ಟಿ ಕುಣಿದದ್ದೇನು; ಜಗತ್ತೆಲ್ಲ ಅಲೆದದ್ದೇನು
ಗುಡ್ಡ ಬೆಟ್ಟವ ಹತ್ತಿ ಇಳಿದದ್ದೇನು, ಕಡಲತಡಿಯ ತುಳಿದದ್ದೇನು
ಬಾಚಿ ಬಾಚಿ ತಬ್ಬಿಕೊಂಡದ್ದು ಜ್ಞಾನ ಸಂಪತ್ತು.

ನಿಮ್ಮಾದರ್ಶಗಳು ದಾರಿದೀಪ
ಈ ನೆಲವಿರುವ ತನಕ ಸಾಹಿತ್ಯ ಲೋಕದ ಸಾಮ್ರಾಟ!
ಸಾವಲ್ಲಿ ಗಾಂಧಿಯಂತೆ ಜನರ ಎದೆಯಲ್ಲಿ
ಶೋಕ ತುಂಬಿ ಸೇರಿದಿರಿ ಮರಳಿಮಣ್ಣಿಗೆ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...