ಶ್ರೀ ಜಯದೇವಿ ತಾಯಿಯವರಿಗೆ

ಕನ್ನಡದ ಸಿರಿದೇವಿ ಅನುಭಾವಿ ಮಾದೇವಿ
ಕನ್ನಡದ ದುಸ್ಥಿತಿಯ ಕಂಡು ಕಳವಳಗೊಂಡು
ಮೈಮರೆದು ಮಲಗಿರುವ ಮಹಿಳೆಯರ, ವಿಸ್ಮರಣ-
ಸಾಗರದಿ ಮುಳುಮುಳುಗಿ ತೊಳಲುತಿಹ ಪುರುಷರನ್ನು
ಎಚ್ಚರಿಸಿ ಮತ್ತೆ ಕನ್ನಡ ತಾಯ ಐಸಿರಿಯ
ಪವಣಿಸಲು ಹೊಂದಿಸಲು ತಲೆಯೆತ್ತಿ ಮೆರೆಯಿಸಲು
ಕೈಲಾಸವನು ತೊರೆದು ಶಿವಲಿಂಗದೈಕ್ಯವನು
ಮನವಾರೆ ಬಿಟ್ಟಳಿದು ಬಂದಳೆನ್ನುವ ರೀತಿ
ಶಿವಸಿದ್ಧರಾಮನೂ ತನ್ನ ತಪದೆರವಿತ್
ಬಸವಣ್ಣ ತನ್ನ ಘನಮನದ ಭಕುತಿಯನಿತ್ತ
ಪಾರ್ವತಿಯು ಕಣ್ದೆರೆದು ಬಾಯ್ತುಂಬ ಹರಸಿದಳು
ಶಿವನಿತ್ತ ತನ್ನ ಮಹ ವರದ ಹಸ್ತವನಾಗ
ಎಂಬ ರೀತಿಯೊಳೀಗ ಕನ್ನಡದ ನಾಡಿನಲಿ
ಕೀರ್ತಿಯಲಿ ಜಯದೇವಿ ಮಾತಾಯಿ ಎಸೆಯುವಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೦
Next post ರಂಗಣ್ಣನ ಕನಸಿನ ದಿನಗಳು – ೧೪

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…