ಹೂವು

ಕರೆಯದಿರು ಕೈ ಮಾಡಿ ನೆನೆಸದಿರು ಕನಸಿನಲಿ
ನಿನ್ನ ದೃಷ್ಟಿಯು ಇತ್ತ ಸುಳಿಯದಿರಲಿ
ನನ್ನ ಒಲುಮೆಯ ನೀನು ಬಯಸದಿರು ಎಂದಿಗೂ
ಚಿತ್ತವಳಿಪನು ನನಗೆ ತಳೆಯದಿರಲಿ

ನಾನೊಂದು ನಿಷ್ಪಾಪಿ ಹೂವು ಸುಖದಿಂದಿರುವೆ
ದೃಷ್ಟಿ ತಾಕಿದರಾನು ಬಾಡಿಯೇನು
ಮುಟ್ಟಲೇತಕೆ ಮುಂದೆ? ಬಾಳಲಾರೆನು ತುಂಬಿ
ಸೃಷ್ಟಿಗೀತೆಯನೆಂತು ಹಾಡಿಯೇನು

ಜನುಮವಿತ್ತನ ಪಾದ ಸೇರಲೆಂದೆಂಬಾಸೆ
ನನ್ನ ಪಾವಿತ್ರ್ಯವನು ಉಳಿಸು ಗುಂಗಿ
ಹುಡಿಯಲ್ಲಿ ಹೊರಳುವೊಲು ಮಾಡದಿರು ಕಾಡದಿರು
ಒಂದೆ ಅರೆನಿಮಿಷವನು ಇಲ್ಲಿ ತಂಗಿ

ನನ್ನ ಸೌಂದರ್ಯವದು ಈಶನಿಗೆ ಮೀಸಲಿದೆ
ನನ್ನ ಸೌರಭ್ಯವೂ ಅವನಿಗಾಗಿ
ಸುಮ್ಮನೇತಕೆ ಬಯಕೆ? ಜಾರಿಸದಿರೆನ್ನನ್ನು
ಒಂದೇ ನಿಮಿಷದ ಅಧಮ ಸೌಖ್ಯಕಾಗಿ

ಮೊರೆಯದಿರು ಮನಸಿನಲಿ ಮರೆಯದಿರು ಮೆಲು ನುಡಿಯ
ಇರಲಿ ತುಂಬಿಯೆ ನಮ್ಮ ಸೋದರತನ
ಚ್ಯುತಿ ಬರದೆ ಸತ್ಯದಾ ಸಾಧನೆಯು ನಡೆದಿರಲಿ
ತುಂಬಿರಲಿ ಸಂತಸದಿ ನಮ್ಮೀ ಮನ

ದಾರಿತಪ್ಪುವ ಚಿಂತೆ ನನಗಿಲ್ಲ ಭಾರವನು
ಗುರುದೇವ ಹೊತ್ತಿರಲು ಓ ಸೋದರ
ಬೀಳಲಿರೆ ಹಿಡಿಯುವನು ಕೈಯಿಂದಲೆತ್ತುವನು
ಏತಕ್ಕೆ ಸಾಕಿನ್ನು ಈ ಕಾತರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೮
Next post ರಾವಣಾಂತರಂಗ – ೨೦

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…