ಹೂವು

ಕರೆಯದಿರು ಕೈ ಮಾಡಿ ನೆನೆಸದಿರು ಕನಸಿನಲಿ
ನಿನ್ನ ದೃಷ್ಟಿಯು ಇತ್ತ ಸುಳಿಯದಿರಲಿ
ನನ್ನ ಒಲುಮೆಯ ನೀನು ಬಯಸದಿರು ಎಂದಿಗೂ
ಚಿತ್ತವಳಿಪನು ನನಗೆ ತಳೆಯದಿರಲಿ

ನಾನೊಂದು ನಿಷ್ಪಾಪಿ ಹೂವು ಸುಖದಿಂದಿರುವೆ
ದೃಷ್ಟಿ ತಾಕಿದರಾನು ಬಾಡಿಯೇನು
ಮುಟ್ಟಲೇತಕೆ ಮುಂದೆ? ಬಾಳಲಾರೆನು ತುಂಬಿ
ಸೃಷ್ಟಿಗೀತೆಯನೆಂತು ಹಾಡಿಯೇನು

ಜನುಮವಿತ್ತನ ಪಾದ ಸೇರಲೆಂದೆಂಬಾಸೆ
ನನ್ನ ಪಾವಿತ್ರ್ಯವನು ಉಳಿಸು ಗುಂಗಿ
ಹುಡಿಯಲ್ಲಿ ಹೊರಳುವೊಲು ಮಾಡದಿರು ಕಾಡದಿರು
ಒಂದೆ ಅರೆನಿಮಿಷವನು ಇಲ್ಲಿ ತಂಗಿ

ನನ್ನ ಸೌಂದರ್ಯವದು ಈಶನಿಗೆ ಮೀಸಲಿದೆ
ನನ್ನ ಸೌರಭ್ಯವೂ ಅವನಿಗಾಗಿ
ಸುಮ್ಮನೇತಕೆ ಬಯಕೆ? ಜಾರಿಸದಿರೆನ್ನನ್ನು
ಒಂದೇ ನಿಮಿಷದ ಅಧಮ ಸೌಖ್ಯಕಾಗಿ

ಮೊರೆಯದಿರು ಮನಸಿನಲಿ ಮರೆಯದಿರು ಮೆಲು ನುಡಿಯ
ಇರಲಿ ತುಂಬಿಯೆ ನಮ್ಮ ಸೋದರತನ
ಚ್ಯುತಿ ಬರದೆ ಸತ್ಯದಾ ಸಾಧನೆಯು ನಡೆದಿರಲಿ
ತುಂಬಿರಲಿ ಸಂತಸದಿ ನಮ್ಮೀ ಮನ

ದಾರಿತಪ್ಪುವ ಚಿಂತೆ ನನಗಿಲ್ಲ ಭಾರವನು
ಗುರುದೇವ ಹೊತ್ತಿರಲು ಓ ಸೋದರ
ಬೀಳಲಿರೆ ಹಿಡಿಯುವನು ಕೈಯಿಂದಲೆತ್ತುವನು
ಏತಕ್ಕೆ ಸಾಕಿನ್ನು ಈ ಕಾತರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೮
Next post ರಾವಣಾಂತರಂಗ – ೨೦

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…