ಮಗುವಿನೊಡನೆ

ನೂರುಬಣ್ಣಗಳ ಉಟ್ಟು ನಲಿಯುವವು
ಮೋಡ ಹೊಳೆಯುಹಳ್ಳ
ನಿನಗೆ ತಂದಿರಲು ಬಣ್ಣದಾಟಿಗೆಯ
ಅಲ್ಲವೇನು ಕಳ್ಳ

ಕಣ್ಣನೆಳೆವ ಬಣ್ಣಗಳು ಹೂವ ಮೆರು-
ಗನ್ನು ಹೆಚ್ಚಿಸುವವು
ಏಕೆ ಎಂಬುದನು ಬಲ್ಲೆ ಬಾಳಣ್ಣ
ನಿನ್ನ ಮೆಚ್ಚಿಸುವವು

ನಿನ್ನ ಕುಣಿಸಲೆಂದಾನು ಹಾಡುತಿರೆ
ಎಲೆಗಳಲ್ಲಿ ಗಾನ
ತೇಲಿಬರುವದೋ ಗಾಳಿಯಲ್ಲಿ ಆ
ಮಧುರವಾದ ತಾನ

ನೆಲದ ಎದೆಯು ತಾನಕ್ಕು ನಲಿಯುವದು
ಅಲೆಯ ಗೀತ ಕೇಳಿ
ನನ್ನದನಿಗೆ ಜೊತೆಯಾಗಿ ನಡೆಯಲಿರೆ
ನಿನ್ನ ನೃತ್ಯ ಕೇಳಿ

ನಿನ್ನ ಚಾಚಿರುವ ಹರಹು ಅಂಗೈಗೆ
ಸವಿಯ ತಿನಸನಿಡಲು
ಹೂವು ಬಟ್ಟಲುಗಳಲ್ಲಿ ಒಟ್ಟಿಲಾ-
ಗುವದೊ ಜೇನ ಮಡಿಲು

ಏಕೆ ತನಿರಸವ ಹಣ್ಣು ಉಕ್ಕಿಸುವ –
ದೆಂದು ಬಲ್ಲೆನಣ್ಣ
ನಿನ್ನ ಅಂಗೈಗೆ ತಿನಿಸನಿಟ್ಟಿರಲು
ನನ್ನ ಮುದ್ದು ಚಿಣ್ಣ

ಮುಗುಳುನಗೆಯ ಮೂಡಿಸಲು ನಿನ್ನ
ಮುಖದಲ್ಲಿ ಮುತ್ತನಿಡಲು
ಸೊಗಸನುಕ್ಕಿಸುತ ಅರುಣಕಿರಣಗಳು
ಬಹವು ಇರುಳಿನೊಡಲು

ಬಗೆದು ಬಲ್ಲೆನಾನಿನ್ನ ಮುಖದಲ್ಲಿ
ನಲಿದು ಮುತ್ತನಿಡಲು
ಮಧು ಮಂದಪವನ ತರುತ್ತಿರುವ ಸುಖವ
ಉಣ್ಣುವದು ನನ್ನ ಒಡಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈಥಿಲಿ
Next post ರಾವಣಾಂತರಂಗ – ೧೫

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…