Home / ಕವನ / ಕವಿತೆ / ಮಗುವಿನೊಡನೆ

ಮಗುವಿನೊಡನೆ

ನೂರುಬಣ್ಣಗಳ ಉಟ್ಟು ನಲಿಯುವವು
ಮೋಡ ಹೊಳೆಯುಹಳ್ಳ
ನಿನಗೆ ತಂದಿರಲು ಬಣ್ಣದಾಟಿಗೆಯ
ಅಲ್ಲವೇನು ಕಳ್ಳ

ಕಣ್ಣನೆಳೆವ ಬಣ್ಣಗಳು ಹೂವ ಮೆರು-
ಗನ್ನು ಹೆಚ್ಚಿಸುವವು
ಏಕೆ ಎಂಬುದನು ಬಲ್ಲೆ ಬಾಳಣ್ಣ
ನಿನ್ನ ಮೆಚ್ಚಿಸುವವು

ನಿನ್ನ ಕುಣಿಸಲೆಂದಾನು ಹಾಡುತಿರೆ
ಎಲೆಗಳಲ್ಲಿ ಗಾನ
ತೇಲಿಬರುವದೋ ಗಾಳಿಯಲ್ಲಿ ಆ
ಮಧುರವಾದ ತಾನ

ನೆಲದ ಎದೆಯು ತಾನಕ್ಕು ನಲಿಯುವದು
ಅಲೆಯ ಗೀತ ಕೇಳಿ
ನನ್ನದನಿಗೆ ಜೊತೆಯಾಗಿ ನಡೆಯಲಿರೆ
ನಿನ್ನ ನೃತ್ಯ ಕೇಳಿ

ನಿನ್ನ ಚಾಚಿರುವ ಹರಹು ಅಂಗೈಗೆ
ಸವಿಯ ತಿನಸನಿಡಲು
ಹೂವು ಬಟ್ಟಲುಗಳಲ್ಲಿ ಒಟ್ಟಿಲಾ-
ಗುವದೊ ಜೇನ ಮಡಿಲು

ಏಕೆ ತನಿರಸವ ಹಣ್ಣು ಉಕ್ಕಿಸುವ –
ದೆಂದು ಬಲ್ಲೆನಣ್ಣ
ನಿನ್ನ ಅಂಗೈಗೆ ತಿನಿಸನಿಟ್ಟಿರಲು
ನನ್ನ ಮುದ್ದು ಚಿಣ್ಣ

ಮುಗುಳುನಗೆಯ ಮೂಡಿಸಲು ನಿನ್ನ
ಮುಖದಲ್ಲಿ ಮುತ್ತನಿಡಲು
ಸೊಗಸನುಕ್ಕಿಸುತ ಅರುಣಕಿರಣಗಳು
ಬಹವು ಇರುಳಿನೊಡಲು

ಬಗೆದು ಬಲ್ಲೆನಾನಿನ್ನ ಮುಖದಲ್ಲಿ
ನಲಿದು ಮುತ್ತನಿಡಲು
ಮಧು ಮಂದಪವನ ತರುತ್ತಿರುವ ಸುಖವ
ಉಣ್ಣುವದು ನನ್ನ ಒಡಲು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...