ಕರುಳ ಕೊರೆ

ಕಳವಳದ ಮೂರ್ತಿ ತಾ ಕಂಗೆಟ್ಟು ನಿಂತಿಹುದು
ತಳಮಳಕೆ ತೀರವೆಲ್ಲಿರುವದವನ
ಹುಳುವು ಹುಪ್ಪಡಿಗಿಂತ ಕೀಳಾದಬಾಳುವೆಯ
ಅಳುತಬಾಳುತ್ತಿಹನು ಸಾವಬಯಸಿ

ಗೇಣು ಹೊಟ್ಟೆಯ ತುಂಬೆ ಬೊಟ್ಟು ಬಟ್ಟೆಯ ಹೂರೆಯೆ
ಪ್ರಾಣವನೆ ಒಪ್ಪಿಸಿಹ ಸಿರಿವಂತಗೆ
ಗಾಣದೊಳು ಸಿಕ್ಕಿರುವ ಕಬ್ಬಿನೊಲು ಜಬ್ಬಾಗಿ
ತ್ರಾಣವೆಲ್ಲವ ಕಳೆದುಕೊಂಡಿರುವನು

ರೋಮರೋಮಗಳಲ್ಲಿ ತೂರಿ ಬರುತಿದೆ ನೋವು
ಭೂಮಂಡಲದಿ ಅವಗೆ ತಾಣವಿಲ್ಲ
ಸಾಮಗಾನದಿ ಶಾಂತಿದೇವತೆಯ ಕರೆಯುವರು
ಪ್ರೇಮವಿರಹಿತ ಪೃಥ್ವಿಗೆಲ್ಲಿ ಶಾಂತಿ ?

ಸತ್ತಿಹರು ಅಜ್ಜಾನು ಅಬ್ಜಜನ ನರಳುತ್ತ
ಬಿತ್ತಿಹರು ಜನಮನದಿ ಕ್ರಾಂತಿಬೀಜ
ಹೊತ್ತಲಿದೆ ಆರದದು ಎಂದಿಗೂ ಎಚ್ಚರವು
ನೆತ್ತಿಯಲಿ ಕಣ್ಣುಳ್ಳ ಧನದೊಡೆಯನೇ

ಮಾನವನೆ ನಿನೊಬ್ಬ ? ಮಾನವರ ಮರುಕವನು
ನೀನರಿಯದಿಹೆಯಲ್ಲ ಕಲ್ಲೆದೆಯವ

ಜನ್ನದಲಿ ಆಹುತಿಯ ಹಾಕುತಿರುವರು ಅವರು
ಧನ್ಯರಾಗುವರವರು ಸಿದ್ದಿಯಲ್ಲಿ
*****
(ಮೈಕೆಲ್ ಆಂಜಲೋನ Dying slave ಎಂಬ ಚಿತ್ರ ನೋಡಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೪
Next post ರಾವಣಾಂತರಂಗ – ೧೨

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys