Home / ಬಾಲ ಚಿಲುಮೆ / ಕವಿತೆ / ಇವರಾರೆಂದು ಹೇಳಮ್ಮ

ಇವರಾರೆಂದು ಹೇಳಮ್ಮ

ಮಗು : ಚಾಳೀಸು ಧರಿಸಿ ಕೈಯಲಿ ಕೋಲನ್ನು
ಹಿಡಿದಿಹ ಯೋಗಿ ಯಾರಮ್ಮ?
ತಾಯಿ : ಅವರು ನಮ್ಮಯ ಗಾಂಧಿ ತಾತ
ನಮ್ಮ ದೇಶದ ಪಿತಾಮಹ
ಮಗು : ಗಾಂಧಿ ಟೋಪಿ ಖಾದಿ ಜುಬ್ಬ
ವಾಜ್‌ಕೋಟಿನಲಿ ಇದೆ ಗುಲಾಬಿ?
ತಾಯಿ : ಅಯ್ಯೋ ಮರಿ ನಿನಗೆ ಗೊತ್ತಿಲ್ವೆ?
ಚಾಚಾ ನೆಹರು ಪ್ರಧಾನಿಯಲ್ವೆ?
ಮಗು : ಬೋಳು ತಲೆ ಅಜಾನುಬಾಹು
ಘನ ಗಂಭೀರ ಅಂತೆ ಸುಬಾಹು?
ತಾಯಿ : ವಲ್ಲಭಭಾಯಿ ಪಟೇಲರವರು
ಉಕ್ಕಿನ ಮನುಷ್ಯ ಎಂದು ಕರೆವರು
ಮಗು : ಕನ್ನಡಕಧಾರಿ ಸಮವಸ್ತ್ರ ಧರಿಸಿಹ
ಸೆಲ್ಯೂಟ್ ಮಾಡುವ ಶಿಸ್ತಿನ ಶಿಪಾಯಿ?
ತಾಯಿ : ನೇತಾಜಿ ಸುಭಾಸ ಚಂದ್ರರು ಅವರು
ದೇಶಕೆ ಜೀವ ಮುಡಿಪಾಗಿಟ್ಟರು
ಮಗು : ಪುಟ್ಟ ದೇಹದ ಖಾದಿ ಬಟ್ಟೆಯನ್ನು
ಧರಿಸಿಹ ಯೋಗಿ ಗೊತ್ತೇನಮ್ಮ?
ತಾಯಿ : ಜೈ ಜವಾನ್ ಜೈ ಕಿಸಾನ್‌ದ ಮಹನೀಯರು
ನಮ್ಮ ಬಡ ಪ್ರಧಾನಿ ಲಾಲ್ ಬಹಾದ್ದೂರರು
ಮಗು : ಇಂಗ್ಲೀಷ್ ಹ್ಯಾಟು ಧರಿಸಿದ ಯುವಕ
ಕುಡಿ ಮೀಸೆ ಹುರಿ ಮಾಡುತಿರುವರಾರಮ್ಮ?
ತಾಯಿ : ಬ್ರಿಟಿಷರ ಪಾರ್ಲಿಮೆಂಟಿನಲಿ ಬಾಂಬೆಸೆದ
ನೇಣಿಗೆ ಬಲಿಯಾದ ಭಗತ್‌ಸಿಂಗ್‌ರು
ಮಗು : ಕಟ್ಟುಮಸ್ತಾದ ಬರಿ ಮೈಯಲ್ಲಿರುವ
ಹುರಿ ಮೀಸೆ ಸರದಾರ ಯಾರಮ್ಮ?
ತಾಯಿ : ಕ್ರಾಂತಿಕಾರಿಗಳ ಸಹಚರನಾಗಿದ್ದ
ಬ್ರಿಟಿಷರಿಗೆ ಸಿಂಹಸ್ವಪ್ನನಾಗಿದ್ದ ರಾಜಗುರು

ದೇಶದ ಸ್ವಾತಂತ್ರ್ಯಕೆ ಅವರೆಲ್ಲರೂ
ದೇಹ ಬಲಿದಾನಗೈದಿಹ ವೀರರು
ಅವರ ಆದರ್ಶ ಬೆಳೆಸಿಕೋ ಮಗು
ಭಾವಿ ಭಾರತವನು ನೀ ಬೆಳಗು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...