ಇವರಾರೆಂದು ಹೇಳಮ್ಮ

ಮಗು : ಚಾಳೀಸು ಧರಿಸಿ ಕೈಯಲಿ ಕೋಲನ್ನು
ಹಿಡಿದಿಹ ಯೋಗಿ ಯಾರಮ್ಮ?
ತಾಯಿ : ಅವರು ನಮ್ಮಯ ಗಾಂಧಿ ತಾತ
ನಮ್ಮ ದೇಶದ ಪಿತಾಮಹ
ಮಗು : ಗಾಂಧಿ ಟೋಪಿ ಖಾದಿ ಜುಬ್ಬ
ವಾಜ್‌ಕೋಟಿನಲಿ ಇದೆ ಗುಲಾಬಿ?
ತಾಯಿ : ಅಯ್ಯೋ ಮರಿ ನಿನಗೆ ಗೊತ್ತಿಲ್ವೆ?
ಚಾಚಾ ನೆಹರು ಪ್ರಧಾನಿಯಲ್ವೆ?
ಮಗು : ಬೋಳು ತಲೆ ಅಜಾನುಬಾಹು
ಘನ ಗಂಭೀರ ಅಂತೆ ಸುಬಾಹು?
ತಾಯಿ : ವಲ್ಲಭಭಾಯಿ ಪಟೇಲರವರು
ಉಕ್ಕಿನ ಮನುಷ್ಯ ಎಂದು ಕರೆವರು
ಮಗು : ಕನ್ನಡಕಧಾರಿ ಸಮವಸ್ತ್ರ ಧರಿಸಿಹ
ಸೆಲ್ಯೂಟ್ ಮಾಡುವ ಶಿಸ್ತಿನ ಶಿಪಾಯಿ?
ತಾಯಿ : ನೇತಾಜಿ ಸುಭಾಸ ಚಂದ್ರರು ಅವರು
ದೇಶಕೆ ಜೀವ ಮುಡಿಪಾಗಿಟ್ಟರು
ಮಗು : ಪುಟ್ಟ ದೇಹದ ಖಾದಿ ಬಟ್ಟೆಯನ್ನು
ಧರಿಸಿಹ ಯೋಗಿ ಗೊತ್ತೇನಮ್ಮ?
ತಾಯಿ : ಜೈ ಜವಾನ್ ಜೈ ಕಿಸಾನ್‌ದ ಮಹನೀಯರು
ನಮ್ಮ ಬಡ ಪ್ರಧಾನಿ ಲಾಲ್ ಬಹಾದ್ದೂರರು
ಮಗು : ಇಂಗ್ಲೀಷ್ ಹ್ಯಾಟು ಧರಿಸಿದ ಯುವಕ
ಕುಡಿ ಮೀಸೆ ಹುರಿ ಮಾಡುತಿರುವರಾರಮ್ಮ?
ತಾಯಿ : ಬ್ರಿಟಿಷರ ಪಾರ್ಲಿಮೆಂಟಿನಲಿ ಬಾಂಬೆಸೆದ
ನೇಣಿಗೆ ಬಲಿಯಾದ ಭಗತ್‌ಸಿಂಗ್‌ರು
ಮಗು : ಕಟ್ಟುಮಸ್ತಾದ ಬರಿ ಮೈಯಲ್ಲಿರುವ
ಹುರಿ ಮೀಸೆ ಸರದಾರ ಯಾರಮ್ಮ?
ತಾಯಿ : ಕ್ರಾಂತಿಕಾರಿಗಳ ಸಹಚರನಾಗಿದ್ದ
ಬ್ರಿಟಿಷರಿಗೆ ಸಿಂಹಸ್ವಪ್ನನಾಗಿದ್ದ ರಾಜಗುರು

ದೇಶದ ಸ್ವಾತಂತ್ರ್ಯಕೆ ಅವರೆಲ್ಲರೂ
ದೇಹ ಬಲಿದಾನಗೈದಿಹ ವೀರರು
ಅವರ ಆದರ್ಶ ಬೆಳೆಸಿಕೋ ಮಗು
ಭಾವಿ ಭಾರತವನು ನೀ ಬೆಳಗು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರು ಗತಿಯೆನಗೆ
Next post ಭ್ರಮೆ ಮತ್ತು ನೈಜತೆಗಳ ಸಾರಾಂಶ-Pirandello ನ Six Characters in Search of an Author

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys