ಇವರಾರೆಂದು ಹೇಳಮ್ಮ

ಮಗು : ಚಾಳೀಸು ಧರಿಸಿ ಕೈಯಲಿ ಕೋಲನ್ನು
ಹಿಡಿದಿಹ ಯೋಗಿ ಯಾರಮ್ಮ?
ತಾಯಿ : ಅವರು ನಮ್ಮಯ ಗಾಂಧಿ ತಾತ
ನಮ್ಮ ದೇಶದ ಪಿತಾಮಹ
ಮಗು : ಗಾಂಧಿ ಟೋಪಿ ಖಾದಿ ಜುಬ್ಬ
ವಾಜ್‌ಕೋಟಿನಲಿ ಇದೆ ಗುಲಾಬಿ?
ತಾಯಿ : ಅಯ್ಯೋ ಮರಿ ನಿನಗೆ ಗೊತ್ತಿಲ್ವೆ?
ಚಾಚಾ ನೆಹರು ಪ್ರಧಾನಿಯಲ್ವೆ?
ಮಗು : ಬೋಳು ತಲೆ ಅಜಾನುಬಾಹು
ಘನ ಗಂಭೀರ ಅಂತೆ ಸುಬಾಹು?
ತಾಯಿ : ವಲ್ಲಭಭಾಯಿ ಪಟೇಲರವರು
ಉಕ್ಕಿನ ಮನುಷ್ಯ ಎಂದು ಕರೆವರು
ಮಗು : ಕನ್ನಡಕಧಾರಿ ಸಮವಸ್ತ್ರ ಧರಿಸಿಹ
ಸೆಲ್ಯೂಟ್ ಮಾಡುವ ಶಿಸ್ತಿನ ಶಿಪಾಯಿ?
ತಾಯಿ : ನೇತಾಜಿ ಸುಭಾಸ ಚಂದ್ರರು ಅವರು
ದೇಶಕೆ ಜೀವ ಮುಡಿಪಾಗಿಟ್ಟರು
ಮಗು : ಪುಟ್ಟ ದೇಹದ ಖಾದಿ ಬಟ್ಟೆಯನ್ನು
ಧರಿಸಿಹ ಯೋಗಿ ಗೊತ್ತೇನಮ್ಮ?
ತಾಯಿ : ಜೈ ಜವಾನ್ ಜೈ ಕಿಸಾನ್‌ದ ಮಹನೀಯರು
ನಮ್ಮ ಬಡ ಪ್ರಧಾನಿ ಲಾಲ್ ಬಹಾದ್ದೂರರು
ಮಗು : ಇಂಗ್ಲೀಷ್ ಹ್ಯಾಟು ಧರಿಸಿದ ಯುವಕ
ಕುಡಿ ಮೀಸೆ ಹುರಿ ಮಾಡುತಿರುವರಾರಮ್ಮ?
ತಾಯಿ : ಬ್ರಿಟಿಷರ ಪಾರ್ಲಿಮೆಂಟಿನಲಿ ಬಾಂಬೆಸೆದ
ನೇಣಿಗೆ ಬಲಿಯಾದ ಭಗತ್‌ಸಿಂಗ್‌ರು
ಮಗು : ಕಟ್ಟುಮಸ್ತಾದ ಬರಿ ಮೈಯಲ್ಲಿರುವ
ಹುರಿ ಮೀಸೆ ಸರದಾರ ಯಾರಮ್ಮ?
ತಾಯಿ : ಕ್ರಾಂತಿಕಾರಿಗಳ ಸಹಚರನಾಗಿದ್ದ
ಬ್ರಿಟಿಷರಿಗೆ ಸಿಂಹಸ್ವಪ್ನನಾಗಿದ್ದ ರಾಜಗುರು

ದೇಶದ ಸ್ವಾತಂತ್ರ್ಯಕೆ ಅವರೆಲ್ಲರೂ
ದೇಹ ಬಲಿದಾನಗೈದಿಹ ವೀರರು
ಅವರ ಆದರ್ಶ ಬೆಳೆಸಿಕೋ ಮಗು
ಭಾವಿ ಭಾರತವನು ನೀ ಬೆಳಗು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರು ಗತಿಯೆನಗೆ
Next post ಭ್ರಮೆ ಮತ್ತು ನೈಜತೆಗಳ ಸಾರಾಂಶ-Pirandello ನ Six Characters in Search of an Author

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…