ಬಣ್ಣದ ಬುಗುರಿ

ಬುಗುರಿಯ ಆಡಿಸೊ ಕಾಲ
ಬರುವದು ತಪ್ಪದೆ ಆ ಜಾಲ
ರಂಗನು ಅಪ್ಪಗೆ ದುಂಬಾಲು
ಬುಗುರಿ ನನಗೆ ಬೇಕೆನಲು

ಅಪ್ಪನು ಹೋದನು ಪೇಟೆಗೆ
ಬಣ್ಣದ ಬುಗುರಿಯ ರಂಗನಿಗೆ
ತಂದುಕೊಟ್ಟನು ಚಾಟಿ ಸಹಿತ
ದಿನದೂಡಿದ ಕನಸು ಕಾಣುತ

ಚಾಟಿಯ ಭರ ಭರ ಸುತ್ತುತ್ತ
ರಂಗನು ನಡೆದ ಮಿತ್ರರತ್ತ
ತನ್ನಯ ಬುಗುರಿ ತೋರಿಸಿದ
ತನ್ನದೇ ಮಿಗಿಲೆಂದು ವಾದಿಸಿದ

ಗಿರಿ ಗಿರಿ ತಿರುಗುವ ಬಣ್ಣದ ಬುಗುರಿ
ತಿರುಗಿದಂತೆ ಕುಂಬಾರರ ತಿಗರಿ
ಗುಂಯಿಗುಡುತಲೆ ನೆಲವನು ಕೊರೆದು
ಆಡುತಲಿತ್ತು ಭೋರ್ಗರೆದು

ತಿಮ್ಮನೂ ತನ್ನಯ ಬುಗುರಿ ತಂದು
ಬಾರೋ ‘ಗಿಚ್ಚೆ’ ಆಡಲು ಬಂದ
ಆಟದಿ ತಿಮ್ಮನ ಬುಗುರಿ ಸೀಳಿತ್ತು
ರಂಗನ ಬುಗುರಿಯೂ ಹೋಳಾಯ್ತು

ಮನೆಗೆ ಮರಳಿದ ರಂಗನು ಅಳುತ
ಬುಗುರಿಯನು ತಂದೆಗೆ ತೋರಿಸುತ
ರಂಗನ ಅಪ್ಪನು ರಮಿಸಿದನು
ಮತ್ತೊಂದ ಕೊಡಿಸಲು ಒಪ್ಪಿದನು

ಮರುದಿನ ರಂಗನ ಅಪ್ಪನು
ತಂದನು ಮರದ ತುಂಡನ್ನು
ಕೊಡಲಿಯಿಂದಲೆ ಕೆತ್ತಿದನು
ಹೊಡೆದನು ಚೂಪಿದ್ದ ಮೊಳೆಯನು

ಗಟ್ಟಿ ಮರದ ಬುಗುರಿ ಹಿಡಿದು
ತಿಮ್ಮನ ರಂಗ ಕೂಗಿ ಕರೆದಿದ್ದ
ಆಟದಿ ತಿಮ್ಮನ ಪೇಟೆ ಬುಗುರಿ
ಹೋಳಾಗಿ ಬಿತ್ತು ಮೇಲೆಗರಿ

ಮನೆಗೆ ಬಂದಾ ರಂಗನು
ಬೀಗುತ ವಿಷಯ ಹೇಳಿದನು
ಗೆಲುವಿನ ಸಂತೋಷದಿ ಅವನು
ಮಲಗಿ ಗೊರಕೆಯ ಹೊಡೆದನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ಮೀನಾಗಿದ್ದಿದ್ರೆ
Next post ಯೂರಿಪಿಡಿಸ್‌ನ Medea – ಪ್ರತಿಕಾರದ ದಳ್ಳುರಿ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…