Home / ಬಾಲ ಚಿಲುಮೆ / ಕವಿತೆ / ಮರದ ಮಹತ್ವ

ಮರದ ಮಹತ್ವ

ನಮ್ಮ ಶಾಲೆ ಪಕ್ಕ
ರಸ್ತೆ ಇರುವುದು ಅಕ್ಕ
ಆ ರಸ್ತೆಗೆಲ್ಲ ಹೊಂದಿ
ಬಸ್‌ಸ್ಟ್ಯಾಂಡ್ ಭಾಳ ಮಂದಿ

ಬಸ್ಸಿಗಾಗಿ ಅಲ್ಲಿ
ಸುಡುವಾ ಬಿಸಿಲಲ್ಲಿ
ಮಳೆಯ ಕಾಲದಲ್ಲಿ
ಬೇಡ ಫಜೀತಿ ಇಲ್ಲಿ

ಮೇಷ್ಟ್ರು ಒಂದು ದಿನ
ಕೊಟ್ಟರು ನೆಡಲು ಸಸಿಯನ್ನ
ರಂಗ ರಾಮು ನೆಟ್ಟರು
ದಿನವೂ ನೀರು ಬಿಟ್ಟರು

ಸಸಿಯು ವೇಗದಿ ಬೆಳೆದಿತ್ತು
ಹೆಮ್ಮರವಾಗಿ ನಿಂತಿತ್ತು
ರೆಂಬೆಯ ಹೊರಗೆ ಚಾಚಿತ್ತು
ಜನರಿಗೆ ನೆರಳ ನೀಡಿತ್ತು.

ಮಕ್ಕಳ ಕೆಲಸ ಹೊಗಳಿದರು
ಗುರುಗಳು ಪುಲಕಿತರಾದರು
ಸ್ವಾತಂತ್ರ್ಯ ದಿನಾಚರಣೆಯ ದಿನ
ಈ ಮಕ್ಕಳಿಗಾಯ್ತು ಸನ್ಮಾನ

ದೊಡ್ಡವರಾದ ಮೇಲಿವರು
ಶಾಲಾ ಮಾಸ್ತರರಾದರು
ಕೆಲಸ ಮಾಡಿದ ಕಡೆಗೆಲ್ಲ
ಅರಳಿತು ಹಸಿರು ಬನವೆಲ್ಲ

ಮೆಚ್ಚಿದ ಅವರ ಕೆಲಸವನು
ಸರ್ಕಾರ ಇತ್ತಿತು ಬಹುಮಾನ
ಮಕ್ಕಳಗವರೀ ಬೋಧನೆ
ಇದೂ ದೇಶ ಸೇವೇನೇ

ಬಯಲು ಸ್ಥಳದಲಿ ಕಾಡು
ಬೆಳಸಿದರೆಷ್ಟು ನೋಡು
ವಾಯು ಮಾಲಿನ್ಯ ಇಲ್ಲ
ಸಮೃದ್ಧಿ ಮಳೆ ಬೆಳೆಯೆಲ್ಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...