Home / ಬಾಲ ಚಿಲುಮೆ / ಕವಿತೆ / ಮರದ ಮಹತ್ವ

ಮರದ ಮಹತ್ವ

ನಮ್ಮ ಶಾಲೆ ಪಕ್ಕ
ರಸ್ತೆ ಇರುವುದು ಅಕ್ಕ
ಆ ರಸ್ತೆಗೆಲ್ಲ ಹೊಂದಿ
ಬಸ್‌ಸ್ಟ್ಯಾಂಡ್ ಭಾಳ ಮಂದಿ

ಬಸ್ಸಿಗಾಗಿ ಅಲ್ಲಿ
ಸುಡುವಾ ಬಿಸಿಲಲ್ಲಿ
ಮಳೆಯ ಕಾಲದಲ್ಲಿ
ಬೇಡ ಫಜೀತಿ ಇಲ್ಲಿ

ಮೇಷ್ಟ್ರು ಒಂದು ದಿನ
ಕೊಟ್ಟರು ನೆಡಲು ಸಸಿಯನ್ನ
ರಂಗ ರಾಮು ನೆಟ್ಟರು
ದಿನವೂ ನೀರು ಬಿಟ್ಟರು

ಸಸಿಯು ವೇಗದಿ ಬೆಳೆದಿತ್ತು
ಹೆಮ್ಮರವಾಗಿ ನಿಂತಿತ್ತು
ರೆಂಬೆಯ ಹೊರಗೆ ಚಾಚಿತ್ತು
ಜನರಿಗೆ ನೆರಳ ನೀಡಿತ್ತು.

ಮಕ್ಕಳ ಕೆಲಸ ಹೊಗಳಿದರು
ಗುರುಗಳು ಪುಲಕಿತರಾದರು
ಸ್ವಾತಂತ್ರ್ಯ ದಿನಾಚರಣೆಯ ದಿನ
ಈ ಮಕ್ಕಳಿಗಾಯ್ತು ಸನ್ಮಾನ

ದೊಡ್ಡವರಾದ ಮೇಲಿವರು
ಶಾಲಾ ಮಾಸ್ತರರಾದರು
ಕೆಲಸ ಮಾಡಿದ ಕಡೆಗೆಲ್ಲ
ಅರಳಿತು ಹಸಿರು ಬನವೆಲ್ಲ

ಮೆಚ್ಚಿದ ಅವರ ಕೆಲಸವನು
ಸರ್ಕಾರ ಇತ್ತಿತು ಬಹುಮಾನ
ಮಕ್ಕಳಗವರೀ ಬೋಧನೆ
ಇದೂ ದೇಶ ಸೇವೇನೇ

ಬಯಲು ಸ್ಥಳದಲಿ ಕಾಡು
ಬೆಳಸಿದರೆಷ್ಟು ನೋಡು
ವಾಯು ಮಾಲಿನ್ಯ ಇಲ್ಲ
ಸಮೃದ್ಧಿ ಮಳೆ ಬೆಳೆಯೆಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...