ಮರದ ಮಹತ್ವ

ನಮ್ಮ ಶಾಲೆ ಪಕ್ಕ
ರಸ್ತೆ ಇರುವುದು ಅಕ್ಕ
ಆ ರಸ್ತೆಗೆಲ್ಲ ಹೊಂದಿ
ಬಸ್‌ಸ್ಟ್ಯಾಂಡ್ ಭಾಳ ಮಂದಿ

ಬಸ್ಸಿಗಾಗಿ ಅಲ್ಲಿ
ಸುಡುವಾ ಬಿಸಿಲಲ್ಲಿ
ಮಳೆಯ ಕಾಲದಲ್ಲಿ
ಬೇಡ ಫಜೀತಿ ಇಲ್ಲಿ

ಮೇಷ್ಟ್ರು ಒಂದು ದಿನ
ಕೊಟ್ಟರು ನೆಡಲು ಸಸಿಯನ್ನ
ರಂಗ ರಾಮು ನೆಟ್ಟರು
ದಿನವೂ ನೀರು ಬಿಟ್ಟರು

ಸಸಿಯು ವೇಗದಿ ಬೆಳೆದಿತ್ತು
ಹೆಮ್ಮರವಾಗಿ ನಿಂತಿತ್ತು
ರೆಂಬೆಯ ಹೊರಗೆ ಚಾಚಿತ್ತು
ಜನರಿಗೆ ನೆರಳ ನೀಡಿತ್ತು.

ಮಕ್ಕಳ ಕೆಲಸ ಹೊಗಳಿದರು
ಗುರುಗಳು ಪುಲಕಿತರಾದರು
ಸ್ವಾತಂತ್ರ್ಯ ದಿನಾಚರಣೆಯ ದಿನ
ಈ ಮಕ್ಕಳಿಗಾಯ್ತು ಸನ್ಮಾನ

ದೊಡ್ಡವರಾದ ಮೇಲಿವರು
ಶಾಲಾ ಮಾಸ್ತರರಾದರು
ಕೆಲಸ ಮಾಡಿದ ಕಡೆಗೆಲ್ಲ
ಅರಳಿತು ಹಸಿರು ಬನವೆಲ್ಲ

ಮೆಚ್ಚಿದ ಅವರ ಕೆಲಸವನು
ಸರ್ಕಾರ ಇತ್ತಿತು ಬಹುಮಾನ
ಮಕ್ಕಳಗವರೀ ಬೋಧನೆ
ಇದೂ ದೇಶ ಸೇವೇನೇ

ಬಯಲು ಸ್ಥಳದಲಿ ಕಾಡು
ಬೆಳಸಿದರೆಷ್ಟು ನೋಡು
ವಾಯು ಮಾಲಿನ್ಯ ಇಲ್ಲ
ಸಮೃದ್ಧಿ ಮಳೆ ಬೆಳೆಯೆಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು
Next post ನಗುನಗುತ್ತಾ ದಿನವನ್ನು ಸ್ವಾಗತಿಸಿ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys