ದ್ವೇಷವಿದ್ದಲ್ಲಿ ಈಗಲೆ ನನ್ನ ಶಿಕ್ಷಿಸು

ದ್ವೇಷವಿದ್ದಲ್ಲಿ ಈಗಲೆ ನನ್ನ ಶಿಕ್ಷಿಸು
ಲೋಕ ಕೆಳಗೊತ್ತುತಿರುವಾಗಲೇ ನನ್ನನ್ನು
ನೀನೂ ಕೈಗೂಡಿಸಿ ಕೆಳತನಕ ಬಾಗಿಸು ;
ಹಳೆಗಾಯಕೆಂದೂ ಹಾಕದಿರು ಹೊಸ ಬರೆಯನ್ನು.
ಒಂದು ಕೊರಗಿಂದ ಎನ್ನೆದೆಯು ಹೊರಬಂದಿರಲು
ಹಿಂದಿಂದ ಬಂದು ಬೇರೊಂದಕ್ಕೆ ಗುರಿಮಾಡಿ,
ಬಿರುಗಾಳಿಯಿರುಳ ಬೆನ್ನಟ್ಟಿ ಜಡಿಮಳೆ ಹಗಲು
ಬಂದಂತೆ ಮಾಡದಿರು ಹೊಸ ದುಃಖದೊಳು ದೂಡಿ.
ಬಿಡುವುದಿದ್ದರೆ ನನ್ನ ಎಂದಿನವೊ, ಯಾತಕೋ
ಇತರ ಕಿರುಬಾಧೆಗಳು ಕಚ್ಚುತಿರುವಾಗಲೇ,
ಈಗಲೇ ಬಿಟ್ಟುಬಿಡು. ವಿಧಿ ತರುವ ಅತಿ ಘೋರ
ವ್ಯಥೆಯನ್ನು ಉಂಡುಬಿಡುವುದು ಲೇಸು ಮೊದಲಲ್ಲೆ
ಈಗ ದೊಡ್ಡದು ಎನಿಸುತಿರುವ ವ್ಯಥೆಯೆಲ್ಲವೂ
ನಿನ್ನನ್ನು ಕಳಕೊಳ್ಳುವುದರೆದುರು ಚಿಕ್ಕವು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 90
Then hate me thou wilt, if ever, now

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾವಣಾಂತರಂಗ – ೧೬
Next post ಭ್ರಮನಿರಸನ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…