Home / ಕವನ / ಕವಿತೆ / ಪ್ರಾಣದೇವತೆಗಳ ಪರಮಸ್ವರ್ಗ

ಪ್ರಾಣದೇವತೆಗಳ ಪರಮಸ್ವರ್ಗ

ಮಧುಮಧುರವಾದ ಹಿರಿಹಗಲು ಒಂದು ಬೆಳಗಿತ್ತು ಅವನ ಸುತ್ತು.
ಹರ್ಷಾವತರಣ ಆನಂತ್ಯದಿಂದ ಪ್ರಭೆ ಬೀರಿದಂತೆ ಇತ್ತು.
ಬಂಗಾರನಗೆಯ ಹೊಂಗಾವಲಲ್ಲಿ ಮೆರೆದಿಹವು ಸುಖದ ಬೀಡು,
ಬಿಡುಗಡೆಯ ಪಡೆದ ಒಳಗಡೆಯ ಎದೆಯ ಹದಹದುಳವುಳ್ಳ ನಾಡು.

ಆದೇವದೇವನಾ ಸೋಮರಸವು ಮೈಗಿಳಿದ ಮತ್ತಿನಲ್ಲಿ
ಎಂದೆಂದು ತನ್ನ ದಿವ್ಯತೆಯಲುಳಿದು ಮುಳುಗಿಹುದು ಬೆಳಕಿನಲ್ಲಿ.
ಎಲ್ಲ ದೇವರಿಗೆ ಮುದ್ದುಬಹದು, ಬಲು ಸಲುಗೆಯಲ್ಲಿ ಬಳೆದು.
ಹಿಗ್ಗಿನೊಂದೆ ಕಾಯಕದೊಳಿಹುದು ಅದು ದೇವನಾಜ್ಞೆ ತಳೆದು.

ತನ್ನ ತಾನೆ ಆಳುವದು ತನ್ನ ಸ್ವಾನಂದದಲ್ಲಿ ಬಾಳಿ
ಅದರ ಬಲದ ಸ್ವಾರಾಜ್ಯಗಳಲಿ ಅರಸೊತ್ತು ತಾನೆ ತಾಳಿ.
ಎಲ್ಲ ರೂಪಗಳು ಯಾವ ಮೋದವನು ನೆಮ್ಮಿ ನೆಚ್ಚಿ ಇಹವು
ಕ್ಷಣ-ಕ್ಷಣಕು ಅಳಿವಂಥ ಕಾಲಕೂ ಬೆಚ್ಚಿಬೆದರದಿಹವು.

ಮುತ್ತಲರಿಯದೆಂದೆಂದು ಅದನ್ನು ಪ್ರತಿಕೂಲ ಸ್ಥಿತಿಯು ಕೂಡ.
ಇಂಥ ಸಹಜ ವಿಶ್ರಾಂತಿಯಲ್ಲಿ ಅದು ವಿಲಸಿಸುವದು ನೋಡ.
ಆ ಮರಣಕೌತಣವ ಕೊಡುವ ಮೈಯ ಕ್ಷಣಭಂಗುರತ್ವವಿಲ್ಲ.
ಅಡಿಗೊಮ್ಮೆ ಎಡವಿ ಭಯದಲ್ಲಿ ಇರುವ ಸಂಕಲ್ಪವಲ್ಲಿ ಸಲ್ಲ.

ಆ ರಾಗಭೋಗದಾವೇಗಗಳನು ಬಿಗಿಹಿಡಿವುದಲ್ಲಿ ಏಕೆ?
ಸಂತೃಪ್ತವಾದ ಸುಖದೊಂದು ತಕ್ಕೆ ಇರೆ ಬೇರೆ ಪುಲಕ ಬೇಕೆ?
ಅಬ್ಬಬ್ಬ ಏನು ಅದ್ಭುತದ ಓಟ, ಕುಡಿಬೆಂಕಿ ನೋಟ, ಕೂಗು
ತನಿಪ್ರಾಣದೂರ್ಮಿ ನಿಗಿನಿಗಿಯೆ ಹರಿವ ನೆತ್ತರಿನ ತುಂಬು ತೇಗು.

ಅದು ಇಹುದು ದೇವನಗೆಯಲ್ಲಿ ಒಗೆದ ನವರತ್ನನಗರದಲ್ಲಿ
ಒರಗಿಹುದು ಎದೆಗೆ ಬೆರಗಾಗಿ ಪ್ರೇಮ ಹರಿದಿರಲು ಆಗಿ ಬಳ್ಳಿ.
ಅದಕಾವ ಬಂಧ? ಸ್ವಚ್ಛಂದದಿಂದ ಆನಂದ ಕೀರ್ತಿಸುವದು;
ಬಿಸಿಲೊಡ್ಡು ಮೈಯ್ಸಿ, ಬೆಳುದಿಂಗಳುಣಿಸಿ, ಜ್ಯೋತಿಯನೆ ಮೂರ್ತಿಸುವದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...