Home / ಕವನ / ಕವಿತೆ / ಪ್ರಾಣದೇವತೆಗಳ ಪರಮಸ್ವರ್ಗ

ಪ್ರಾಣದೇವತೆಗಳ ಪರಮಸ್ವರ್ಗ

ಮಧುಮಧುರವಾದ ಹಿರಿಹಗಲು ಒಂದು ಬೆಳಗಿತ್ತು ಅವನ ಸುತ್ತು.
ಹರ್ಷಾವತರಣ ಆನಂತ್ಯದಿಂದ ಪ್ರಭೆ ಬೀರಿದಂತೆ ಇತ್ತು.
ಬಂಗಾರನಗೆಯ ಹೊಂಗಾವಲಲ್ಲಿ ಮೆರೆದಿಹವು ಸುಖದ ಬೀಡು,
ಬಿಡುಗಡೆಯ ಪಡೆದ ಒಳಗಡೆಯ ಎದೆಯ ಹದಹದುಳವುಳ್ಳ ನಾಡು.

ಆದೇವದೇವನಾ ಸೋಮರಸವು ಮೈಗಿಳಿದ ಮತ್ತಿನಲ್ಲಿ
ಎಂದೆಂದು ತನ್ನ ದಿವ್ಯತೆಯಲುಳಿದು ಮುಳುಗಿಹುದು ಬೆಳಕಿನಲ್ಲಿ.
ಎಲ್ಲ ದೇವರಿಗೆ ಮುದ್ದುಬಹದು, ಬಲು ಸಲುಗೆಯಲ್ಲಿ ಬಳೆದು.
ಹಿಗ್ಗಿನೊಂದೆ ಕಾಯಕದೊಳಿಹುದು ಅದು ದೇವನಾಜ್ಞೆ ತಳೆದು.

ತನ್ನ ತಾನೆ ಆಳುವದು ತನ್ನ ಸ್ವಾನಂದದಲ್ಲಿ ಬಾಳಿ
ಅದರ ಬಲದ ಸ್ವಾರಾಜ್ಯಗಳಲಿ ಅರಸೊತ್ತು ತಾನೆ ತಾಳಿ.
ಎಲ್ಲ ರೂಪಗಳು ಯಾವ ಮೋದವನು ನೆಮ್ಮಿ ನೆಚ್ಚಿ ಇಹವು
ಕ್ಷಣ-ಕ್ಷಣಕು ಅಳಿವಂಥ ಕಾಲಕೂ ಬೆಚ್ಚಿಬೆದರದಿಹವು.

ಮುತ್ತಲರಿಯದೆಂದೆಂದು ಅದನ್ನು ಪ್ರತಿಕೂಲ ಸ್ಥಿತಿಯು ಕೂಡ.
ಇಂಥ ಸಹಜ ವಿಶ್ರಾಂತಿಯಲ್ಲಿ ಅದು ವಿಲಸಿಸುವದು ನೋಡ.
ಆ ಮರಣಕೌತಣವ ಕೊಡುವ ಮೈಯ ಕ್ಷಣಭಂಗುರತ್ವವಿಲ್ಲ.
ಅಡಿಗೊಮ್ಮೆ ಎಡವಿ ಭಯದಲ್ಲಿ ಇರುವ ಸಂಕಲ್ಪವಲ್ಲಿ ಸಲ್ಲ.

ಆ ರಾಗಭೋಗದಾವೇಗಗಳನು ಬಿಗಿಹಿಡಿವುದಲ್ಲಿ ಏಕೆ?
ಸಂತೃಪ್ತವಾದ ಸುಖದೊಂದು ತಕ್ಕೆ ಇರೆ ಬೇರೆ ಪುಲಕ ಬೇಕೆ?
ಅಬ್ಬಬ್ಬ ಏನು ಅದ್ಭುತದ ಓಟ, ಕುಡಿಬೆಂಕಿ ನೋಟ, ಕೂಗು
ತನಿಪ್ರಾಣದೂರ್ಮಿ ನಿಗಿನಿಗಿಯೆ ಹರಿವ ನೆತ್ತರಿನ ತುಂಬು ತೇಗು.

ಅದು ಇಹುದು ದೇವನಗೆಯಲ್ಲಿ ಒಗೆದ ನವರತ್ನನಗರದಲ್ಲಿ
ಒರಗಿಹುದು ಎದೆಗೆ ಬೆರಗಾಗಿ ಪ್ರೇಮ ಹರಿದಿರಲು ಆಗಿ ಬಳ್ಳಿ.
ಅದಕಾವ ಬಂಧ? ಸ್ವಚ್ಛಂದದಿಂದ ಆನಂದ ಕೀರ್ತಿಸುವದು;
ಬಿಸಿಲೊಡ್ಡು ಮೈಯ್ಸಿ, ಬೆಳುದಿಂಗಳುಣಿಸಿ, ಜ್ಯೋತಿಯನೆ ಮೂರ್ತಿಸುವದು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...