ಉರಿಗಾಳಿ

ಅಗೋ ಬಂಗಾರದ ಮೂಡಲದಿಂದ ಬೀಸಿತು ಉರಿಗಾಳಿ
ಏಳ್ಮಡಿ ಮಧ್ಯಾಹ್ನದ ಉಸಿರಿಂದ ನನಾತ್ಮಕೆ ದಾಳಿ.
ಯಕ್ಷರ ಪಕ್ಷವ ತಾಳಿ ಓಡುವೀ ಪಶು ನಾಗಾಲಾಗಿ
ಹೊತ್ತಿದೆ ಮಾನಸ, ಹೊತ್ತಿದೆ ದೇಹ, ಎದೆ ಮೂರ್ಛಿತವಾಗಿ

ಮಧ್ಯಾಹ್ನದ ಬಲಶಕ್ತಿಯ ತಂದೆ ಉರಿಯೋ ನಿರ್ಭಾಧಾ
ಎಲ್ಲಿದೆ ಬೆಳಗಿನ ತಲ್ಲೀನತೆ ಪ್ರಕೃತಿಯ ಝುಳುಝುಳುನಾದಾ
ಎಲ್ಲಿದೆ ಬೆಳುದಿಂಗಳ ತಿಳಿನೀಲಿಯ ಲೋಕಾತೀತ ಸುರೆ
ಏತಕೆ ಈ ಮೈ-ಮನದ ಪ್ರಫುಲ್ಲತೆ ಹೃದಯವೆ ನರಳುತಿರೆ ?

ಪ್ರಾಣದ ರಕ್ತ ಜ್ವಾಲೆಯು ಮತ್ತೀ ಮನಸಿನ ಬಂಗಾರ
ಸ್ವರ್ಗವು ಝಗಝಗ ಈ ಭೂ ಧಗಧಗ ಇದೆ ದೀಪ್ತಾಂಗಾರ
ಹೃದಯವ ಬಿಳಿದೋ ಆ ಗುಲಾಬಿಯೋ ಆಗಿರೆ ನಿಃಸತ್ತ್ವ
ಹೋಗೆಲೆ ಉರಿಯೇ, ಮೌನದೊಳಿರುವೆ, ಬರಲಿ ಪ್ರೇಮತತ್ರ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೊರೆ
Next post ವಾಗ್ದೇವಿ – ೫೩

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys