Home / ಕವನ / ಕವಿತೆ / ಪ್ರತೀಕ್ಷಾ-ಸಮಾಧಿ

ಪ್ರತೀಕ್ಷಾ-ಸಮಾಧಿ

ಬ್ರಹ್ಮಾಂಡಕೆ ಕಾನ್ ಕೊಡುತಿದ್ದೆ, ಒಬ್ಬೊಂಟಿಗ ಶಮ-ಶಿಖರದಲೂ
ಮುತ್ತಿತ್ತೋ ಗುಜುಗುಜು ನಾದಾ
ಝಗಝಗಿಸುವ ನಿದ್ದೆಯೊಳದ್ದಿ, ಮಾನಸವನು ಸುತ್ತಿದೆ ಎತ್ತೂ
ಮರ್ಮರಿಸುವ ನಿರ್ಭರ ಮೌನಾ.
ಚಿರಶುಭ್ರ ಜ್ವಾಲಾ ಗೂಢಾ, ಮನನಕ್ಕೆ ಪ್ರಾಪ್ತ ಪದಾರ್ಥಾ
ಜಿನುಗುಡುತಿದೆ ಅಸ್ಪುಟ ನಾದಾ
ದೃಕ್‌ಪಥಕತಿಗೋಚರಸೀಮಾ, ಪಡಿದನಿಸುತ್ತಿಹುದು ಅಲೀನಾ
ಜಡವಾದದ ಗಾಢ ವಿವಾದಾ
ಯಃಕಶ್ಚಿತ್ ಛಾಯಾವಿಹಗಾ, ಪಕ್ಷಾಹತ ಚಂಚಲವಾದಾ
ನಿಸ್ತೇಜಿತ ಪಲ್ವಲದಂತೆ,
ಕೆಳಕೆಳಗೋ ದೂರವಿದೂರಾ ಆಕ್ರಾಮಿತರಾಗ ವಿಭಂಗಾ
ಆಜೀವನ ಜಲಧಿ ಅಪಾರಾ
ಲಗುಬಗೆ ಬಗೆ ಚಕ್ರಾಕಾರಾ ಹಾರಾಟವ ನಿಲಿಸಿದೆ ಪೂರಾ
ಸ್ವನಿವೃತ್ತವೊ ಸ್ವಾಂತವಿಚಾರಾ
ನಿಸ್ತಬ್ಧಾ ನಾಡಿಸ್ಪಂದಾ, ಈ ಅಸ್ಮಿತೆ ಶಾಂತಾ ನಿಷ್ಠಾ
ಅಧ್ಭುತ ವಿಶ್ರಾ೦ತಿ ಸ್ನಾತಾ, –
ಅವಲೋಕಿಸ ಬಂದಿದೆ ಜ್ಞಾನಾ, ವಿಜ್ಞಾನದ ಮೀರಿದ ಮಾನಾ
ಆ ಮಾನಸ ಪ್ರಮೆಗೆ ಅಮೇಯಾ
ತುಂತುಂಬಿದೆ ತೂತೂಬಿನೊಳು, ಚೈತನ್ಯದ ಘನ ಅವಕಾಶಾ
ಸತ್‌ಸಾಕ್ಷಾತ್ಕಾರ ಪ್ರಕಾಶಾ,
ಕಂಪಿಸುತಿದೆ ಸಂವಿತ್ತಾಗ್ನಿ, ಪುಲಕಿಸುತಿದೆ ತಂತಾನಾಗಿ
ಸ್ವಾಧಿಷ್ಠಾನಪ್ರಭಾವಾ,
ಭೂದೇವಿಯ ನೂತನ ಪಾತ್ರಾ ಸಮಾಧಿಯೇ ಕಾಂಚೀದಾಮಾ
ಸ್ವರ್ಗಾಂಬರ ವಸನ ಸಮಾನಾ
ಶಾಶ್ವತತೆಯ ಹೆಬ್ಬಾಗಿಲೊಳು, ದಿವ್ಯಪ್ರಭೆ ಪಕ್ಷಗಳಾದ
ನಿಯತಿಯು ಶುಭನಿದ್ರಾಮಗ್ನಾ
ಕಾಲನಿರೀಕ್ಷಾಶೂನ್ಯಾ, ಚೇತಿಸುವಾ ವಿದ್ಯುಲ್ಲೇಖಾ
ವ್ಯವರ್ತಿಕ ಮಂತ್ರೋತ್ಸೇಕಾ,
ಪಾರ್ಥಿವ ಗೃಹ ಸರ್ಜನ ಸಿದ್ದಾ ಅವಕಾಶಾವಸ್ತಿತ ದೇವಾ
ಯೋಗಾಲಂಬಿ ಸ್ವಭಾವಾ
ಚಿರಂತನದ ಪಾದಾರ್ಪಣಕೆ ಆದೇಶಾಗಮನಾರ್ತಸ್ತಾ
ಪ್ರತೀಕ್ಷಾಪೇಕ್ಷ ಬುಭೂಷಾ
ಬೀಸಿತ್ತೋವೋ ಸಂಭಾವ್ಯಾ, ಆನಂದ ರಾಗಾಲಾಪಾ
ಆನಂತ್ಯದ ಸಾಗರದಿಂದಾ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...