ಪ್ರತೀಕ್ಷಾ-ಸಮಾಧಿ

ಬ್ರಹ್ಮಾಂಡಕೆ ಕಾನ್ ಕೊಡುತಿದ್ದೆ, ಒಬ್ಬೊಂಟಿಗ ಶಮ-ಶಿಖರದಲೂ
ಮುತ್ತಿತ್ತೋ ಗುಜುಗುಜು ನಾದಾ
ಝಗಝಗಿಸುವ ನಿದ್ದೆಯೊಳದ್ದಿ, ಮಾನಸವನು ಸುತ್ತಿದೆ ಎತ್ತೂ
ಮರ್ಮರಿಸುವ ನಿರ್ಭರ ಮೌನಾ.
ಚಿರಶುಭ್ರ ಜ್ವಾಲಾ ಗೂಢಾ, ಮನನಕ್ಕೆ ಪ್ರಾಪ್ತ ಪದಾರ್ಥಾ
ಜಿನುಗುಡುತಿದೆ ಅಸ್ಪುಟ ನಾದಾ
ದೃಕ್‌ಪಥಕತಿಗೋಚರಸೀಮಾ, ಪಡಿದನಿಸುತ್ತಿಹುದು ಅಲೀನಾ
ಜಡವಾದದ ಗಾಢ ವಿವಾದಾ
ಯಃಕಶ್ಚಿತ್ ಛಾಯಾವಿಹಗಾ, ಪಕ್ಷಾಹತ ಚಂಚಲವಾದಾ
ನಿಸ್ತೇಜಿತ ಪಲ್ವಲದಂತೆ,
ಕೆಳಕೆಳಗೋ ದೂರವಿದೂರಾ ಆಕ್ರಾಮಿತರಾಗ ವಿಭಂಗಾ
ಆಜೀವನ ಜಲಧಿ ಅಪಾರಾ
ಲಗುಬಗೆ ಬಗೆ ಚಕ್ರಾಕಾರಾ ಹಾರಾಟವ ನಿಲಿಸಿದೆ ಪೂರಾ
ಸ್ವನಿವೃತ್ತವೊ ಸ್ವಾಂತವಿಚಾರಾ
ನಿಸ್ತಬ್ಧಾ ನಾಡಿಸ್ಪಂದಾ, ಈ ಅಸ್ಮಿತೆ ಶಾಂತಾ ನಿಷ್ಠಾ
ಅಧ್ಭುತ ವಿಶ್ರಾ೦ತಿ ಸ್ನಾತಾ, –
ಅವಲೋಕಿಸ ಬಂದಿದೆ ಜ್ಞಾನಾ, ವಿಜ್ಞಾನದ ಮೀರಿದ ಮಾನಾ
ಆ ಮಾನಸ ಪ್ರಮೆಗೆ ಅಮೇಯಾ
ತುಂತುಂಬಿದೆ ತೂತೂಬಿನೊಳು, ಚೈತನ್ಯದ ಘನ ಅವಕಾಶಾ
ಸತ್‌ಸಾಕ್ಷಾತ್ಕಾರ ಪ್ರಕಾಶಾ,
ಕಂಪಿಸುತಿದೆ ಸಂವಿತ್ತಾಗ್ನಿ, ಪುಲಕಿಸುತಿದೆ ತಂತಾನಾಗಿ
ಸ್ವಾಧಿಷ್ಠಾನಪ್ರಭಾವಾ,
ಭೂದೇವಿಯ ನೂತನ ಪಾತ್ರಾ ಸಮಾಧಿಯೇ ಕಾಂಚೀದಾಮಾ
ಸ್ವರ್ಗಾಂಬರ ವಸನ ಸಮಾನಾ
ಶಾಶ್ವತತೆಯ ಹೆಬ್ಬಾಗಿಲೊಳು, ದಿವ್ಯಪ್ರಭೆ ಪಕ್ಷಗಳಾದ
ನಿಯತಿಯು ಶುಭನಿದ್ರಾಮಗ್ನಾ
ಕಾಲನಿರೀಕ್ಷಾಶೂನ್ಯಾ, ಚೇತಿಸುವಾ ವಿದ್ಯುಲ್ಲೇಖಾ
ವ್ಯವರ್ತಿಕ ಮಂತ್ರೋತ್ಸೇಕಾ,
ಪಾರ್ಥಿವ ಗೃಹ ಸರ್ಜನ ಸಿದ್ದಾ ಅವಕಾಶಾವಸ್ತಿತ ದೇವಾ
ಯೋಗಾಲಂಬಿ ಸ್ವಭಾವಾ
ಚಿರಂತನದ ಪಾದಾರ್ಪಣಕೆ ಆದೇಶಾಗಮನಾರ್ತಸ್ತಾ
ಪ್ರತೀಕ್ಷಾಪೇಕ್ಷ ಬುಭೂಷಾ
ಬೀಸಿತ್ತೋವೋ ಸಂಭಾವ್ಯಾ, ಆನಂದ ರಾಗಾಲಾಪಾ
ಆನಂತ್ಯದ ಸಾಗರದಿಂದಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಟಗಾರ್‍ತಿ
Next post ವಾಗ್ದೇವಿ – ೪೯

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys