ಕೊತ ಕೊತನೆ ಕುದಿದು
ಉಕ್ಕುವ ಸಾರಿನಲಿ
ಉಪ್ಪು ಹುಳಿ ಖಾರಗಳ
ಹದ ಮಾಡಿದ ಹೊದರು
ಉಕ್ಕಿ ಬರುವ ನೊರೆಯ
ಶಾಪ ವಿಮೋಚಿತ ಗುಳ್ಳೆ
ಒಡೆದು ಸ್ರವಿಸಿದ ಕನಸು
ಮುಚ್ಚಿದ ಕದ ಬಿಚ್ಚಿದ
ಶಾಪ ಮುಕ್ತ ಅಹಲ್ಯೆಯರ
ನೋವಿನ ಹನಿಗಳಲ್ಲಿ
ಬೆಳಕಾಗಿ ಕುಡಿಯೊಡೆದು
ಹೂವಾಗಿ ಅರಳಿ ಬಿಚ್ಚಿಕೊಳ್ಳಲಿ
ಮೋಡದಲಿ ಪದರು ಪದರಾಗಿ
ಆಗಸದ ವಿಸ್ತಾರ ಪಡೆದು
ಹಬ್ಬಿ ಹಂದರವಾಗಲಿ
ಕಪ್ಪು ಮೋಡಗಳಲ್ಲಿ ಬೆರೆತು
ಮೆಲ್ಲಮೆಲ್ಲನೆ ಹನಿಯೊಡೆದು
ಮಳೆಯಾಗಿ ಸುರಿಯಲಿ ಬಿಡು
ಕರಕಲಾದ ಕನಸುಗಳ ಚಿಗುರಿಸಿ
ಬರಡಾದ ಭೂಮಿ ಹಸರಿಸಿ,
ಬೆಳಕಿನ ಹಂದರವಾಗಿ ಹಬ್ಬಿ,
ಹರಡಲಿ ಬಿಡು ಬಳ್ಳಿಯಾಗಿ
ಶಾಪ ಮುಕ್ತ ಅಹಲ್ಯೆಯ
ಅಣುಅಣುವಿನ ತುಣುಕುಗಳಾಗಿ.
*****
Related Post
ಸಣ್ಣ ಕತೆ
-
ಜುಡಾಸ್
"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
-
ಬಾಗಿಲು ತೆರೆದಿತ್ತು
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…
-
ಮಲ್ಲೇಶಿಯ ನಲ್ಲೆಯರು
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…