ಅಹಲ್ಯೆಯ ತುಣುಕುಗಳು

ಕೊತ ಕೊತನೆ ಕುದಿದು
ಉಕ್ಕುವ ಸಾರಿನಲಿ
ಉಪ್ಪು ಹುಳಿ ಖಾರಗಳ
ಹದ ಮಾಡಿದ ಹೊದರು
ಉಕ್ಕಿ ಬರುವ ನೊರೆಯ
ಶಾಪ ವಿಮೋಚಿತ ಗುಳ್ಳೆ
ಒಡೆದು ಸ್ರವಿಸಿದ ಕನಸು
ಮುಚ್ಚಿದ ಕದ ಬಿಚ್ಚಿದ
ಶಾಪ ಮುಕ್ತ ಅಹಲ್ಯೆಯರ
ನೋವಿನ ಹನಿಗಳಲ್ಲಿ
ಬೆಳಕಾಗಿ ಕುಡಿಯೊಡೆದು
ಹೂವಾಗಿ ಅರಳಿ ಬಿಚ್ಚಿಕೊಳ್ಳಲಿ
ಮೋಡದಲಿ ಪದರು ಪದರಾಗಿ
ಆಗಸದ ವಿಸ್ತಾರ ಪಡೆದು
ಹಬ್ಬಿ ಹಂದರವಾಗಲಿ
ಕಪ್ಪು ಮೋಡಗಳಲ್ಲಿ ಬೆರೆತು
ಮೆಲ್ಲಮೆಲ್ಲನೆ ಹನಿಯೊಡೆದು
ಮಳೆಯಾಗಿ ಸುರಿಯಲಿ ಬಿಡು
ಕರಕಲಾದ ಕನಸುಗಳ ಚಿಗುರಿಸಿ
ಬರಡಾದ ಭೂಮಿ ಹಸರಿಸಿ,
ಬೆಳಕಿನ ಹಂದರವಾಗಿ ಹಬ್ಬಿ,
ಹರಡಲಿ ಬಿಡು ಬಳ್ಳಿಯಾಗಿ
ಶಾಪ ಮುಕ್ತ ಅಹಲ್ಯೆಯ
ಅಣುಅಣುವಿನ ತುಣುಕುಗಳಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆನೆ ಆನೆ ಆನೆ
Next post ಮರಗಳ ಅಳಿವು

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…