Home / ಕವನ / ಕವಿತೆ / ಆನೆ ಆನೆ ಆನೆ

ಆನೆ ಆನೆ ಆನೆ

ಆನೆ ಆನೆ ಆನೆ
ಆನೆ ಬಂತೊಂದಾನೆ
ಪರಿಕಿಸಿದರದು ಭಾರೀ ಸೊನ್ನೆ

ಯೇ ಗುಲಾಮ ಹೇ ಗುಲಾಮ ಇದು ಏನು ಆನೆ
ಎಲ್ಲ ಮುಗಿದ ಮೇಲೂ ಏನು ನಿನ್ನಾನ
ಚೇಳು ಸತ್ತರೂನು ಅದರ ಕೊಂಡಿಯಾನೆ
ಹಿಂಗೆ ಯಾಕೆ ಇಲ್ಲಿ ಕೂತು ಕೊಂಡಾನೆ

ರಾಜ ಮೊದಲು ತಲೆ ಕೊಟ್ಟು ಹೋದಾನೆ
ನಂತ್ರ ಮಂತ್ರಿ ಅವ್ನ ಹಿಂದೆ ಹೊಂಟು ಹೋದಾನೆ
ರಾಣಿಯರು ನಾಶವಾದ ಅಂತಃಪುರದಾನೆ
ಊರು ಕೇರಿ ವಾಸ ವೊಸಿ ವಾಸಿಯಾದಾನೆ

ಕೋಟೆ ಗೀಟೆ ಗೋಡೆ ಗೀಡೆ ಮುರಿದು ಬಿದ್ದಾನೆ
ಒಂದಿರುಳು ಕೊತವಾಲನೆ ಓಟಕಿತ್ತಾನೆ
ಹಾಸ್ಯಗಾರ ಮೊದಲೆ ಮೊಸಳೆ ಬಾಯ್ಗೆ ಸಿಕ್ಕಾನೆ
ಯಾರಿಲ್ಲ ಈಗಲ್ಲಿ ಸುತ್ತಮುತ್ತಾನೆ

ಹಚ್ಚಡವ ಬಿಚ್ಚಿಟ್ಟು ಓಡಿದಾನೆ
ನೀನದರ ಕೆಳಗೆ ಬಚ್ಚಿಟ್ಟಾನೆ
ಯುದ್ಧ ಮುಗಿದ ಮೇಲೆದ್ದು ಬರುವಾನೆ
ಎಲ್ಲಿ ರಾಜ್ಯವೆಂದು ಘೀಳಿಟ್ಟಾನೆ

ಗುಲಾಮ ನೋಡು ಈಗ ನಿನ್ನ ಕಾಲಾನೆ
ಇನ್ನು ಯಾರೂ ನಿನ್ನ ಬಾಲವಿಲ್ಲಾನೆ
ಗೋವು ಗೋಪಾಲ ಎರಡು ನೀನಾನೆ
ನೀನೆ ತೇರು ನೀನದನು ಎಳೆವಾನೆ

ಆನೆ ಮೇಲಂಬಾರಿ ಕುಂತುಕೊಂತಾನೆ
ಕುದುರೆ ಮೇಲೆ ಏರಿದ್ಮಲೆ ರಾವುತಾನೆ
ಪಲ್ಲಕಿಯೊಳಗೂ ಹತ್ತಿ ಕೂತ ಮುದ್ದಾನೆ
ಅದ ಹೊತ್ತು ಹೊರಟಿತೋ ಮದ್ದಾನೆ

ಎಲ್ಲದರ ಮೊದಲಿದ್ದ ಶುದ್ಧಾನೆ
ಎಲ್ಲದರ ಕೊನೆ ಕಂಡ ಖುದ್ದಾನೆ
ಮೊದಲ ದುಃಖ ಕೊನೆಯ ನಗು ಆದಾನೆ
ಆಟ ಮುಗಿಸಿ ಊಟ ಮಾಡಿ ಹೋದಾನೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...